Karnataka|ಸೆಲ್ಫಿ ತೆಗೆಯಲು ಹೋಗಿ ಸಮುದ್ರಪಾಲಾದ ಶಿವಮೊಗ್ಗದ ಪ್ರವಾಸಿಗ
Karnataka:-A tourist from Shivamogga drowned while taking a selfie at Gokarna Om Beach in Uttara Kannada. Police and lifeguards recovered the body.
09:12 PM Oct 03, 2025 IST | ಶುಭಸಾಗರ್
Karnataka|ಸೆಲ್ಫಿ ತೆಗೆಯಲು ಹೋಗಿ ಸಮುದ್ರಪಾಲಾದ ಶಿವಮೊಗ್ಗದ ಪ್ರವಾಸಿಗ
Advertisement
ಕಾರವಾರ :- ಸೆಲ್ಫಿ ತೆಗೆಯಲು ಹೋಗಿ ಸಮುದ್ರದಲ್ಲಿ ಮುಳಗಿ ಪ್ರವಾಸಿಗ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಓಂ ಕಡಲ ತೀರದಲ್ಲಿ ನಡೆದಿದೆ. ಶಿವಮೊಗ್ಗ (shivamogga)ಮೂಲದ ಅಸ್ಲಾಂ (45)
ಮೃತಪಟ್ಟ ಪ್ರವಾಸಿಗನಾಗಿದ್ದು ಶಿವಮೊಗ್ಗ ದಿಂದ 10ಜನರ ಜೊತೆಯಲ್ಲಿ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದನು.ಈ ವೇಳೆ ಓಂ ಬೀಚ್ ನಲ್ಲಿ ಕಲ್ಲುಬಂಡೆಯ ಮೇಲೆ ಸೆಲ್ಫೆ ತೆಗೆಯುವಾಗ ಕಾಲುಜಾರಿ ಬಿದ್ದು ಸಮುದ್ರಪಾಲಾಗಿದ್ದನು. ಮೃತದೇಹವನ್ನು ಗೋಕರ್ಣದ ಪೊಲೀಸರು ಹಾಗೂ ಲೈಫ್ ಗಾರ್ಡ ಸಿಬ್ಬಂದಿ ಸಮುದ್ರದ ಮೇಲೆ ತಂದಿದ್ದು ,ಶವವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನೆ ಮಾಡಿದ್ದಾರೆ. ಘಟನೆ ಸಂಬಂಧ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement