Karwar :ಸಾಯಿ ಮಂದಿರದಲ್ಲಿ 15 ಕೆಜಿ ಬೆಳ್ಳಿ ಕಳ್ಳತನ ಆರೋಪ ಸಿಸಿ ಕ್ಯಾಮರಾದಲ್ಲಿ ಸೆರೆ!
ಕಾರವಾರ :- ಸಾಯಿ ಮಂದಿರದ ಬೀಗ ಮುರಿದು ಮಂದಿರದಲ್ಲಿದ್ದ 15 ಕೆ.ಜಿಗೂ ಹೆಚ್ಚು ಬೆಳ್ಳಿ ವಸ್ತುಗಳನ್ನು ಕಳ್ಳತನಮಾಡಿ ಕಳ್ಳರು ಪರಾರಿಯಾದ ಘಟನೆ ಕಾರವಾರ ನಗರದ ಕೋಡಿಬಾಗ್ ನ ಸಾಯಿಕಟ್ಟ ದಲ್ಲಿ ಇರುವ ಸಾಯಿಬಾಬ ಮಂದಿರದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.
11:38 AM Apr 15, 2025 IST | ಶುಭಸಾಗರ್
Karwar :ಸಾಯಿ ಮಂದಿರದಲ್ಲಿ 15 ಕೆಜಿ ಬೆಳ್ಳಿ ಕಳ್ಳತನ ಆರೋಪ ಸಿಸಿ ಕ್ಯಾಮರಾದಲ್ಲಿ ಸೆರೆ!
Advertisement
ಕಾರವಾರ :- ಸಾಯಿ ಮಂದಿರದ ಬೀಗ ಮುರಿದು ಮಂದಿರದಲ್ಲಿದ್ದ 15 ಕೆ.ಜಿಗೂ ಹೆಚ್ಚು ಬೆಳ್ಳಿ ( silver )ವಸ್ತುಗಳನ್ನು ಕಳ್ಳತನಮಾಡಿ ಕಳ್ಳರು ಪರಾರಿಯಾ ಘಟನೆ ಕಾರವಾರ ನಗರದ ಕೋಡಿಬಾಗ್ ನ ಸಾಯಿಕಟ್ಟ ದಲ್ಲಿ ಇರುವ ಸಾಯಿಬಾಬ ಮಂದಿರದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.

ಇದನ್ನೂ ಓದಿ:-Karwar :ಮನೆ ಕಳ್ಳತನ ಆರೋಪ ಯುವಕನನ್ನು ಕಟ್ಟಿಹಾಕಿದ ಗ್ರಾಮಸ್ಥರು!
ಮಂದಿರದ ಬೀಗ ಮುರಿದು ಕಳ್ಳರುಮಂದಿರದಲ್ಲಿನ ಸಾಯಿಬಾಬನ ಬೆಳ್ಳಿ ಪಾದಕೆ,ಕಿರೀಟ, ಛತ್ರಿ, ಸೇರಿದಂತೆ ಬೆಳ್ಳಿ ಪಾತ್ರೆಗಳ ಕಳ್ಳತನಮಾಡಿ ಪರಾರಿಯಾಗಿದ್ದು ಒಟ್ಟು 15 ಕೆ.ಜಿಗೂ ಹೆಚ್ಚು ತೂಕದ ಬೆಳ್ಳಿ ವಸ್ತುಗಳಾಗಿವೆ ಎಂದುಆರೋಪಿಸಿದ್ದಾರೆ.
ಸ್ಥಳಕ್ಕೆ ಕಾರವಾರ (karwar )ನಗರ ಠಾಣೆ ಪೊಲೀಸರು (police)ಪರಿಶೀಲನೆ ನಡೆಸಿದ್ದು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳತನದ ಅಂದಾಜು ಮೌಲ್ಯ ಎಷ್ಟು ಎಂಬುದು ನಿಖರವಾಗಿ ತಿಳಿಯಬೇಕಿದೆ.
ದೇವಸ್ಥಾನದ ಕಳ್ಳತನ ವಿಡಿಯೋ ನೋಡಿ:-
Advertisement