Bhatkal: ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಕನ್ನಡಾಂಬೆಗೆ ಪುಷ್ಟ ನಮನ ಸಲ್ಲಿಸಲು ಒಲ್ಲೇ ಎಂದ ಜನಪ್ರತಿನಿಧಿ!
Bhatkal news 1 November 2024:-ಭಟ್ಕಳ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ (Kannda rajyothsava) ಸಭಾ ಕಾರ್ಯಕ್ರಮದಲ್ಲಿ ಜಾಲಿ ಪಟ್ಟಣ ಪಂಚಾಯತ ಅಧ್ಯಕ್ಷೆ ಖಾಜೀಯಾ ಅಫ್ಸಾ ಹುಜೈಫಾ ಅವರು ಕನ್ನಡಾಂಬೆಗೆ ಪುಷ್ಪ ನಮನ ಸಲ್ಲಿಸಲು ಹಿಂದೇಟು ಹಾಕುವ ಮೂಲಕ ನಿರ್ಲಕ್ಷತನದ ಅಗೌರವ ತೋರುವ ಮೂಲಕ ಇದೀಗ ಜನರ ವಿರೋಧಕ್ಕೆ ಕಾರಣಾವಾಗಿದೆ.
ಭಟ್ಕಳ ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ಪುರಸಭೆ ಹಾಗೂ ಪಟ್ಟಣ ಪಂಚಾಯತ್ ಜಾಲಿ ಇವರ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ತಾಲೂಕಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.


ಇದನ್ನೂ ಓದಿ:-Bhatkal: ಗಾಂಜಾ ಜೊತೆ ನಿಷೇಧಿತ ಮಾಧಕ ವಸ್ತು ವಶ ನಾಲ್ಕು ಜನರ ಬಂಧನ
ಈ ವೇಳೆ ಸಹಾಯಕ ಆಯುಕ್ತರಿಂದ ಧ್ವಜಾರೋಹಣ ನೆರವೇರಿಸಿದ ಬಳಿಕ ಸಭಾ ಕಾರ್ಯಕ್ರಮ ಪೂರ್ವದಲ್ಲಿ ವೇದಿಕೆ ಮೇಲಿದ್ದ ಕನ್ನಡ ಭುವನೇಶ್ವರಿ ದೇವಿಯ ಫೋಟೋ ಗೆ ವೇದಿಕೆ ಮೇಲಿದ್ದ ಗಣ್ಯರೆಲ್ಲರು ಪುಷ್ಪ ನಮನ ಸಲ್ಲಿಸಿದರು.
ಈ ವೇಳೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ಪುಷ್ಪ ನಮನ ಸಲ್ಲಿಸಲು ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ತಿಳಿಸಿದರು ಈ ವೇಳೆ ಪುಷ್ಪ ನಮನ ಸಲ್ಲಿಸಲು ನಿರಾಕರಿಸಿದ ಅವರಿಗೆ ನಂತರ ಮತ್ತೆ ಸಹಾಯಕ ಆಯುಕ್ತೆ ಡಾ.ನಯನ ಕೂಡ ಪುಷ್ಪ ನಮನ ಸಲ್ಲಿಸಲು ಸೂಚಿಸಿದರು ಇದಕ್ಕೂ ಕೂಡ ಅವರು ನಿರಾಕರಿಸಿ ವೇದಿಕೆ ಮೇಲೆ ಹಾಗೆಯೇ ನಿಂತಿದ್ದರು.
ಇದನ್ನೂ ಓದಿ:-Bhatkal| ಅರಬ್ಬಿ ಸಮುದ್ರದಲ್ಲಿ ಮೂರು ದಿನ ವಿಮಾನದಲ್ಲಿ ಫೈರಿಂಗ್ : ಮೀನುಗಾರರಿಗೆ ನಿರ್ಬಂಧ
ಕರ್ನಾಟಕದಲ್ಲೇ ಹುಟ್ಟಿ, ಕರ್ನಾಟಕದ ಸೌಲಭ್ಯ ಪಡೆದು, ಕನ್ನಡಿಗರಿಂದಲೇ ಆಯ್ಕೆಯಾದ ಜನ ಪ್ರತಿನಿಧಿಗಳು ಈ ರೀತಿ ಅಗೌರವ ಸಲ್ಲಿಸಿದರೆ ಹೇಗೆ ಧರ್ಮ ಮುಖ್ಯವೇ ರಾಜ್ಯ ಮುಖ್ಯವೇ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಮಾಡುವಂತಾಗಿದೆ.