Karnataka :ರಷ್ಯ -ಉಕ್ರೇನ್ ಯುದ್ಧದಲ್ಲಿ ಮಡಿದ ವಿದೇಶಿ ಯೋಧನಿಗೆ ಗೋಕರ್ಣದಲ್ಲಿ ವಿಡಿಯೋ ಕಾಲ್ ಮೂಲಕ ಅಪರ ಕಾರ್ಯ ! ಏನಿದು ವಿಶೇಷ


Karnataka :ರಷ್ಯ -ಉಕ್ರೇನ್ ಯುದ್ಧದಲ್ಲಿ ಮಡಿದ ವಿದೇಶಿ ಯೋಧನಿಗೆ ಗೋಕರ್ಣದಲ್ಲಿ ವಿಡಿಯೋ ಕಾಲ್ ಮೂಲಕ ಅಪರ ಕಾರ್ಯ ! ಏನಿದು ವಿಶೇಷ
ಕಾರವಾರ :-ರಷ್ಯಾ ಹಾಗೂ ಉಕ್ರೇನ್ ಯುದ್ಧದಲ್ಲಿ ಮಡಿದ ರಷ್ಯಾದ ಯೋಧನಿಗೆ ಪುರಾಣ ಪ್ರಸಿದ್ಧ ಗೋಕರ್ಣದ (gokarna) ಶ್ರೀ ಮಹಾಬಲೇಶ್ವರ ಕ್ಷೇತ್ರದಲ್ಲಿ ಅಪರ ಕಾರ್ಯ ವನ್ನು ಅವರ ಕುಟುಂಬದವರು ಹಿಂದೂ ಸಂಪ್ರದಾಯದಂತೆ ನೆರವೇರಿಸಿದ ಅಪರೂಪದ ಘಟನೆ ನಡೆದಿದೆ.
ರಷ್ಯಾ ಹಾಗೂ ಉಕ್ರೇನ್ ಯುದ್ಧದಲ್ಲಿ ಮಡಿದ ರಷ್ಯಾದ ಯೋಧ ಸೆರ್ಗಯ್ ಗ್ರಾಬ್ಲವ್ ಅಪರ ಕಾರ್ಯವನ್ನು ಪುರೋಹಿತರಾದ ವೇ. ಪ್ರಶಾಂತ ಹಿರೇಗಂಗೆ ನೇತೃತ್ವದಲ್ಲಿ ಅವರ ಸಂಬಂಧಿ ಎಲಿನಾ ರವರ ಅಣತಿಯಂತೆ ನಾರಾಯಣಬಲಿ ನಡೆಸಿ ,ಪಿಂಡ ಬಿಟ್ಟು ಆತ್ಮಕ್ಕೆ ಸದ್ಗತಿ ದೊರೆಯಲೆಂದು ಪ್ರಾರ್ಥಿಸಲಾಯಿತು.
ಇದನ್ನೂ ಓದಿ:-Gokarna: ಸಮುದ್ರಪಾಲಾದ ವೈದ್ಯಕೀಯ ವಿದ್ಯಾರ್ಥಿನಿಯರು
ಈ ಕಾರ್ಯವನ್ನು ರಷ್ಯಾದಿಂದ ಅವರ ಕುಟುಂಬದವರು ವೀಕ್ಷಿಸಿದರು.ಮೃತ ಯೋಧ ಸೆರ್ಗಯ್ ಗ್ರಾಬ್ಲವ್ ಕಳೆದ 18 ವರ್ಷದಿಂದ ಗೋಕರ್ಣ ಕ್ಕೆ ಬರುತಿದ್ದರು, ಹಿಂದೂ ಧರ್ಮದ ಕಡೆ ವಾಲಿದ್ದ ಅವರು ವಾರಣಾಸಿಯಲ್ಲಿ ದೀಕ್ಷೆ ಪಡೆದಿದ್ದರು. ಅಪಾರ ಅಭಿಮಾನಿ ,ಭಕ್ತರನ್ನು ಸಹ ಅವರು ಹೊಂದಿದ್ದರು.ಎಲ್ಲಿ ರಷ್ಯ ,ಉಕ್ರೇನ್ ಯುದ್ದಘೋಷಣೆಯಾಯಿತೋ ಆಗ ಮತ್ತೆ ಕರ್ತವ್ಯಕ್ಕೆ ತೆರಳಿದ್ದ ಅವರು ಎಪ್ರಿಲ್ 28 ರಂದು ಹುತಾತ್ಮರಾಗಿದ್ದರು.