Bhatkal: 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Bhatkal: 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ.

ಕಾರವಾರ :-ಕಳೆದ 15 ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿಯನ್ನು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ (Bhatkal) ತಾಲೂಕಿನ ಮುರುಡೇಶ್ವರ ಪೊಲೀಸರು ವಶಕ್ಕೆ ಪಡೆದ ಘಟನೆ ಭಾನುವಾರ ನಡೆದಿದೆ.
ರಾಮಚಂದ್ರ ಸುಬ್ರಹ್ಮಣ್ಯ ನಾಯ್ಕ ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿಯಾಗಿದ್ದಾನೆ.
ಇದನ್ನೂ ಓದಿ:-Murdeshwar :ಸಮುದ್ರದಲ್ಲಿ ಮುಳುಗುತಿದ್ದ ಪ್ರವಾಸಿಗನ ರಕ್ಷಣೆ
ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 15 ವರ್ಷದ ಹಿಂದೆ ವರದಕ್ಷಣೆ ಕಿರುಕುಳ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡ ಈ ವ್ಯಕ್ತಿಯ ಪತ್ತೆಗಾಗಿ ಮುರ್ಡೇಶ್ವರ ಪೊಲೀಸರು ಹೈದ್ರಾಬಾದ್, ಬೆಂಗಳೂರು, ವಿಜಯಪುರ ಕಡೆಗಳಲ್ಲಿ ಮಾಹಿತಿ ಕಲೆ ಹಾಕಿದ್ದರು.
ಇದನ್ನೂ ಓದಿ:-Bhatkal: ಮತ್ಸ್ಯ ಮೇಳ ಅನುಮೋದನೆಯಿಲ್ಲದೇ 9.85 ಕೋಟಿ ವೆಚ್ಚ,ನಿಯಮ ಉಲ್ಲಂಘನೆಯ ರಹಸ್ಯ ಬಿಚ್ಚಿಟ್ಟ THE- FILE
ನಂತರ ಈತ ವಿಜಯಪುರದಲ್ಲಿ ಇರುವುದು ಪತ್ತೆಯಾಗಿದ್ದು ,ಅಲ್ಲಿಗೆ ತೆರಳಿದ ಮುರುಡೇಶ್ವರ ಪೊಲೀಸರು ವಿಜಯಪುರದ ವಿವೇಕನಗರದಲ್ಲಿ ವಶಕ್ಕೆ ಪಡೆದು ಇಂದು ಮುರುಡೇಶ್ವರಕ್ಕೆ ಕರೆತಂದಿದ್ದಾರೆ.