Sirsi:ಕಾಂಗ್ರೆಸ್ ನಾಯಕರು ಅಪರಾಧಿಗಳ ಮುಂದೆ ಮಂಡಿಯೂರಿ ರಕ್ಷಣೆ ಕೊಡುವ ಕೆಲಸ ಮಾಡುತಿದ್ದಾರೆ-
Sirsi:ಕಾಂಗ್ರೆಸ್ ನಾಯಕರು ಅಪರಾಧಿಗಳ ಮುಂದೆ ಮಂಡಿಯೂರಿ ರಕ್ಷಣೆ ಕೊಡುವ ಕೆಲಸ ಮಾಡುತಿದ್ದಾರೆ-ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ
ಕಾರವಾರ :- ಕಾಂಗ್ರೆಸ್ (congres) ಸರ್ಕಾರ 200 ರಷ್ಟು ಶಾಂತಿ ಸುವ್ಯವಸ್ಥೆ ಕಾಪಾಡಲು ವಿಫಲವಾಗಿದೆ.ಪ್ರಶ್ನಾತೀತವಾಗಿ ಡಿಕೆ ಶಿವಕುಮಾರ್ ,ಪರಮೇಶ್ವರ್,ಸಿದ್ದರಾಮಯ್ಯನವರು ಅಸಮರ್ಥರಾಗಿದ್ದಾರೆ,ಅಸಾಯಕರರಾಗಿದ್ದಾರೆ.
ಅಪರಾಧಿಗಳ ಮುಂದೆ ಮಂಡಿಯೂರಿ ರಕ್ಷಣೆ ಕೊಡುವ ಕೆಲಸ ಮಾಡುತಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕಿಡಿಕಾರಿದ್ದಾರೆ.ಶಿರಸಿಯ ಅರಣ್ಯ ವಿದ್ಯಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮದ ಜೊತೆ ಮಾತನಾಡಿದ ಅವರು ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶಟ್ಟಿ ಹತ್ಯೆ ಕುರಿತು ಪ್ರಸ್ತಾಪಿಸಿ ಮಾತನಾಡಿದ ಅವರು ರಾಜ್ಯದ ಜನ ತಲೆ ತಗ್ಗಿಸುವ ,ಜನ ರೋಶಿ ಹೋಗುವ ಹೇಸಿಗೆ ಪರಿಸ್ಥಿತಿ ನಿರ್ಮಾಣವನ್ನು ಕಳೆದ ಎರೆಡು ವರ್ಷದಿಂದ ಕಾಂಗ್ರೆಸ್ ಸರ್ಕಾರ ಮಾಡಿದೆ.ಅಭಿವೃದ್ಧಿ ಇಲ್ಲ ,ಬೆಲೆ ಏರಿಕೆಯಂತಹದನ್ನು ದಿನಾ ನೋಡುತಿದ್ದೇವೆ.
ಇದನ್ನೂ ಓದಿ:-Sirsi: ಮತ್ತಿಘಟ್ಟ ರಸ್ತೆ ನಿರ್ಮಾಣಕ್ಕೆ ಪಟ್ಟು ಹಿಡಿದ ಅನಂತಮೂರ್ತಿ- ಸ್ಥಳದಲ್ಲೇ ಕಾರ್ಯಾನುಮೋದನೆ ನೀಡಿದ ಜಿಲ್ಲಾಧಿಕಾರಿ.
ಆಡಳಿತಾತ್ಮಕ ನಿರ್ಧಾರ ಮಾಡಿ ಈ ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಮಾಡಬೇಕು ಎಂದರು. ಇನ್ನು ಬಂಗಾಳದಂತ ರಾಜ್ಯದಲ್ಲಿ ನುಸುಳುಕೋರರಿಗೆ ಪೂರಕವಾಗಿದೆಯೋ ಅವುಗಳ ನಿಯಂತ್ರಣಕ್ಕೆ ಕಷ್ಟವಾಗುತ್ತದೆ , ಕಾಂಗ್ರೆಸ್ ನವರು ವೈಫಲ್ಯ ಮುಚ್ಚಿ ಕೊಳ್ಳಲು ಬಿಜೆಪಿಯವರನ್ನು ದೂರುವುದೇ ಕೆಲಸವಾಗಿದೆ.ಅವರ ಎಲ್ಲಾ ದೌರ್ಬಲ್ಯ ,ಬ್ರಷ್ಟಾಚಾರ ಅಸಮರ್ಥತೆಯ ತುತ್ತ ತುದಿಯ ಆಡಳಿತದ ಮಿತಿಯನ್ನು ಮುಚ್ಚಿಕೊಳ್ಳಲು ಕೇಂದ್ರದಲ್ಲಿ ನರೇಂದ್ರ ಮೋದಿಗೆ ಬೈಯುವುದು ,ಆರ್.ಎಸ್.ಎಸ್ ಗೆ ಬೈಯುವುದು ಕರ್ನಾಟಕದಲ್ಲಿ ಬಿಜೆಪಿ ಬೈಯುವುದು ಆಗಿದೆ.
ನಮ್ಮ ಜಿಲ್ಲೆಯಲ್ಲಿ ಕಾನೂನು ಬಾಹಿರವಾಗಿ ಹೊರದೇಶದ ಜನ ಕೆಲಸ ಮಾಡುವ ಕುರಿತು ಮಾಹಿತಿ ದೊರೆತಿದೆ.ಜಿಲ್ಲಾಡಳಿತಕ್ಕೆ ಮಾತನಾಡಿದಾಗ ನಿಯಮ ಬಾಹಿರವಾಗಿ ಯಾರು ಇಲ್ಲ ಅಂತ ಹೇಳಿದ್ದಾರೆ.ನುಸುಳುಕೋರರು ಯಾವ ದೇಶದಿಂದ ಬಂದಿರಬಹುದು ಎಂದು ಗುಪ್ತಚರ ಇಲಾಖೆ ಮೂಲಕ ಸಂಬಂಧಪಟ್ಟವರಿಂದ ಮಾಹಿತಿ ಪಡೆಯಲಿ ಎಂದರು.
