Gokarna| ನಾಲ್ಕು ವರ್ಷದಿಂದ ಗೋಕರ್ಣ ಮಹಾಬಲೇಶ್ವರ ದರ್ಶನಕ್ಕೆ ಬರುವ ಭಕ್ತರಿಗಿಲ್ಲ ವಿಶೇಷ ಪೂಜಾ ಭಾಗ್ಯ|ಉಸ್ತುವಾರಿ ಸಮಿತಿಯಿಂದ ನಿರ್ಬಂಧ!
Gokarna| ನಾಲ್ಕು ವರ್ಷದಿಂದ ಗೋಕರ್ಣ ಮಹಾಬಲೇಶ್ವರ ದರ್ಶನಕ್ಕೆ ಬರುವ ಭಕ್ತರಿಗಿಲ್ಲ ವಿಶೇಷ ಪೂಜಾ ಭಾಗ್ಯ|ಉಸ್ತುವಾರಿ ಸಮಿತಿಯಿಂದ ನಿರ್ಬಂಧ!
ಕಾರವಾರ :- ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ(gokarna) ಮಹಾಬಲೇಶ್ವರ ದೇವಾಲಯ ಐತಿಹಾಸಿಕ ಮಹತ್ವ ಹೊಂದಿದ ದೇವಸ್ಥಾನ. ಇಲ್ಲಿ ಪ್ರತಿದಿನ ಸಾವಿರಾರು ಭಕ್ತರು ದೇಶ ವಿದೇಶದಿಂದ ಇಲ್ಲಿನ ಆತ್ಮಲಿಂಗ ದರ್ಶನಕ್ಕೆ ಬರುತ್ತಾರೆ. ಧಾರ್ಮಿಕವಾಗಿ ವಿಶೇಷ ಹೊಂದಿದ ಈ ದೇವಸ್ಥಾನದಲ್ಲಿ ಭಕ್ತರಿಗೆ ಆತ್ಮಲಿಂಗ ಸ್ಪರ್ಷಿಸಿ ಪೂಜೆ ಗೈಯಲು ಅವಕಾಶ ನೀಡುವುದೇ ವಿಶೇಷವಾಗಿದೆ.
ಇನ್ನು ಇಲ್ಲಿಗೆ ಬರುವಂತ ಭಕ್ತರು ಮಹಾಬಲೇಶ್ವರನಿಗೆ ವಿವಿಧ ರೀತಿಯಲ್ಲಿ ಹರಕೆ ಕಟ್ಟಿಕೊಳ್ಳುತ್ತಾರೆ. ಹರಕೆ ಫಲಿಸಿದ ನಂತರ ದೇವಾಲಯಕ್ಕೆ ಆಗಮಿಸಿ ದೇವಾಲಯದ ಮೂಲಕವೇ ಪೂಜೆ ನೆರವೇರಿಸಲಾಗುತ್ತದೆ. ಆದರೇ 2021 ರಿಂದ ದೇವಾಲಯದ ಮೂಲಕ ಹರಕೆ ವಿಶೇಷ ಪೂಜೆಗಳಿಗೆ ಭಕ್ತರಿಗೆ ಅವಕಾಶ ನೀಡಲಾಗುತ್ತಿಲ್ಲ.ಹೀಗಾಗಿ ಏನೇ ಪೂಜಾ ಕಾರ್ಯ ಮಾಡಬೇಕಾದರೂ ದೇವಾಲಯದ ಹೊರಗೆ ಮಾಡಬೇಕಿದೆ. ದೇವರಿಗೆ ಹರಕೆ ರೂಪದಲ್ಲಿ ಸಲ್ಲುವ ಸುವರ್ಣ ನಾಗಾಭರಣ ಪೂಜೆ,ಪಂಚಾಂಭೃತ ಅಭಿಷೇಕ,ನವಧಾನ್ಯ ಅಭಿಷೇಕ ,ಕ್ಷೀರಾಭಿಷೇಕ ಪೂಜೆಗಳನ್ನು ಭಕ್ತರು ದೇವಸ್ಥಾನದಲ್ಲಿ ಮಾಡಲು ಸಾಧ್ಯವಾಗುತ್ತಿಲ್ಲ .
ವಿವಾಧಕ್ಕೆ ಸಿಲುಕಿದ ಮಹಾಬಲೇಶ್ವರ
2008ರಲ್ಲಿ ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರವು, ಗೋಕರ್ಣ ದೇವಸ್ಥಾನವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿತ್ತು. ಈ ಸಂದರ್ಭದಲ್ಲಿ ದೇವಾಲಯದಲ್ಲಿ ಹಲವು ಆಡಳಿತ ಕ್ರಮಗಳು ಬದಲಾದರೂ ಧಾರ್ಮಿಕ ಆಚರಣೆಗಳು ಬದಲಾಗಿರಲಿಲ್ಲ. ಬಂದ ಭಕ್ತರಿಗೆ ಊಟೋಪಚಾರ ಸಹ ಅಂದಿನ ಆಡಳಿತ ಕಮಿಟಿ ನೋಡಿಕೊಳ್ಳುತಿತ್ತು. ಇನ್ನು ಧಾರ್ಮಿಕ ಕಾರ್ಯಗಳು ಸಹ ಎಂದಿನಂತೆ ನಡೆಯುತಿದ್ದು ಭಕ್ತರಿಗೆ ದೇವಾಲಯದ ಮೂಲಕ ವಿಶೇಷ ಪೂಜೆ ಪುನಸ್ಕಾರಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೇ ಸ್ಥಳೀಯ ಅರ್ಚಕರಿಗೆ ನಿಯಮಗಳನ್ನು ಮಾಡಲು ಹೊರಟಿದ್ದು ವಿವಾಧಕ್ಕೆ ಕಾರಣವಾಗಿತ್ತು.
Gokarna|ಗೋಕರ್ಣ ಕಡಲ ಅಲೆಯಲ್ಲಿ ನೀಲಿ ಬೆಳಕಿನ ವಿಸ್ಮಯ-ಕಡಲಿನಲ್ಲಿ ರಾತ್ರಿ ಸೂಸಿದ ನೀಲಿ ಬೆಳಕು
ಇನ್ನು ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ಸರ್ಕಾರ ವಹಿಸಿದ ಬಗ್ಗೆ ಅನುವಂಶೀಯ ಅರ್ಚಕರು ವಿರೋಧ ವ್ಯಕ್ತಪಡಿಸಿ ಕೋರ್ಟ ಮೆಟ್ಟಿಲೇರಿದ್ದರು.
ಕರ್ನಾಟಕ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಬಾಲಚಂದ್ರ ದೀಕ್ಷಿತ್ ಮತ್ತು ನರಹರಿ ಕೃಷ್ಣ ಹೆಗಡೆ ಎಂಬುವರು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದರು.
Gokarna:ಅಹಮದಾಬಾದ್ ವಿಮಾನ ದುರಂತ -ಗೋಕರ್ಣದಲ್ಲಿ ಮೃತ 260 ಕ್ಕೂ ಹೆಚ್ಚು ಜನರ ಪಿತ್ರುಕಾರ್ಯ
2021 ರ ಮೇ ತಿಂಗಳ ಕೊನೆಯಲ್ಲಿ ರಾಮಚಂದ್ರಾಪುರ ಮಠದಿಂದ ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ವಾಪಾಸ್ ಪಡೆಯಲು ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಗೋಕರ್ಣ ದೇವಸ್ಥಾನ ನಿರ್ವಹಣೆಗೆ ಸಮಿತಿ ಕೂಡ ರಚನೆ ಮಾಡಿತ್ತು. ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಕೃಷ್ಣ ನೇತೃತ್ವದ ಸಮಿತಿಗೆ ಹಸ್ತಾಂತರಿಸಲಾಗಿತ್ತು.
ಆಡಳಿತ ಉಸ್ತುವಾರಿ ಸಮಿತಿಗೆ ಹಸ್ತಾಂತರವಾದ ನಂತರ ಕೋವಿಡ್ ಕಾರಣಕ್ಕೆ ಭಕ್ತರು ಹರಕೆ ರೂಪದಲ್ಲಿ ಸಲ್ಲಿಸುವ ಪೂಜೆಗೆ ನಿರ್ಬಂಧಿಸಲಾಯಿತು. ಆದರೇ ಕೋವಿಡ್ ಮುಗಿದ ನಂತರವೂ ಈ ನಿಯಮ ಮುಂದುವರೆದಿದೆ. ಭಕ್ತರು ದೇವಾಲಯದ ಮೂಲಕ ಯಾವ ಪೂಜೆಯನ್ನು ಸಹ ಮಾಡಲು ಸಾಧ್ಯವಾಗುತ್ತಿಲ್ಲ. ಆಡಳಿತ ಸಮಿತಿ ಇದೀಗ ಬದಲಾಗಿದ್ದು ಹೊಸ ಸಮಿತಿ ಸಹ ಬಂದಿದೆ. ಇದರ ಮಧ್ಯ ದೇವರ ಪೂಜಾ ಹಕ್ಕಿನ ತೀರ್ಪು ಸಹ ಬಂದಿದ್ದು ಅನುವಂಶೀಯ ಅರ್ಚಕರಿಗೆ ಪೂಜೆಗೆ ಅವಕಾಶ ಮಾಡಿಕೊಡಲಾಗಿದೆ. ಆದರೇ ಮಹಾಬಲೇಶ್ವರನಿಗೆ ಹರಕೆ ಪೂಜೆ ಸಲ್ಲಿಸಬೇಕು ಎಂದರೇ ದೇವಾಲಯದ ಹೊರಗೆ ಸಲ್ಲಿಸುವಂತಾಗಿದ್ದು ದೂರದೂರಿಂದ ಬಂದ ಭಕ್ತರು ಮಹಾಬಲೇಶ್ವರನ ಸನ್ನಿದಿಯಲ್ಲಿ ಹರಕೆ ತೀರಿಸದ ಪರಿಸ್ತಿತಿ ನಾಲ್ಕು ವರ್ಷಗಳಿಂದ ಅಡ್ಡಿಯಾಗಿ ನಿಂತಿದೆ.
ಯಾರು ಏನನ್ನುತ್ತಾರೆ?
ದೇವಾಲಯ ರಾಮಚಂದ್ರಾಪುರ ಮಠದ ಬಳಿ ಇದ್ದ ಸಂದರ್ಭದಲ್ಲಿ ಬಂದ ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಂಡಿದ್ದೇವೆ .ರಾಜ್ಯದ ಹೊರ ಊರುಗಳಿಂದ ಭಕ್ತರು ಮಹಾಬಲೇಶ್ವರನ ಸನ್ನಿದಿಗೆ ದರ್ಶನ ಹಾಗೂ ಹರಕೆ ಪೂಜೆ ಸಲ್ಲಿಸಲು ಬರುತ್ತಾರೆ. ದೇವಾಲಯದಲ್ಲಿ ಮಹಾಬಲೇಶ್ವರ ಆತ್ಮ ಲಿಂಗಕ್ಕೆ ಸುವರ್ಣ ನಾಗಾಭರಣ ಪೂಜೆ,ಪಂಚಾಂಭೃತ ಅಭಿಷೇಕ,ನವಧಾನ್ಯ ಅಭಿಷೇಕ ,ಕ್ಷೀರಾಭಿಷೇಕ ,ಬಿಲ್ಪತ್ರೆ ಸೇರಿದಂತೆ ವಿವಿಧ ಪೂಜೆಗಳನ್ನು ಭಕ್ತರು ದೇವಸ್ಥಾನದಲ್ಲಿ ಮಾಡಲು ಅವಕಾಶ ಮಾಡಿಕೊಡದಿರುವುದು ತಪ್ಪು ,ಭಕ್ತರ ನಂಬಿಕೆಗೆ ಚ್ಯುತಿ ಬರಬಾರದು ,ಆದಷ್ಟು ಬೇಗ ಪ್ರಾರಂಭವಾಗಬೇಕು ಎಂಬುದು ನಮ್ಮ ಆಗ್ರಹ ಎಂಬುದು ರಾಮಚಂದ್ರಾಪುರ ಮಠದ ಮೂಲಕ ಮಹಾಬಲೇಶ್ವರ ದೇವಸ್ಥಾನದ ಆಡಳಿತಾಧಿಕಾರಿಯಾಗಿದ್ದ ಜಿ.ಕೆ ಹೆಗಡೆಯವರ ಮಾತು.
ಇನ್ನು ರಾಜ್ಯ ,ಹೊರರಾಜ್ಯದಿಂದ ಬರುವ ಭಕ್ತರು ದೇವಾಲಯಕ್ಕೆ ಬಂದು ಧಾರ್ಮಿಕ ಕಾರ್ಯ ನೆರವೇರಿಸಲು ಸಾಧ್ಯವಾಗುತ್ತಿಲ್ಲ. ಎಲ್ಲವೂ ಸರಿಯಾಗಬೇಕು . ಕೋರ್ಟ ನಲ್ಲಿ ತೀರ್ಪು ಆದಂತೆ ನಡೆದುಕೊಳ್ಳಬೇಕು ಎಂದು ದೇವಾಲಯದ ಅನುವಂಶೀಯ ಮುಖ್ಯ ಅರ್ಚಕರು ,ಗೋಕರ್ಣ ಪುಣ್ಯಾಶ್ರಮದ ರಾಜಗೋಪಾಲ ಅಡಿ ಗುರುಜಿ ಆಗ್ರಹ.
ಕಮರ್ಷಿಯಲ್ ಆದ ಪೂಜೆ !
ಇನ್ನು ದೇವಾಲಯದಿಂದ ಯಾವುದೇ ಪೂಜಾಕಾರ್ಯಗಳು ಭಕ್ತರಿಗೆ ಸಿಗದಿರುವುದನ್ನೇ ಬಂಡವಾಳ ಮಾಡಿಕೊಂಡ ವಾಣಿಜ್ಯೋಧ್ಯಮಿಗಳು ಆನ್ ಲೈನ್ ಮೂಲಕವೇ ಗೋಕರ್ಣದ ಶ್ರಾದ್ದಾ ಕಾರ್ಯಗಳನ್ನು ಬುಕ್ ಮಾಡಿಸುತಿದ್ದಾರೆ. ಯಾವ ಯಾವ ಕಾರ್ಯಕ್ಕೆ ಏಷ್ಟು ಎಂಬ ಪಟ್ಟಿ ಹಾಕಲಾಗುತಿದ್ದು ಧಾರ್ಮಿಕ ಪಿತ್ರುಕಾರ್ಯ ಮಾಡಿಸುವವರು ಆನ್ ಲೈನ್ ಮೂಲಕ ಬುಕ್ ಮಾಡಬಹುದು. ಹೀಗೆ ಬುಕ್ ಮಾಡುವವರಿಗೆ ಪ್ರಸಾದ ಪೂಜೆಯ ಪೋಟೋ ಕಳುಹಿಸಿ ಹಣ ಗಳಿಸುತಿದ್ದಾರೆ.
Kumta: ಶ್ರೀ ಶಾಂತಿಕಾ ಪರಮೇಶ್ವರಿ ದೇವಿಗೆ ವಿಶೇಷ ಹೂವಿನ ಅಲಂಕಾರ ಹೇಗಿದೆ ವಿಡಿಯೋ ನೋಡಿ
ಇನ್ನು ದೇವಾಲಯದ ಆಡಳಿತ ಮಂಡಳಿಯಿಂದಾಗಲಿ ಅಥವಾ ಆಡಳಿತದಿಂದಾಗಲಿ ಆನ್ ಲೈನ್ ಸೇವೆ ಪೂಜೆಗಳು ಇಲ್ಲ .ಆದರೇ ಅನಧಿಕೃತವಾಗಿ ಕೆಲವರು ಗೋಕರ್ಣದ ಹೆಸರಿನಲ್ಲಿ ಹಣ ಗಳಿಸಲು ಮುಂದಾಗಿರುವುದು ಸಹ ಭಕ್ತರ ನಂಬಿಕೆಗೆ ಪೆಟ್ಟು ಬೀಳುವಂತೆ ಮಾಡಿದೆ.
ದೇವಾಲಯದಿಂದ ಭಕ್ತರಿಗೆ ಸೇವಾಕಾರ್ಯ ಆರಂಭ ಮಾಡಿದಲ್ಲಿ ಭಕ್ತರಿಗೂ ಅನುಕೂಲ ಆಗುವ ಜೊತೆ ದೇವಾಲಯಕ್ಕೂ ಆಧಾಯ ಬರಲಿದೆ. ಆದರೇ ನಾಲ್ಕು ವರ್ಷಗಳಿಂದ ಹುಚ್ಚು ಮುಂಡೆ ಮದುವೆಯಲ್ಲಿ ಉಂಡವನೇ ಜಾಣ ಎನ್ನುವಂತಾಗಿದ್ದು ಇನ್ನಾದರೂ ಉಸ್ತುವಾರಿ ಸಮಿತಿ ಈ ಬಗ್ಗೆ ಗಮನ ಹರಿಸಿ ಭಕ್ತರಿಗೆ ಮಹಾಬಲೇಶ್ವರ ಹೆಸರಿನಲ್ಲಿ ಆಗುವ ಮೋಸಗಳು ತಪ್ಪಬೇಕಿದೆ.