Sigandur :ಸಿಗಂದೂರು ಸೇತುವೆ ಉದ್ಘಾಟನೆ ದಿನಾಂಕ ಫಿಕ್ಸ್ |ಇಲ್ಲಿದೆ ವಿಶೇಷ
Sigandur :ಸಿಗಂದೂರು ಸೇತುವೆ ಉದ್ಘಾಟನೆ ದಿನಾಂಕ ಫಿಕ್ಸ್ |ಇಲ್ಲಿದೆ ವಿಶೇಷ
Shivamigga:-ಶಿವಮೊಗ್ಗ ಜಿಲ್ಲೆಯ ಸಾಗರ (sagar) ತಾಲೂಕಿನ ತುಂಬ್ರಿ ಭಾಗದ ಹಲವು ವರ್ಷದ ಕನಸು ಇದೀಗ ನನಸಾಗುವ ದಿನ ಹತ್ತಿರ ಬಂದಿದೆ.
ಶರಾವತಿ ನದಿ ವಿದ್ಯುತ್ ಯೋಜನೆಗಾಗಿ ತಮ್ಮ ನೆಲವನ್ನ ದಾರೆ ಎರೆದು ಪ್ರತಿ ದಿನ ನರಕವನ್ನೇ ನೋಡಿದ್ದ ತುಂಬ್ರಿ ,ಬ್ಯಾಕೋಡಿನ ಜನ ತಮ್ಮೂರನ್ನ ಬೇರ್ಪೆಡಿಸಿದ್ದ ಶರಾವತಿ ಹಿನ್ನೀರಿನಿಂದ ನಗರ ಪ್ರದೇಶದ ಸಂಪರ್ಕ ಪಡೆಯಲು ಒಂದು ಲಾಂಚ್ ನಿಂದ ಹಿಡಿದು ಮೂಲಭೂತ ಸೌಕರ್ಯಕ್ಕೂ ಹೋರಾಟ ಮಾಡಿದರು.
ಇದನ್ನೂ ಓದಿ:-Sagar: ಕೈ ನಾಯಕ ಟಿಪ್ ಟಾಪ್ ಬಷೀರ್ ಮನೆ ಮೇಲೆ ಇಡಿ ದಾಳಿ
ಸಿಗಂದೂರು ಶ್ರೀ ಕ್ಷೇತ್ರ ಪ್ರವದ್ದಮಾನಕ್ಕೆ ಬರುವ ವರೆಗೂ ಈ ಊರು ಕತ್ತಲಲ್ಲೇ ಇತ್ತು. ಮುಗ್ದ ಹಸು ಗೂಸಿನ ಮನಸ್ಸಿನ ಜನ ಈ ದೇಶಕ್ಕಾಗಿ ತಮ್ಮ ಸರ್ವಸ್ವವನ್ನೂ ದಾರೆ ಎರೆದು ನೋವು ಉಂಡಿದ್ದರು.
ತಮ್ಮೂರಿಗೊಂದು ಸೇತುವೆ ಆಗಬೇಕು ಎಂದು ಪ್ರತಿಭಟನೆ , ಪಾದಯಾತ್ರೆ ಹೋರಾಟ ನಿರಂತರ ಸಾಗಿದವು. ಸ್ಥಳೀಯರಾದ ಪ್ರಸನ್ನ ಕೆರೆಕೈ ತಮ್ಮೂರಿನ ಹೋರಾಟಕ್ಕೆ ಬಲ ತುಂಬಿ ರಾಜಕೀಯ ನಾಯಕರ ಕಣ್ಣು ಊರಿನತ್ತ ಸೆಳೆಯಲು ಯಶಸ್ವಿಯಾದರು.

ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರ ಸಹಕಾರ, ಸಂಸದ ರಾಘವೇಂದ್ರ ರವರ ಆಸಕ್ತಿ ಜೊತೆಗೂಡಿ ಊರಿನವರಿಗೆ ದೇಶದ ಅತೀ ದೊಡ್ಡ ಸೇತುವೆಯ ಪಟ್ಟಿಗೆ ಸೇರಿದ ಸಿಗಂದೂರು ಸೇತುವೆ ಉದ್ಘಾಟನೆ ಕಾಣಲು ಸಜ್ಜಾಗಿದೆ.
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ( Prime Minister Narendra Modi) ರವರು ಈ ಸೇತುವೆ ಉದ್ಘಾಟನೆ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೇ ಅದು ಸಾಧ್ಯವಾಗಲಿಲ್ಲ. ಇದೀಗ ಕೇಂದ್ರ ಸಚಿವ ಗಡ್ಕರಿಯವರು ಈ ಸೇತುವೆಯನ್ನು ಉದ್ಘಾಟನೆ ನೆರವೇರಿದಲಿದ್ದು ಸಂಸದ ರಾಘವೇಂದ್ರ ರವರು ಸಚಿವರನ್ನು ಭೇಟಿಯಾಗಿ ದಿನಾಂಕ ನಿಗದಿ ಮಾಡಿದ್ದಾರೆ.
ಸೇತುವೆಯ ದೃಢತೆ ಪರೀಕ್ಷೆ ಮುಗುದಿದ್ದು ಎರಡನೇ ಹಂತದ ಪರೀಕ್ಷೆಯೂ ಸಂಪೂರ್ಣವಾಗಲಿದ್ದು ಈ ಹಿನ್ನಲೆಯಲ್ಲಿ ಜುಲೈ 14 ರಂದು ಸೇತುವೆ ಉದ್ಘಾಟನೆಗೆ ದಿನಾಂಕ ನಿಗದಿ ಮಾಡಲಾಗಿದೆ.
ನವೀನ ತಂತ್ರಜ್ಞಾನ ಹಾಗೂ ಆಧುನಿಕ ತಾಂತ್ರಿಕ ವ್ಯವಸ್ಥೆಯಿಂದ ಅತ್ಯಂತ ಅಚ್ಚುಕಟ್ಟಾಗಿ ಸುಮಾರು ₹430 ಕೋಟಿ ಅನುದಾನದಲ್ಲಿ ಸೇತುವೆ ನಿರ್ಮಿಸಲಾಗಿದೆ. ರಾಜ್ಯದ ಅತಿ ಉದ್ದದ 2.25 ಕಿ.ಮೀ ಕೇಬಲ್ ಆಧಾರಿತ ಸೇತುವೆ ಕಾಮಗಾರಿ ಇದಾಗಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದ್ದಾರೆ.
ಈ ಸೇತುವೆಯು 2.25 ಕಿ.ಮೀ ಉದ್ದವಿದ್ದು ,1.5 ಮೀಟರ್ ಉದ್ದದ ವಾಕಿಂಗ್ ಪಾತ್ ಇದೆ. ಈ ಸೇತುವೆ ಎರಡು ಭಾಗದ ರಸ್ತೆ ಹೊಂದಿದೆ.ಹತ್ತು ವರ್ಷಗಳ ಕಾಲ ಸೇತುವೆ ನಿರ್ಮಿಸಿದ ಕಂಪನಿಯೇ ನಿರ್ವಹಣೆ ಕಾರ್ಯ ನೆಡೆಸಲಿದೆ.ಪ್ರತಿ ಆರು ತಿಂಗಳಿಗೆ ಇದರ ಮೆಂಟೆನೆನ್ಸ್ ಮಾಡುವ ಅವಷ್ಯವಿದೆ. ಇದರ ದೃಢತೆ ನೂರು ವರ್ಷಗಳ ವರೆಗೆ ಬಾಳಿಕೆ ಬರುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ಹೇಳಿದೆ.