For the best experience, open
https://m.kannadavani.news
on your mobile browser.
Advertisement

Sirsi|ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲು ಯೋಜನೆ: ಸಚಿವ ಸೋಮಣ್ಣರಿoದ ಭರವಸೆ

Union Minister V. Somanna visited Sirsi and assured major progress on the Talaguppa–Sirsi–Hubballi railway project. The 165 km survey is completed, and the DPR will be ready by June 2026.
07:17 PM Dec 06, 2025 IST | ಶುಭಸಾಗರ್
Union Minister V. Somanna visited Sirsi and assured major progress on the Talaguppa–Sirsi–Hubballi railway project. The 165 km survey is completed, and the DPR will be ready by June 2026.
sirsi ತಾಳಗುಪ್ಪ ಶಿರಸಿ ಹುಬ್ಬಳ್ಳಿ ರೈಲು ಯೋಜನೆ  ಸಚಿವ ಸೋಮಣ್ಣರಿoದ ಭರವಸೆ

Sirsi|ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲು ಯೋಜನೆ: ಸಚಿವ ಸೋಮಣ್ಣರಿoದ ಭರವಸೆ

Advertisement

ಶಿರಸಿ:- ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ  ಇಂದು ಶಿರಸಿಯ (sirsi) ಶ್ರೀ ಮಾರಿಕಾಂಬ ದೇವಸ್ಥಾನಕ್ಕೆ ಭೇಟಿ ನೀಡಿ, ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.

ಶಿರಸಿಗೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಅವರು, ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ್ ರೊಂದಿಗೆ  ಚರ್ಚಿಸಿ, ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲು ಯೋಜನೆಯ ಬಗ್ಗೆ ಮಹತ್ವದ ಹೇಳಿಕೆ ನೀಡಿದರು.

Karwar | ಕಾರವಾರದಲ್ಲಿ ಜೈಲು ಸಿಬ್ಬಂದಿ ಮೇಲೆ ಕೈದಿಗಳ ಹಲ್ಲೆ | ಮಾದಕ ವಸ್ತುಗಾಗಿ ಬೇಡಿಕೆ

165ಕಿ.ಮೀ. ಉದ್ದದ ಈ ಯೋಜನೆಗೆ ಸಂಬಂಧಿಸಿದ ಸಮೀಕ್ಷೆ ಪೂರ್ಣಗೊಂಡಿದ್ದು, ವಿವರಣಾತ್ಮಕ ಯೋಜನಾ ವರದಿ (ಡಿಪಿಆರ್) ಜೂನ್ 2026ರೊಳಗೆ ಸಿದ್ಧವಾಗುತ್ತದೆ ಎಂದು ಸಚಿವರು ತಿಳಿಸಿದರು.

ಸುಮಾರು 3000 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಶೀಘ್ರ ಆರಂಭವಾಗುತ್ತದೆ. ಮಲೆನಾಡು ಪ್ರದೇಶದ ಸಂಪರ್ಕವನ್ನು ಬಲಪಡಿಸಿ, ಪ್ರವಾಸೋದ್ಯಮ, ವ್ಯಾಪಾರ ಮತ್ತು ಸ್ಥಳೀಯ ಆರ್ಥಿಕತೆಗೆ  ಉತ್ತೇಜನ ನೀಡುವ ಈ ರೈಲು ಮಾರ್ಗ 2030ರೊಳಗೆ ಕಾರ್ಯಗತಗೊಳ್ಳುತ್ತದೆ ಎಂಬ ಭರವಸೆ ನೀಡಿದರು.

ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ರೈಲ್ವೆ ಇಲಾಖೆ ಆದ್ಯತೆ ನೀಡುತ್ತಿದೆ. ಸ್ಥಳೀಯರು ಈ ಯೋಜನೆಯಿಂದ ತುಂಬಾ ಲಾಭ ಪಡೆಯುತ್ತಾರೆ ಎಂದು  ಸಚಿವರು ಹೇಳಿದರು. ರೈಲ್ವೆ ಸಚಿವರ ಭೇಟಿ ಹಾಗೂ ಹೇಳಿಕೆಯಿಂದ ಜನರಲ್ಲಿ ನಿರೀಕ್ಷೆಗಳು ಗರಿಗೆದರಿವೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ