Court case |ಹಾಸಿಗೆ, ದಿಂಬು ನಿರೀಕ್ಷೆಯಲ್ಲಿದ್ದ ದರ್ಶನ್ಗೆ ಶಾಕ್ ನೀಡಿದ ಕೋರ್ಟ!
Court case |ಹಾಸಿಗೆ, ದಿಂಬು ನಿರೀಕ್ಷೆಯಲ್ಲಿದ್ದ ದರ್ಶನ್ಗೆ ಶಾಕ್ ನೀಡಿದ ಕೋರ್ಟ!
ಬೆಂಗಳೂರು (29october 2025): ಹಾಸಿಗೆ ಮತ್ತು ದಿಂಬು ಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದ ವಿಚಾರಣಾಧೀನ ಕೈದಿ ದರ್ಶನ್ಗೆ ಕೋರ್ಟ (court )ಬಿಗ್ ಶಾಕ್ ನೀಡಿದೆ.
Kannada actor| ಹಾಸ್ಯ ನಟ ಉಮೇಶ್ ಗೆ ಶಾಕ್ ನೀಡಿತು ವೈದ್ಯರ ವರದಿ! ಅಷ್ಟಕ್ಕೂ ಆಗಿದ್ದೇನು ಗೊತ್ತಾ?
ಜೈಲಿನ ಕೈಪಿಡಿ ನಿಯಮದ ಪ್ರಕಾರ, ಸವಲತ್ತುಗಳನ್ನು ಮಾತ್ರ ನೀಡಲಾಗುತ್ತದೆ. ತಿಂಗಳಿಗೆ ಒಂದು ಬಾರಿ ಚಾದರ್ ಮತ್ತು ಬಟ್ಟೆ ಬದಲಿಸಲು ಸೂಚನೆ ನೀಡಲಾಗಿದೆ. ಬೇರೆ ಬ್ಯಾರಿಕೇಡ್ಗೆ ಬೇಕಾದ್ರೆ ಜೈಲು ಅಧಿಕಾರಿಗಳು ಬದಲಿಸಬಹುದು. ಪವಿತ್ರಾ ಗೌಡ, ದರ್ಶನ್ ಸೇರಿದಂತೆ ಆರು ಆರೋಪಿಗಳ ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರಿನ 57 ನೇ ಸಿಸಿಹೆಚ್ (CCH Court )ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಪ್ರಕರಣದಿಂದ ಕೈಬಿಡುವಂತೆ ಕೋರಿದ್ದ ಎ5 ನಂದೀಶ್ ಅರ್ಜಿಯನ್ನು ನ್ಯಾಯಾಲಯ ಕ್ಕೆ ಸಲ್ಲಿಸಲಾಗಿದೆ.
ಜೈಲಿನಲ್ಲಿ ಸಿಗುವ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿಲ್ಲ ಎಂದು ದರ್ಶನ್( actor darshan) ಪರ ವಕೀಲರು ವಾದ ಮಂಡಿಸಿದ್ದರು. ಈ ಹಿನ್ನೆಲೆ ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳು ಜೈಲಿಗೆ ತೆರಳಿ ಪರಿಶೀಲನೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಈ ವರದಿಯನ್ನು ಆಧರಿಸಿ ನ್ಯಾಯಾಲಯ, ಕಾರಾಗೃಹದ ನಿಯಮಗಳ ಪ್ರಕಾರ ಹೆಚ್ಚುವರಿ ಸವಲತ್ತು ನೀಡಲಾಗಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು, ಅ.31 ಕ್ಕೆ ವಿಚಾರಣೆ ನಿಗದಿಪಡಿಸಿದೆ .