ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Dandeli: ವಿದ್ಯುತ್ ಶಾಕ್ - 15. ವರ್ಷದ ಹೆಣ್ಣಾನೆ ಸಾ**

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕು ವ್ಯಾಪ್ತಿಯ ಕಾಳಿ ಹುಲಿ ರಕ್ಷಿತ ಪ್ರದೇಶದ ಕುಳಗಿ ಅರಣ್ಯ ವ್ಯಾಪ್ತಿಯ ಅಂಬಿಕಾನಗರ ರಸ್ತೆಯ ಅರಣ್ಯದಲ್ಲಿ ಹೈಟೆನಷನ್ ವಿದ್ಯುತ್ ತಂತಿ ತಗಲಿ 15 ವರ್ಷದ ಕಾಡಾನೆ ಮೃತಪಟ್ಟಿದೆ.
11:19 PM Jun 18, 2025 IST | ಶುಭಸಾಗರ್
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕು ವ್ಯಾಪ್ತಿಯ ಕಾಳಿ ಹುಲಿ ರಕ್ಷಿತ ಪ್ರದೇಶದ ಕುಳಗಿ ಅರಣ್ಯ ವ್ಯಾಪ್ತಿಯ ಅಂಬಿಕಾನಗರ ರಸ್ತೆಯ ಅರಣ್ಯದಲ್ಲಿ ಹೈಟೆನಷನ್ ವಿದ್ಯುತ್ ತಂತಿ ತಗಲಿ 15 ವರ್ಷದ ಕಾಡಾನೆ ಮೃತಪಟ್ಟಿದೆ.

ವಿದ್ಯುತ್ ಶಾಕ್ - 15. ವರ್ಷದ ಹೆಣ್ಣಾನೆ ಸಾವು

Advertisement

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ (dandeli) ತಾಲೂಕು ವ್ಯಾಪ್ತಿಯ ಕಾಳಿ ಹುಲಿ ರಕ್ಷಿತ ಪ್ರದೇಶದ ಕುಳಗಿ ಅರಣ್ಯ ವ್ಯಾಪ್ತಿಯ ಅಂಬಿಕಾನಗರ ರಸ್ತೆಯ ಅರಣ್ಯದಲ್ಲಿ ಹೈಟೆನಷನ್ ವಿದ್ಯುತ್ ತಂತಿ ತಗಲಿ 15 ವರ್ಷದ ಕಾಡಾನೆ ಮೃತಪಟ್ಟಿದೆ.

ಕುಳಗಿ ವನ್ಯಜೀವಿ ಇಲಾಖೆಯ ಸಿಬ್ಬಂದಿ ಮಂಗಳವಾರ ಸಂಜೆ ಅರಣ್ಯ ಪ್ರದೇಶದಲ್ಲಿ ಕರ್ತವ್ಯ ನಿಮಿತ್ತ ತೆರಳಿದ್ದ ಸಂದರ್ಭದಲ್ಲಿ ಆನೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

15 ವರ್ಷದ ಹೆಣ್ಣಾನೆ ಆಹಾರ ಅರಸಿ ಹೋಗುವಾಗ ಅಂಬಿಕಾ ನಗರದಿಂದ ಗೋವಾ ಭಾಗಕ್ಕೆ ಹೋಗುವ 250 ಮೆಗಾ ವ್ಯಾಟ್ ವಿದ್ಯತ್ ತಂತಿಯ ಪಕ್ಕದಲ್ಲಿದ್ದ ಸಾಗುವಾನಿ ಮರದ ಎಲೆಗಳನ್ನು ತಿನ್ನಲು ಹೋಗಿದ್ದು ಈ ವೇಳೆ ಮರವನ್ನು ಬಗ್ಗಿಸಿದೆ. ಮರದ ಕೊಂಬೆಗಳು ವಿದ್ಯುತ್ ತಂತಿಗೆ ತಗಲಿ ಆನೆಯು ವಿದ್ಯುತ್ ಶಾಕ್ ನಿಂದ ಮೃತಪಟ್ಟಿದೆ.

Advertisement

ಇನ್ನು ಘಟನಾ ಸ್ಥಳಕ್ಕೆ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳು ಆಗಮಿಸಿ ಕೋರ್ಟ ಅನುಮತಿ ಪಡೆದು ಆನೆಯ ಪೋಸ್ಟ ಮಾಟಮ್ ನಡೆಸಿ ನಂತರ ಅಲ್ಲಿಯೇ ಶವ ಸಂಸ್ಕಾರ ನಡೆಸಿದ್ದಾರೆ.

ಕುಳಗಿ ಅರಣ್ಯವ್ಯಾಪ್ತಿಯಲ್ಲಿ 35 ಕ್ಕೂ ಹೆಚ್ಚು ಆನೆಗಳಿದ್ದು ಇದೇ ಭಾಗದಲ್ಲಿ ಆಹಾರ ಅರಸಿ ಸುತ್ತಾಡುತ್ತವೆ . ಇನ್ನು ಅಂಬಿಕಾ ನಗರದಲ್ಲಿ ವಿದ್ಯುತ್ ಉತ್ಪಾದನೆ ಮಾಡಿ ಇಲ್ಲಿನ ವಿದ್ಯುತ್ ನನ್ನು ಗೋವಾ ರಾಜ್ಯಕ್ಕೆ ವಿದ್ಯುತ್ ತಂತಿಗಳ ಮೂಲಕ ಕಳುಹಿಸಲಾಗುತ್ತದೆ. ಈ ತಂತಿಗಳು ಕಾಡಿನ ಮದ್ಯೆ ಹಾದುಹೋಗಿದ್ದು ಕೆಲವು ಕಡೆ ಜೋತುಬಿದ್ದು ಕಾಡಿನ ಮರಗಳ ಭಾಗದಲ್ಲಿ ತಾಗುತಿದ್ದು ,ಇಂತಹ ಮರಗಳ ರೆಂಬೆಯನ್ನು ಕಡಿಯಲಾಗಿತ್ತದೆ.

ಇದನ್ನೂ ಓದಿ:-Dandeli:ಪ್ರಧಾನಿ ಮೋದಿ ಅವಹೇಳನಕಾರಿ ಪೋಸ್ಟ್ -ದಾಂಡೇಲಿ ವ್ಯಕ್ತಿ ಬಂಧನ

ಆದರೇ ಈ ಭಾಗದಲ್ಲಿ ವಿದ್ಯುತ್ ತಂತಿಯ ಕೆಳಭಾಗದಲ್ಲಿ ಮಾತ್ರ ಮರದ ಕೊಂಬೆಗಳನ್ನು ಕಡಿಯಲಾಗಿದ್ದು ಅಕ್ಕ ಪಕ್ಕದಲ್ಲಿ ಇರಿವ ಮರದ ಟೊಂಗೆಗಳನ್ನು ಕಡಿಯದೇ ಬಿಡಲಾಗಿದೆ. ಹೀಗಾಗಿ ಕಾಡಿನಲ್ಲಿ ಇರುವ ಪ್ರಾಣಿಗಳು ಮರವೇರಿದಾಗ ಅಥವಾ ಮರಗಳನ್ನು ಮುಟ್ಟಿದಾಗ ವಿದ್ಯುತ್ ಶಾಕ್ ಗೆ ಬಳಗಾಗಿ ಸಾವು ಕಾಣುತ್ತಿವೆ.

Advertisement
Tags :
Dandelielectric shockelephantKarnatakaNewsUttara KannadaWildlife
Advertisement
Next Article
Advertisement