ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karnataka:ಅಪ್ಸರಕೊಂಡ-ಮುಗಳಿ ಸಾಗರ ವನ್ಯಜೀವಿಧಾಮ ಸೆಪ್ಟೆಂಬರ್ ನಲ್ಲಿ ಲೋಕಾರ್ಪಣೆ.

ಬೆಂಗಳೂರು:- ಉತ್ತರ ಕನ್ನಡ ಜಿಲ್ಲೆಯ ರಮಣೀಯ ತಾಣವಾದ ಅಪ್ಸರಕೊಂಡ -ಮುಗಳಿ ಪ್ರದೇಶವನ್ನು ರಾಜ್ಯದ ಪ್ರಥಮ ಸಾಗರ ವನ್ಯಜೀವಿ ಧಾಮ ಎಂದು ಘೋಷಿಸಲಾಗಿದ್ದು, ಸೆಪ್ಟೆಂಬರ್ ನಲ್ಲಿ ವಿಧ್ಯುಕ್ತವಾಗಿ ಲೋಕಾರ್ಪಣೆ ಮಾಡುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
11:33 AM Aug 08, 2025 IST | ಶುಭಸಾಗರ್
ಬೆಂಗಳೂರು:- ಉತ್ತರ ಕನ್ನಡ ಜಿಲ್ಲೆಯ ರಮಣೀಯ ತಾಣವಾದ ಅಪ್ಸರಕೊಂಡ -ಮುಗಳಿ ಪ್ರದೇಶವನ್ನು ರಾಜ್ಯದ ಪ್ರಥಮ ಸಾಗರ ವನ್ಯಜೀವಿ ಧಾಮ ಎಂದು ಘೋಷಿಸಲಾಗಿದ್ದು, ಸೆಪ್ಟೆಂಬರ್ ನಲ್ಲಿ ವಿಧ್ಯುಕ್ತವಾಗಿ ಲೋಕಾರ್ಪಣೆ ಮಾಡುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

Karnataka:ಅಪ್ಸರಕೊಂಡ-ಮುಗಳಿ ಸಾಗರ ವನ್ಯಜೀವಿಧಾಮ ಸೆಪ್ಟೆಂಬರ್ ನಲ್ಲಿ ಲೋಕಾರ್ಪಣೆ.

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಬೆಂಗಳೂರು:- ಉತ್ತರ ಕನ್ನಡ ಜಿಲ್ಲೆಯ ರಮಣೀಯ ತಾಣವಾದ ಅಪ್ಸರಕೊಂಡ -ಮುಗಳಿ ಪ್ರದೇಶವನ್ನು ರಾಜ್ಯದ ಪ್ರಥಮ ಸಾಗರ ವನ್ಯಜೀವಿ ಧಾಮ ಎಂದು ಘೋಷಿಸಲಾಗಿದ್ದು, ಸೆಪ್ಟೆಂಬರ್ ನಲ್ಲಿ ವಿಧ್ಯುಕ್ತವಾಗಿ ಲೋಕಾರ್ಪಣೆ ಮಾಡುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಇದನ್ನೂ ಓದಿ:-Honnavar : ಮಹಿಳೆ ಸ್ನಾನ ಮಾಡುವಾಗ ಇಣುಕಿದ ಕಾಮುಕ ಪೊಲೀಸರ ವಶಕ್ಕೆ

ರಾಜ್ಯ ವನ್ಯಜೀವಿ ಮಂಡಳಿಯ 3ನೇ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಹಿಂದಿನ ಸಭೆಯಲ್ಲಿ ಅಂಗೀಕಾರ ನೀಡಲಾಗಿದ್ದ ಈ ಧಾಮಕ್ಕೆ ಸಚಿವ ಸಂಪುಟವೂ ಅನುಮೋದನೆ ನೀಡಿದ್ದು, ಅಧಿಕೃತ ಕಾರ್ಯಕ್ರಮ ಆಯೋಜಿಸಿ ಪ್ರಕಟಿಸುವುದಾಗಿ ತಿಳಿಸಿದರು.

Advertisement

ಉತ್ತರ ಕನ್ನಡದ ಮಂಕಿಯಿಂದ ಕಾಸರಕೋಡಿನವರೆಗಿನ 7.5 ಕಿ.ಮೀ. ಉದ್ದದ ವ್ಯಾಪ್ತಿಯಲ್ಲಿ ಕಡಲತೀರ ಹಾಗೂ ಸುತ್ತಮುತ್ತಲಿನ 835.02 ಹೆಕ್ಟೇರ್ ಅರಣ್ಯಪ್ರದೇಶ ಹಾಗೂ ಅರಬ್ಬೀ ಸಮುದ್ರದ 6 ಕಿ.ಮೀ. ಜಲ ಪ್ರದೇಶದಲ್ಲಿನ 5124.302 ಹೆಕ್ಟೇರ್ ಪ್ರದೇಶ ಈ ಧಾಮದ ವ್ಯಾಪ್ತಿಗೆ ಒಳಪಡಲಿದ್ದು, ಈ ಘೋಷಣೆಯಿಂದ ಸಮುದ್ರ ಸೌತೆ, ಡಾಲ್ಫಿನ್ ಸೇರಿದಂತೆ ಅಪರೂಪದ ಜಲಚರಗಳ ಸಂರಕ್ಷಣೆ ಮತ್ತು ಸಂವರ್ಧನೆ ಆಗಲಿದೆ ಎಂದು ತಿಳಿಸಿದರು.

 

ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರಿಂದು ಕರ್ನಾಟಕ ವನ್ಯಜೀವಿ ಮಂಡಳಿಯ 3ನೆ ಸ್ಥಾಯಿಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

Advertisement
Tags :
apsarakondaHonnavarmugaliNewsUttara Kannada
Advertisement
Next Article
Advertisement