Honnavara| ಚಿರತೆ ದಾಳಿ ಬೋನು ಕಾಲಿ!
ಹೊನ್ನಾವರ :- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಾಲಕೋಡಿನಲ್ಲಿ ಚಿರತೆ ದಾಳಿಗೆ ಆಕಳು ಸಾವು ಕಂಡಿದೆ.
07:27 PM Oct 13, 2024 IST | ಶುಭಸಾಗರ್
Honnavara| ಚಿರತೆ ದಾಳಿ ಬೋನು ಕಾಲಿ!
Advertisement
ವರದಿ:- ವಿನಾಯಕ್ ಕವಲಕ್ಕಿ.
ಹೊನ್ನಾವರ :- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಾಲಕೋಡಿನಲ್ಲಿ ಚಿರತೆ ದಾಳಿಗೆ ಆಕಳು ಸಾವು ಕಂಡಿದೆ.
ಹೊನ್ನಾವರದಲ್ಲಿ ಕಳೆದ ಎರಡು ತಿಂಗಳಿಂದ ನಿರಂತರ ಚಿರತೆ ದಾಳಿಯಾಗುತಿದ್ದು ಆಹಾರ ಅರಸಿ ಬರುವ ಚಿರುತೆಗಳು ಗ್ರಾಮಗಳತ್ತ ಮುಖ ಮಾಡುತ್ತಿವೆ. ಇದರಿಂದಾಗಿ ಗೋವುಗಳು, ಸಾಕು ಪ್ರಾಣಿಗಳು ಬಲಿಯಾಗುತಿದ್ದು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು.
ಆದರೇ ಚಿರುತೆ ಹಿಡಿಯುವುದಾಗಿ ಹೇಳಿ ಕವಲಕ್ಕಿ ಗ್ರಾಮದ ಕಾಡಿನಲ್ಲಿ ಬೋನನ್ನು ತಂದಿಟ್ಟ ಅರಣ್ಯ ಇಲಾಖೆ ಬೋನನ್ನು ತೆರದಿಡದೇ ಅಲಕ್ಷ ಮಾಡಿತ್ತು.
ಇದನ್ನೂ ಓದಿ:-Honnavara| ಚಿರತೆ ಹಿಡಿಯಲು ತಂದ ಬೋನಿನ ಬಾಗಿಲು ತೆರದಿಡಲು ಮರೆತ ಅರಣ್ಯ ಇಲಾಖೆ!
ಇದೀಗ ಅರಣ್ಯ ಇಲಾಖೆ ನಿರ್ಲಕ್ಷ ಮಾಡಿದ್ದನ್ನು ಗ್ರಾಮದ ಜನ ವಿರೋಧಿಸುತಿದ್ದು ಚಿರತೆಗಳು ಮನುಷ್ಯನ ಮೇಲೆ ದಾಳಿ ಮಾಡಿದರೇ ಯಾರು ಹೊಣೆ ಎಂಬ ಪ್ರಶ್ನೆ ಎತ್ತುತಿದ್ದಾರೆ.
Advertisement