Sirsi :ನಾಲ್ಕು ದಿನವಾದರೂ ಸಿಗದ ಪವನ್ NDRF ತಂಡದಿಂದ ಶೋಧ ಕಾರ್ಯ
Sirsi :ನಾಲ್ಕು ದಿನವಾದರೂ ಸಿಗದ ಪವನ್ NDRF ತಂಡದಿಂದ ಶೋಧ ಕಾರ್ಯ
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಶಿರಸಿ (sirsi)ತಾಲೂಕಿನ ಮತ್ತಿಘಟ್ಟ ಸಮೀಪದ ಜೋಗನ ಹಕ್ಕಲು ಜಲಪಾತದಲ್ಲಿ ನಾಲ್ಕು ದಿನದ ಹಿಂದೆ ಜಲಪಾತ ವೀಕ್ಷಣೆಗೆ ಗೆಳೆಯರೊಂದಿಗೆ ತೆರಳಿದ್ದ ಸೋಮನಳ್ಳಿ ಗ್ರಾಮದ ಉಂಬಳೆ ಕೊಪ್ಪದ ಯುವಕ ಪವನ್ (24) ಕಾಲುಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಹೋಗಿ ಕಾಣೆಯಾಗಿದ್ದರು.

ಸತತ ನಾಲ್ಕು ದಿನದಿಂದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಶೋಧ ಕಾರ್ಯ ನಡೆಸಿದರೂ ಅಬ್ಬರದ ಮಳೆಯಲ್ಲಿ ಹುಡುಕಾಟ ನಡೆಸಲು ವಿಫಲವಾದ ಹಿನ್ನಲೆಯಲ್ಲಿ ಇದೀಗ ಎನ್.ಡಿ.ಆರ್.ಎಫ್ ತಂಡ ಶೋಧ ಕಾರ್ಯ ನಡೆಸಲು ತೆರಳಿದೆ.
ಇದನ್ನೂ ಓದಿ:-Sirsi :ಕಾಲುಜಾರಿ ಬಿದ್ದು ಜೋಗನ ಹಕ್ಕಲು ಜಲಪಾತದಲ್ಲಿ ಯುವಕ ನಾಪತ್ತೆ
28 ಜನರಿರುವ ಎನ್.ಡಿ.ಆರ್. ಎಫ್ (NDRF) ತಂಡ ಜಲಪಾತದಲ್ಲಿ ಭೋರ್ಗರೆಯುತ್ತಿರುವ ನೀರಿನಲ್ಲೇ ಶೋಧ ಕಾರ್ಯ ಕೈಗೊಂಡಿದ್ದಾರೆ. ಹೆಚ್ಚಿನ ನೀರು ಇರುವುದರಿಂದ ಶೋಧ ನಡೆಸಲು ಅಡೆತಡೆಯಾಗುತಿದ್ದು ಇವುಗಳ ನಡುವೆಯೇ ಪವನ್ ಗಾಗಿ ಎನ್.ಡಿ.ಆರ್.ಎಫ್ ತಂಡ ಕಾರ್ಯಾಚರಣೆ ನಡೆಸುತ್ತಿದೆ.