ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Bjp ನಾಯಕರ ಮಾತಿನಿಂದ CM ಪತ್ನಿಗೆ ಕಿರಿಕಿರಿ ಕೈಮುಗಿದು ಕೇಳ್ತೀನಿ ಎಂದ ಮಂಕಾಳು!

ಕಾರವಾರ:- ಬಿಜೆಪಿ ನಾಯಕರ ಮಾತಿನಿಂದ ಸಿಎಂ ಪತ್ನಿ ನೊಂದಿದ್ದಾರೆ, ನೊಂದು ಸೈಟ್ ಗಳು ನನಗೆ ಬೇಡವೆ ಬೇಡ ಅಂತಾ ಹಿಂತಿರುಗಿಸಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ.
05:50 PM Oct 01, 2024 IST | ಶುಭಸಾಗರ್

ಬಿಜೆಪಿ ನಾಯಕರ ಮಾತಿನಿಂದ ಸಿಎಂ ಪತ್ನಿ ನೊಂದಿದ್ದಾರೆ- ಮಂಕಾಳು ವೈದ್ಯ

Advertisement

ಕಾರವಾರ:- ಬಿಜೆಪಿ ನಾಯಕರ ಮಾತಿನಿಂದ ಸಿಎಂ ಪತ್ನಿ ನೊಂದಿದ್ದಾರೆ, ನೊಂದು ಸೈಟ್ ಗಳು ನನಗೆ ಬೇಡವೆ ಬೇಡ ಅಂತಾ ಹಿಂತಿರುಗಿಸಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ.

ಇಂದು ಕಾರವಾರದ ಕೆಡಿಪಿ ಸಭೆಯಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ, ಸಿಎಂ ಆಗಿ ಯಾವುದೇ ಆಸ್ತಿ ಮಾಡಿಲ್ಲ, ಸಿಎಂ ಪತ್ನಿಗೆ ಆಸ್ತಿಗಿಂತಲೂ ರಾಜ್ಯದ ಹಿತ ಮುಖ್ಯ .

ಇದನ್ನೂ ಓದಿ:-Karwar ನಗರಸಭೆಯಲ್ಲೊಂದು NIGHT SHELTER ಏನಿದು ಗೊತ್ತಾ? Video ನೋಡಿ

Advertisement

ರಾಜಕೀಯ ಟೀಕೆ ಗಳಿಂದ ನೊಂದು ಮುಡಾ (Muda) ಸೈಟ್ ಗಳನ್ನ ಹಿಂತಿರುಗಿಸಿದ್ದಾರೆ.ಕಳೆದ 40 ವರ್ಷಗಳಿಂದ ಸಿಎಂ ಪತ್ನಿ ಸರಳವಾಗಿ ಜೀವನ ಮಾಡಿದ್ದಾರೆ. ಸಿಎಂ ಪತ್ನಿ ಅಂತಾ ಯಾವತ್ತೂ ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ, ಇಂದು ಅವರು ಸೈಟ್ ರಿಟರ್ನ್ ಮಾಡಿದನ್ನು ನೋಡಿ ನಂಗೆ ದುಃಖ ಆಯ್ತು.

ಬಿಜೆಪಿ ಯವರಿಗೆ ಕೈ ಮುಗಿದಿ ಕೇಳಿ ಕೊಳ್ತೆನಿ,ಈಗ ಮುಡಾದ 14 ಸೈಟ್ ಗಳನ್ನ ಹಿಂತಿರುಗಿಸಿ ಆಗಿದೆ
ಈಗ್ಲಾದ್ರೂ ನೆಮ್ಮದಿಯಿಂದ ರಾಜ್ಯದ ಅಭಿವೃದ್ಧಿ ಮಾಡಲು ಬಿಡಿ,ಚುನಾವಣೆ ಬಂದಾಗ ರಾಜಕೀಯ ಮಾಡೋಣ ಇದನ್ನ ಇಲ್ಲಿಗೆ ನಿಲ್ಲಿಸಿ ಎಂದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಹೇಳಿದರು.

Advertisement
Tags :
BjpBJP criticismCM's wife hurtMankalu vaidyaMinister mankalu vaidyamuda case
Advertisement
Next Article
Advertisement