ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Bhatkal| ಅರಣ್ಯದಲ್ಲಿ ರಾಶಿ-ರಾಶಿ ಗೋಮೂಳೆ ಪತ್ತೆ ಪ್ರಕರಣ -ಇಬ್ಬರು ಆರೋಪಿಗಳ ಬಂಧನ

Bhatkal Forest Case: Huge piles of cow bones found in survey no.74 near Belne village, Bhatkal. Police arrest two accused involved in cow theft and illegal slaughter. Investigation continues.
03:41 PM Sep 17, 2025 IST | ಶುಭಸಾಗರ್
Bhatkal Forest Case: Huge piles of cow bones found in survey no.74 near Belne village, Bhatkal. Police arrest two accused involved in cow theft and illegal slaughter. Investigation continues.

Bhatkal| ಅರಣ್ಯದಲ್ಲಿ ರಾಶಿ-ರಾಶಿ ಗೋಮೂಳೆ ಪತ್ತೆ ಪ್ರಕರಣ -ಇಬ್ಬರು ಆರೋಪಿಗಳ ಬಂಧನ

Advertisement

ಕಾರವಾರ/ಭಟ್ಕಳ 17 September 2025:- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಮಗ್ದೂಂ ಕಾಲೂನಿ ಬಳಿಯ ಬೆಳ್ನೆ ಗ್ರಾಮದ ಸರ್ವೆ ನಂಬರ್ 74 ರ ಅರಣ್ಯ ಭಾಗದಲ್ಲಿ ಗೋವುಗಳ ರಾಶಿ ರಾಶಿ ಮೂಳೆಗಳು ಪತ್ತೆಯಾದ ಪ್ರಕರಣ ಸಂಬಂಧ ಭಟ್ಕಳ ಶಹರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Bhatkal| ಗೋ ಬುರುಡೆ ಪ್ರಕರಣ| ಬಯಲು ಮಾಡಿದವರೇ ಆರೋಪಿಗಳು!

ಭಟ್ಕಳದ ಚೌಥನಿಯ ಮೊಹ್ಮದ್ ರಾಯನ್ s/o ಮಹ್ಮದ್ ರಿಜವಾನ್ , ಮಗ್ದೂಂ ಕಾಲೋನಿಯ ಮಹ್ಮದ್ ಸಂವನ್ ಬಂಧಿತ ಆರೋಪಿಗಳಾಗಿದ್ದಾರೆ.

Advertisement

ಇಬ್ಬರೂ ಗೋವುಗಳನ್ನು ಕಳ್ಳತನ ಮಾಡಿ ಭಟ್ಕಳಕ್ಕೆ ತಂದು ಮಾಂಸ ಬೇರ್ಪಡಿಸಿ ನಂತರ ಮಗ್ದೂ ಕಾಲೋನಿ ಸಮೀಪದ  ಅರಣ್ಯದಲ್ಲಿ ಸುರಿಯುತಿದ್ದರು . ಇದಲ್ಲದೇ ಇನ್ನೂ ಹಲವು ಜನರು ಗೋಮಾಂಸ ಭಕ್ಷಿಸಿ ನಂತರ ಮೂಳೆಗಳನ್ನು ಅರಣ್ಯದಲ್ಲಿ ಎಸೆದುಹೋಗುತಿದ್ದರು.

ಘಟನೆ ಏನು?

ಭಟ್ಕಳದಲ್ಲಿ ಪತ್ತೆಯಾದ ಗೋವುಗಳ ಅಸ್ತಿಪಂಜರ ವೀಕ್ಷಿಸುತ್ತಿರುವ ಅಧಿಕಾರಿಗಳು

ಕೆಲವು ದಿನಗಳ ಹಿಂದೆ ಮಗ್ದೂಂ ಕಾಲೂನಿ ಬಳಿಯ ಬೆಳ್ನೆ ಗ್ರಾಮದ ಸರ್ವೆ ನಂಬರ್ 74 ರ ಅರಣ್ಯ ಭಾಗದಲ್ಲಿ ದೊಡ್ಡ ಮಟ್ಟದ ಗೋವುಗಳ ಮೂಳೆಗಳ ರಾಶಿ ಪತ್ತೆಯಾಗಿತ್ತು.

Bhatkal|ಒಂದು ವಿಡಿಯೋ ದಿಂದ ಬಯಲಾಯ್ತು ಭಟ್ಕಳ ಬುರುಡೆ ರಹಸ್ಯ| ಅರಣ್ಯಾಧೀಕಾರಿ ಇಂದ ದೂರು ದಾಖಲು

ಈ ಕುರಿತು ಅರಣ್ಯ ಇಲಾಖೆ ಅಧಿಕಾರಿ ದೂರು ನೀಡಿದ ಹಿನ್ನಲೆಯಲ್ಲಿ ಎರಡು ತಂಡ ರಚಿಸಿ ತನಿಖೆ ನಡೆಸಲಾಗಿತ್ತು. ಭಟ್ಕಳ ಶಹರ ಠಾಣೆ ಸಿಪಿಐ ದಿವಾಕರ್ ನೇತ್ರತ್ವದಲ್ಲಿ ಪಿ.ಎಸ್.ಐ ನವೀನ್ ರವರ ತಂಡದಿಂದ ಕಾರ್ಯಾಚರಣೆ ನಡೆಸಿ ಮೊದಲ ಹಂತದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

Bhatkal|ಭಟ್ಕಳದ ಅರಣ್ಯದಲ್ಲಿ ಸಿಕ್ತು ಸಾವಿರಾರು ಗೋವುಗಳ ಮೂಳೆಗಳು!ಪೊಲೀಸರು ಹೇಳಿದ್ದೇನು?

ಇನ್ನು ಈ ಅರಣ್ಯದಲ್ಲಿ ಹಲವರು ಗೋವುಗಳ ಅಸ್ಥಿಪಂಜರ ಹಾಕಿದ್ದು ,ತನಿಖೆ ಮುಂದುವರೆಸಲಾಗಿದೆ.

Advertisement
Tags :
Animal Slaughter CaseBelne Village NewsBhatkal Forest IncidentBhatkal newsCow Bones CaseCow Theft BhatkalCrime Investigation KarnatakaKarnataka Police ActionUttara Kannada News Karnataka Crime News
Advertisement
Next Article
Advertisement