For the best experience, open
https://m.kannadavani.news
on your mobile browser.
Advertisement

Murdeshwar : ಮುರುಡೇಶ್ವರ ದಲ್ಲಿ ಹೊರ ರಾಜ್ಯದ ಮಹಿಳೆ ತಂದು ವೇಶ್ಯಾವಾಟಿಕೆ -ಮೂರು ಜನರ ಬಂಧನ.

ಕಾರವಾರ :- ಮುರುಡೇಶ್ವರ (Murdeshwar) ದಲ್ಲಿ ವೇಶ್ಯಾ ವಾಟಿಕೆ  ನಡೆಸುತಿದ್ದ ಲಾಡ್ಜ್ ಮೇಲೆ  ಪೊಲೀಸರ ದಾಳಿ ನಡೆಸಿ ಕಲ್ಕತ್ತಾ ಮೂಲದ ಮಹಿಳೆಯರ ರಕ್ಷಣೆ ಮಾಡಲಾಗಿದೆ.
08:58 PM Jun 25, 2025 IST | ಶುಭಸಾಗರ್
ಕಾರವಾರ :- ಮುರುಡೇಶ್ವರ (Murdeshwar) ದಲ್ಲಿ ವೇಶ್ಯಾ ವಾಟಿಕೆ  ನಡೆಸುತಿದ್ದ ಲಾಡ್ಜ್ ಮೇಲೆ  ಪೊಲೀಸರ ದಾಳಿ ನಡೆಸಿ ಕಲ್ಕತ್ತಾ ಮೂಲದ ಮಹಿಳೆಯರ ರಕ್ಷಣೆ ಮಾಡಲಾಗಿದೆ.
murdeshwar   ಮುರುಡೇಶ್ವರ ದಲ್ಲಿ ಹೊರ ರಾಜ್ಯದ ಮಹಿಳೆ ತಂದು ವೇಶ್ಯಾವಾಟಿಕೆ  ಮೂರು ಜನರ ಬಂಧನ

Murdeshwar : ಮುರುಡೇಶ್ವರ ದಲ್ಲಿ ಹೊರ ರಾಜ್ಯದ ಮಹಿಳೆ ತಂದು ವೇಶ್ಯಾವಾಟಿಕೆ -ಮೂರು ಜನರ ಬಂಧನ

Advertisement

ಕಾರವಾರ :- ಮುರುಡೇಶ್ವರ (Murdeshwar) ದಲ್ಲಿ ವೇಶ್ಯಾ ವಾಟಿಕೆ  ನಡೆಸುತಿದ್ದ ಲಾಡ್ಜ್ ಮೇಲೆ  ಪೊಲೀಸರ ದಾಳಿ ನಡೆಸಿ ಕಲ್ಕತ್ತಾ ಮೂಲದ ಮಹಿಳೆಯರ ರಕ್ಷಣೆ ಮಾಡಲಾಗಿದೆ.

ಲಾಡ್ಜ್ ಮಾಲೀಕ ಸೇರಿ ಮೂರು ಜನರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.

ಮುರುಡೇಶ್ವರ ದ ನಾಯ್ಕ ರೆಸಿಡೆನ್ಸಿ ಮೇಲೆ ದಾಳಿ ಮಾಡಿದ ಸಿ.ಪಿಐ ಸಂತೋಷ್ ಕಾಯ್ಕಿಣಿ ತಂಡ ಸಿದ್ದಾಪುರದ ಗಣೇಶ್ ನಾಯ್ಕ, ಮುರುಡೇಶ್ವರದ ನಾಯ್ಕ ರೆಸಿಡೆನ್ಸಿ ಮಾಲೀಕ ವಿನಾಯಕ ಮಹಾದೇವ್ ನಾಯ್ಕ,   ರೂಮ್ ಬಾಯ್ ಆಕಾಶ್ ಅನಿಲ್ ಎಂಬುವವರ ಬಂಧನ ಮಾಡಿದ್ದಾರೆ.

ಇದನ್ನೂ ಓದಿ:-Murdeshwar ದೇವಾಲಯದ ಗೋಪುರದ ತುತ್ತ ತುದಿಗೆ ನಿಂತು ಪ್ರವಾಸಿಗ ಮಾಡಿದ್ದೇನು ಗೊತ್ತಾ?

ಬಂಧಿತರಿಂದ 4630 ನಗದು, ಎರಡು ಮೊಬೈಲ್, ಕಾಂಡಮ್ ಪ್ಯಾಕೇಟ್ ಗಳು, ಒಂದು ಬೈಕ್ ವಶಕ್ಕೆ ಪಡೆಯಲಾಗಿದ್ದು ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಪೊಲೀಸರ FIR ನಲ್ಲಿ ಏನಿದೆ?

ಈ ದಿವಸ ದಿನಾಂಕ : 25-06-2025 ರಂದು  ಶ್ರೀ ಸಂತೋಷ್ ಕಾಯ್ಕಿಣಿ  ಪೊಲೀಸ ವೃತ್ತ ನಿರೀಕ್ಷಕರು  ಮುರುಡೇಶ್ವರ ವೃತ್ತ  ಆದ ನನಗೆ ಮುರುಡೇಶ್ವರದ  ಜನತಾ ವಿದ್ಯಾಲಯದ ಎದುರಿಗೆ ಇರುವ ನಾಯಕ್ ರೆಸಿಡೆನ್ಸಿ ಲಾಡ್ಜ್ ಒಂದರಲ್ಲಿ ಒಬ್ಬ ಮಹಿಳೆಯನ್ನು ಇಟ್ಟು ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಅಂತ ಖಚಿತ ಮಾಹಿತಿ ಬಂದಂತೆ  ಹನಮಂತ ಬಿರಾದಾರ ಪಿ.ಎಸ್ .ಐ ಮುರ್ಡೇಶ್ವರ ಠಾಣೆ ಮತ್ತು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ಹೋಗಿ ದಾಳಿ ಮಾಡಲಾಗಿ  ಕಲ್ಕತ್ತಾ ಮೂಲದ .   ಮಹಿಳೆಯನ್ನು ಬೆಂಗಳೂರು  ನಿಂದ ದುರ್ವ್ಯಾಪರಕ್ಕಾಗಿ ಗಣೇಶ್ ನಾಯ್ಕ್ ಸಾ- ಸಿದ್ದಾಪುರ   ಮುರುಡೇಶ್ವರಕ್ಕೆ   ಮಹಿಳೆಯ ಆರ್ಥಿಕ ಪರಿಸ್ಥಿತಿಯನ್ನು ಬಳಕೆ ಮಾಡಿಕೊಂಡು ಹಣದ ಆಮಿಷವೊಡ್ಡಿ ವೇಶ್ಯಾವಾಟಿಕೆ ನಡೆಸಲು ತಂದು  “ Naik Residency” ಲಾಡ್ಜ್ ಗೆ ತಂದು ಬಿಟ್ಟಿದ್ದರಿಂದ ಆರೋಪಿಗಳಾದ :-

1.ಗಣೇಶ್ ನಾಯ್ಕ್ ಸಾ- ಸಿದ್ದಾಪುರ

 2. ವಿನಾಯಕ ಮಹಾದೇವ್ ನಾಯ್ಕ್ ಸಾ ಮುರ್ಡೇಶ್ವರ ( ನಾಯ್ಕ್ ಲಾಡ್ಜ್ ಮಾಲೀಕ)

3. ಆಕಾಶ್ ಅನಿಲ್ ಮುರ್ಡೇಶ್ವರ ( ರೂಮ್ ಬಾಯ್)

ಮೇಲೆ ಮುರ್ಡೇಶ್ವರ ಠಾಣೆ ಗುನ್ನ ನಂ : 67/2025 u/s 143 (1)(2) , 144(2) rw 3(5) BNS -2023 & 3,4 Immoral Traffic( prevention) Act -1956 ಪ್ರಕಾರ ಪ್ರಕರಣ ದಾಕಲಿಸಿ ಕೃತ್ಯಕ್ಕೆ ಬಳಸಿದ ನಗದು.     -  4630 ₹,ಮೊಬೈಲ್ ಫೋನ್ - 2, ಕಾಂಡೊಮ್ ಪ್ಯಾಕೆಟ್ - 10,ಲಾಡ್ಜ್ ರಿಜಿಸ್ಟರ್ -1ಮೋಟಾರ್ ಸೈಕಲ್ -1.

ಈ ರೀತಿಯಾಗಿ ಇದ್ದು  ಪ್ರಕರಣದ ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಂಡು ನೊಂದ ಮಹಿಳೆಯನ್ನು ಸಾಂತ್ವನ ಕೇಂದ್ರ ಭಟ್ಕಳಕ್ಕೆ ಬಿಡಲಾಗಿರುತ್ತದೆ.

ಪ್ರಕೃತಿ ಮೆಡಿಕಲ್ ,ಕಾರವಾರ.
Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ