Karnataka:ಎಲ್ಲಿ ಎಷ್ಟು ಮಳೆ! ಹೊನ್ನಾವರದಲ್ಲಿ ಕುಸಿದ ಗುಡ್ಡ
Karnataka:ಎಲ್ಲಿ ಎಷ್ಟು ಮಳೆ! ಹೊನ್ನಾವರದಲ್ಲಿ ಕುಸಿದ ಗುಡ್ಡ

Karnataka Rain news:- ರಾಜ್ಯದಲ್ಲಿ ಮೇ 30ರವರೆಗೆ ಮಳೆ ಮುಂದುವರೆಯಲಿದ್ದು, ರಾಜ್ಯದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಕನ್ನಡ,ಉಡುಪಿ, ಮಂಗಳೂರಿನಲ್ಲಿ ಹೆಚ್ಚಿನ ಮಳೆಯಾದರೇ ಶಿವಮೊಗ್ಗ ,ಚಿಕ್ಕಮಗಳೂರು ಭಾಗದಲ್ಲೂ ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ:-Kumta :ಕಡಲ ತೀರಕ್ಕೆ ತೇಲಿಬಂದ ಹಡಗಿನ ರ್ಯಾಪ್ಟ್
ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಹೊನ್ನಾವರ ಭಾಗದ ಸರ್ಕಲ್ ನ ರಾಷ್ಟ್ರೀಯ ಹೆದ್ದಾರಿ ಬಳಿ ರಾತ್ರಿ ಅಲ್ಪ ಪ್ರಮಾಣದ ಗುಡ್ಡ ಕುಸಿತವಾಗಿದ್ದು, IRB ಕಂಪನಿ ಸಿಬ್ಬಂದಿ ಮಣ್ಣುಗಳನ್ನು ತೆರವು ಮಾಡಿ ಸುಲಭ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ.

ಇನ್ನು ಈ ಭಾಗದಲ್ಲಿ ಹೆಚ್ಚಿನ ಮಳೆಯಾದರೇ ಮತ್ತೆ ಗುಡ್ಡ ಕುಸಿಯುವ ಆತಂಕವಿದ್ದು ಸವಾರರು ಎಚ್ಚರಿಕೆಯಿಂದ ತೆರಳಬೇಕಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 150 ಮಿ.ಮೀ ಮಳೆಯಾಗಿದೆ.
ರಾಜ್ಯದಲ್ಲಿ 100 ಮಿ.ಮೀ ಗೂ ಹೆಚ್ಚು ಮಳೆ ಬಂದ ಪ್ರದೇಶದ ವಿವರ:-
