For the best experience, open
https://m.kannadavani.news
on your mobile browser.
Advertisement

Honnavar: ಜಿಲ್ಲಾ ಉಸ್ತುವಾರಿ ಸಚಿವರ ಊರಲ್ಲಿ ಸೇತುವೆ ಇಲ್ಲದೇ ಯುವಕರೇ ಕಟ್ಟಿದ್ರು ಸಂಕದ ಸೇತುವೆ! ವಿಡಿಯೋ ಹಿಂದಿನ ಅಸಲಿ ಕತೆ ಏನು ಗೊತ್ತಾ?

ಕಾರವಾರ :- ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರ ಹೊನ್ನಾವರದ(honnavar) ಚಿತ್ತಾರ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹಿಂದುಳಿದ ಗ್ರಾಮವಾದ ಹಡಿಕಲ್ ಗ್ರಾಮದಲ್ಲಿ ಸೇತುವೆ ಇಲ್ಲದೇ ಯುವHonnavar: ಜಿಲ್ಲಾ ಉಸ್ತುವಾರಿ ಸಚಿವರ ಊರಲ್ಲಿ ಸೇತುವೆ ಇಲ್ಲದೇ ಯುವಕರೇ ಕಟ್ಟಿದ್ರು ಸಂಕದ ಸೇತುವೆ! ವಿಡಿಯೋ ಹಿಂದಿನ ಅಸಲಿ ಕತೆ ಏನು ಗೊತ್ತಾ
11:03 PM Jun 19, 2025 IST | ಶುಭಸಾಗರ್
ಕಾರವಾರ :- ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರ ಹೊನ್ನಾವರದ(honnavar) ಚಿತ್ತಾರ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹಿಂದುಳಿದ ಗ್ರಾಮವಾದ ಹಡಿಕಲ್ ಗ್ರಾಮದಲ್ಲಿ ಸೇತುವೆ ಇಲ್ಲದೇ ಯುವHonnavar: ಜಿಲ್ಲಾ ಉಸ್ತುವಾರಿ ಸಚಿವರ ಊರಲ್ಲಿ ಸೇತುವೆ ಇಲ್ಲದೇ ಯುವಕರೇ ಕಟ್ಟಿದ್ರು ಸಂಕದ ಸೇತುವೆ! ವಿಡಿಯೋ ಹಿಂದಿನ ಅಸಲಿ ಕತೆ ಏನು ಗೊತ್ತಾ
honnavar  ಜಿಲ್ಲಾ ಉಸ್ತುವಾರಿ ಸಚಿವರ ಊರಲ್ಲಿ ಸೇತುವೆ ಇಲ್ಲದೇ ಯುವಕರೇ ಕಟ್ಟಿದ್ರು ಸಂಕದ ಸೇತುವೆ  ವಿಡಿಯೋ ಹಿಂದಿನ ಅಸಲಿ ಕತೆ ಏನು ಗೊತ್ತಾ
ತಪ್ಪು ಗ್ರಹಿಕೆಗೆ ಆಸ್ಪದವಾದ ವಿಡಿಯೋ ತುಣುಕಿನ ಚಿತ್ರ

Honnavar: ಜಿಲ್ಲಾ ಉಸ್ತುವಾರಿ ಸಚಿವರ ಊರಲ್ಲಿ ಸೇತುವೆ ಇಲ್ಲದೇ ಯುವಕರೇ ಕಟ್ಟಿದ್ರು ಸಂಕದ ಸೇತುವೆ! ವಿಡಿಯೋ ಹಿಂದಿನ ಅಸಲಿ ಕತೆ ಏನು ಗೊತ್ತಾ?

Advertisement

ಕಾರವಾರ :- ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರ ಹೊನ್ನಾವರದ(honnavar) ಚಿತ್ತಾರ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹಿಂದುಳಿದ ಗ್ರಾಮವಾದ ಹಡಿಕಲ್ ಗ್ರಾಮದಲ್ಲಿ ಸೇತುವೆ ಇಲ್ಲದೇ ಯುವಕರು ತಮ್ಮ ಮನೆಗೆ ತೆರಳಲು ಅಡಿಕೆ ಮರವನ್ನು ಉಪಯೋಗಿಸಿ ಸಂಕ ನಿರ್ಮಿಸಿದ ವಿಡಿಯೋ ಹೊನ್ನಾವರದ ವಿಠಲ್ ನಾಯ್ಕ ಎಂಬುವವರು ಎರಡು ದಿನದ ಹಿಂದೆ ಷೇರ್ ಮಾಡಿದ್ದು ಸಖತ್ ವೈರಲ್ ಆಗಿದೆ.

ತಪ್ಪು ಗ್ರಹಿಕೆಗೆ ಆಸ್ಪದವಾದ ವಿಡಿಯೋ ತುಣುಕಿನ ಚಿತ್ರ

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರ ಕ್ಷೇತ್ರದಲ್ಲಿ ಹೀಗೂ ಇದೆಯಾ ಎಂಬ ಪ್ರಶ್ನೆ ಏಳುವಂತೆ ಮಾಡಿತ್ತು. ಈ ವಿಡಿಯೋದ ಅಸಲಿಯತ್ತನ್ನು ತಿಳಿಯಲು fact check ಮಾಡಿದಾಗ ಈ ವಿಡಿಯೋ ಹಳೆಯ ವಿಡಿಯೋ ಆಗಿದ್ದು 2020-21 ನೇ ಸಾಲಿನಲ್ಲಿ ಈ ಊರಿನ ಯುವಕರ ಮನೆಗೆ ಹೋಗುವ ರಸ್ತೆಗೆ ಸೇತುವೆ ನಿರ್ಮಾಣಮಾಡಲಾಗಿದೆ.

ಚಿತ್ತಾರ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹಡಿಕಲ್ ನಲ್ಲಿ ಸೇತುವೆ ಇರುವ ದೃಶ್ಯ

ಇನ್ನು ಈ ವಿಡಿಯೋ ಹಂಚಿಕೊಂಡ ವಿಠಲ್ ನಾಯ್ಕ ರವರು ತಮ್ಮ ಮನೆಗೆ ಬ್ರಿಡ್ಜ್ ಇದ್ದರೂ ಹಳೆಯ ವಿಡಿಯೋ ವನ್ನು ಹಂಚಿಕೊಂಡಿದ್ದು ಹಿಂದೆ ಈ ಗ್ರಾಮದಲ್ಲಿ  ಕೇವಲ 15 ಮನೆಗಳಿಗಾಗಿ ಲಕ್ಷಗಟ್ಟಲೇ ಕರ್ಚು ಮಾಡಿ ಸೇತುವೆ ಮಾಡಲಾಗಿದೆ.

ವೈರಲ್ ಆಯ್ತು ವಿಡಿಯೋ ! ಅಧಿಕಾರಿಗಳಿಗೂ ತಂತು ಸಂಕಟ!

ಇನ್ನು ಈ ವಿಡಿಯೋ ಎರಡು ದಿನದಲ್ಲಿ ನಲವತ್ತು ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಇದಲ್ಲದೇ ಈ ವಿಡಿಯೋ ಜಿಲ್ಲಾಧಿಕಾರಿಗಳ ಕಚೇರಿಗೂ ತಲುಪಿದ್ದು ,ಕುದ್ದು ಜಿಲ್ಲಾಧಿಕಾರಿಗಳು ಇದರ ಬಗ್ಗೆ ಮಾಹಿತಿ ಕಲೆಹಾಕಲು ಸೂಚಿಸಿದ್ದರು.ಗ್ರಾಮಕ್ಕೆ ಆಗಮಿಸಿದ ಅಧಿಕಾರಿಗಳು ಮಾಹಿತಿ ಕಲೆಹಾಕಿ ವರದಿಯನ್ನು ಸಲ್ಲಿಸಿದ್ದರು. ಆದ್ರೆ ಈ ವಿಡಿಯೋ ಕೇವಲ ರೀಲ್ಸ್ ಹುಚ್ಚಿಗೆ ಮಾಡಿದ್ದು ತಮ್ಮ ಮನೆಗೆ ತಕ್ಷಣದಲ್ಲಿ ಹೋಗಲು ಹಳ್ಳಕ್ಕೆ ಸಂಕ ಹಾಕಿಕೊಂಡಿದ್ದು ಬೆಳಕಿಗೆ ಬಂದಿದ್ದು ನೈಜ ವಿಷಯ ತಿಳಿದ ಅಧಿಕಾರಿಗಳೂ ಸುಸ್ತಾಗಿದ್ದು ಒಂದು ವಿಡಿಯೋ ನೈಜ ವಿಷಯವನ್ನು ಹಾಕದೇ ಶೇರ್ ಮಾಡುವ ಮೂಲಕ ಅಧಿಕಾರಿಗಳ ಸಮಯ ವ್ಯರ್ಥ ಮಾಡಿದ್ದಲ್ಲದೇ ನೋಡುಗರ ಗ್ರಹಿಕೆಯನ್ನು ಸಹ ತಪ್ಪು ದಾರಿಗೆ ಎಳೆದಿದೆ.

ಇದನ್ನೂ ಓದಿ:-Honnavar: ಅಕ್ರಮ ಮರಳುಗಾರಿಕೆ ಕಣ್ಣು,ಕಿವಿ ಮುಚ್ಚಿ ಕುಳಿತ ಜಿಲ್ಲಾಡಳಿತ !ಹಸಿರು ಪೀಠದ ಆದೇಶಕ್ಕೆ ಕಿಮ್ಮತ್ತು ಇಲ್ಲ.

ಅತ್ಯಂತ ಕಡಿಮೆ ದರದಲ್ಲಿ ಎಲ್ಲಾ ಅಗತ್ಯ ವಸ್ತುಗಳು ಲಭ್ಯ- ಕಾರವಾರ ಬಸ್ ನಿಲ್ದಾಣದ ಹಿಂಭಾಗ ಬ್ರಾಹ್ಮಣ ಗಲ್ಲಿ ,ಕಾರವಾರ.
ಪ್ರಕೃತಿ ಮೆಡಿಕಲ್ ,ಕಾರವಾರ.
Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ