Sirsi | RSS ಮತ್ತು ಹಿಂದೂ ಸಂಘಟನೆ ಬಗ್ಗೆ WhatsApp ನಲ್ಲಿ ಅವಹೇಳನ ಸ್ಟೇಟಸ್ ಹಾಕಿದವ ಕಂಬಿ ಹಿಂದೆ
Sirsi | RSS ಮತ್ತು ಹಿಂದೂ ಸಂಘಟನೆ ಬಗ್ಗೆ WhatsApp ನಲ್ಲಿ ಅವಹೇಳನ ಸ್ಟೇಟಸ್ ಹಾಕಿದವ ಕಂಬಿ ಹಿಂದೆ
ಕಾರವಾರ /ಬನವಾಸಿ :- RSS ಮತ್ತು ಹಿಂದೂ ಸಂಘಟನೆಗಳನ್ನು ಅವಹೇಳನ ಮಾಡಿ ತನ್ನ ವಾಟ್ಸ್ ಅಪ್ (whatsapp ) ಸ್ಟೇಟಸ್ ಹಾಕಿಕೊಂಡಿದ್ದ ಮತಾಂದನಿಗೆ ಬನವಾಸಿ (banavasi) ಪೊಲೀಸರು ಪ್ರಕರಣ ದಾಖಲಿಸಿ ಜೈಲಿಗಟ್ಟುವ ಮೂಲಕ ಬುದ್ದಿ ಕಲಿಸಿದ್ದಾರೆ.
ಮತಾಂದತೆ ತಲೆಗೇರಿಸಿಕೊಂಡಿದ್ದ ಶಿರಸಿ (sirsi) ತಾಲೂಕಿನ ಬನವಾಸಿಯ ಹೆಬ್ಬತ್ತಿಯ ಮುಜಫರ್ @ ಜಾಫರ್ ಸೈಯದ್ ಕಾಸಿಂ ರಾಜೆಹುಲಿ (24) ಎಂಬಾತ ತನ್ನ ವಾಟ್ಸ್ ಅಪ್ ಸ್ಟೇಟಸ್ ನಲ್ಲಿ ಆರ್.ಎಸ್.ಎಸ್ ಹಾಗೂ ಹಿಂದೂ ಸಂಘಟನೆ ಕುರಿತು ಅಕ್ಷೇಪಾರ್ಹ ಫೋಟೋ ಹಾಕಿದ್ದಲ್ಲದೇ ಒಂದು ಕೋಮಿನ ಜನರ ಭಾವನೆಗೆ ಘಾಸಿ ಗೊಳಿಸುವಂತೆ ಮಾಡಿದ್ದನು.
Sirsi| ಶಿರಸಿ ದೇವಸ್ಥಾನದ ಕಳ್ಳರ ಬಂಧನ | ಲಕ್ಷಾಂತರ ಮೌಲ್ಯದ ಸ್ವತ್ತುಗಳು ವಶ.
ಈ ವಿಷಯ ಬನವಾಸಿ ಪೊಲೀಸರ ಗಮನಕ್ಕೆ ಬರುತಿದ್ದಂತೆ ಕೋಮ ಭಾವನೆ ಘಾಸಿ ಹಾಗೂ ಜನರಲ್ಲಿ ದ್ವೇಷ ಭಾವನೆ ಬರುವ ಹಿನ್ನಲೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ,ನ್ಯಾಯಾಲಯ ಈತನಿಗೆ ಜೈಲಿಗಟ್ಟಿದೆ.