Karwar:ಎಸ್.ಟಿ ಪಟ್ಟಿಗೆ ಹಾಲಕ್ಕಿ,ವಕ್ಕಲಿಗ,ಕುಣಬಿ ಜನಾಂಗ ಸೇರಿಸಲು ಮರು ಯತ್ತ- ಆರ್.ವಿ ದೇಶಪಾಂಡೆ
Karwar:ಎಸ್.ಟಿ ಪಟ್ಟಿಗೆ ಹಾಲಕ್ಕಿ,ವಕ್ಕಲಿಗ,ಕುಣಬಿ ಜನಾಂಗ ಸೇರಿಸಲು ಮರು ಯತ್ತ- ಆರ್.ವಿ ದೇಶಪಾಂಡೆ
ಕಾರವಾರ:- ಆಪರೇಶನ್ ಸಿಂಧೂರ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿದ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆ ಯನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ ದೇಶಪಾಂಡೆ ಖಂಡಿಸಿದ್ದಾರೆ.
ಇಂದು ಕಾರವಾರದಲ್ಲಿ (karwar) ಮಾತನಾಡಿದ ಅವರು ನಮ್ಮ ಸೈನ್ಯದ ಬಗ್ಗೆ ಗೌರವ ಇರಬೇಕು ,ನಮ್ಮ ಕರ್ತವ್ಯವದು.ಅವರು ಹಾಗೆ ಹೇಳಿರುವು ತಪ್ಪು ಸರಿಯಲ್ಲ, ಪಾಕಿಸ್ತಾನ ಟೆರರಿಸ್ಟ್ ದೇಶ ಅದು ,ಯುದ್ಧ ಸೋತಿದೆ ಅವರು ಸುಧಾರಿಸಬೇಕು, ಪಾಕಿಸ್ತಾನವೂ ಅಭಿವೃದ್ಧಿಯಾಗಬೇಕು,ಪ್ರಗತಿಯಾಗಬೇಕು, ಪಾಕಿಸ್ತಾನದ ಜನರು ಸುಖವಾಗಿ ಇರಬೇಕು.
ಭಾರತ- ಪಾಕಿಸ್ತಾನ ಸಂಬಂಧ ಚನ್ನಾಗಿ ಇರಬೇಕು, ಪ್ರೀತಿ,ವಿಶ್ವಾಸಕ್ಕೆ ಚುತಿ ತಂದಾಗ ಏನು ಮಾಡಬೇಕು?ಎಂದು ಕೊತ್ತೂರು ಮಂಜುನಾಥ್ ರವರಿಗೆ ಪ್ರತಿ ಪ್ರಶ್ನೆ ಮಾಡದರು.
ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಅವರು
ಹಾಲಕ್ಕಿ ಒಕ್ಕಲಿಗರು, ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಲು ರಾಜ್ಯ ಸರ್ಕಾರದಿಂದ ಶೀಘ್ರವೇ ಕೇಂದ್ರ ಸರ್ಕಾರಕ್ಕೆ ಮರು ಪ್ರಸ್ತಾವ ಸಲ್ಲಿಕೆಯಾಗಲಿದೆ.
ಇದನ್ನೂ ಓದಿ:-Haliyala ಬಡವರ ಕೆಲಸ ಮಾಡದ ಅಧಿಕಾರಿ ವಿರುದ್ಧ ಆರ್.ವಿ ದೇಶಪಾಂಡೆ ಗರಂ ! ಕೈಗೆ ಬಂತು ಬಾಟಲ್ ?
ಜಿಲ್ಲೆಯಲ್ಲಿರುವ, ಸಾಮಾಜಿಕವಾಗಿ ಹಿಂದುಳಿದ ಎರಡೂ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಹಲವು ವರ್ಷದಿಂದ ಪ್ರಯತ್ನಿಸಿದೆ. ಆದರೆ, ಪ್ರಯತ್ನ ಕೈಗೂಡಲಿಲ್ಲ. ಈಚೆಗಷ್ಟೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಪುನಃ ಇದೇ ವಿಚಾರವಾಗಿ ಚರ್ಚಿಸಿದ್ದೇನೆ. ಮರು ಪ್ರಸ್ತಾವ ಸಲ್ಲಿಕೆಸುವ ಭರವಸೆ ನೀಡಿದ್ದಾರೆ ಎಂದು ಎಂದರು.
ಸಚಿವ ಸಂಪುಟ ಪುನರ್ ರಚನೆ, ವಿಸ್ತರಣೆ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟ ನಿರ್ಧಾರ. ಅವರು ಕೈಗೊಳ್ಳುವ ನಿರ್ಣಯಕ್ಕೆ ಬದ್ಧರಾಗಿರುತ್ತೇವೆ. ನನಗೆ ಸಚಿವ ಸ್ಥಾನ ನೀಡುವ ವಿಚಾರದಲ್ಲಿಯೂ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತೇನೆ ಎಂದು ಪ್ರತಿಕ್ರಿಯಿಸಿದರು.