Haveri| ಅಬ್ಬರದ ಮಳೆಗೆ ಮುಳುಗಿದ ಬ್ರಿಡ್ಜ್
ಹಾವೇರಿ- ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನಲ್ಲಿ ಭರ್ಜರಿ ಮಳೆ ಸುರಿದಿದೆ. ಧಾರಾಕಾರ ಮಳೆಗೆ ಕುಮುಧ್ವತಿ ನದಿಗೆ ಭೋರ್ಗರೆದು ಹರಿಯುತ್ತಿದೆ.
11:35 AM Oct 10, 2024 IST | ಶುಭಸಾಗರ್
ಹಾವೇರಿ- ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನಲ್ಲಿ ಭರ್ಜರಿ ಮಳೆ ಸುರಿದಿದೆ. ಧಾರಾಕಾರ ಮಳೆಗೆ ಕುಮುಧ್ವತಿ ನದಿಗೆ ಭೋರ್ಗರೆದು ಹರಿಯುತ್ತಿದೆ.
Advertisement
ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಎಲಿವಾಳ ಚಪ್ಪರದಹಳ್ಳಿ ಗ್ರಾಮಗಳ ನಡುವಿನ ಸೇತುವೆ ಮುಳುಗಡೆ ಆಗಿದೆ.
ಇದನ್ನೂ ಓದಿ:-Weather report| ಹವಾಮಾನ 09 october 2024
ಕುಡುಪಲಿ ಬಡಸಂಗಾಪುರ ಗ್ರಾಮಗಳ ನಡುವಿನ ಬಾಂದಾರ್ ಸಂಪೂರ್ಣ ಮುಳುಗಡೆಯಾಗಿದ್ದು, ಸೇತುವೆ ಮೇಲೆ ಓಡಾಡದಂತೆ ಪೊಲೀಸ್ ಬ್ಯಾರಿಕೇಡ್ ಗಳನ್ನಿಟ್ಟು ಸೇತುವೆ ಮೇಲಿನ ಸಂಚಾರ ನಿರ್ಬಂಧಿಸಲಾಗಿದೆ.
ಕಳೆದೆರಡು ದಿನಗಳಿಂದ ಸಂಜೆ ಆಗುತ್ತಿದ್ದಂತೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ (rain)ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ತಾಲೂಕಿನಲ್ಲಿ ಸೇತುವೆ ಮತ್ತು ಬಾಂದಾರ್ ಮುಳುಗಡೆ ಆಗಿವೆ. ಇದರಿಂದ ಜನರು ಸಂಚಾರಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
Advertisement