Bhatkal:ಹೆದ್ದಾರಿಯಲ್ಲಿ ವಾಹನ ತಡೆದು ದರೋಡೆ-ಗರುಡ ಗ್ಯಾಂಗ್ ಆರೆಸ್ಟ್
ಹೆದ್ದಾರಿಯಲ್ಲಿ ವಾಹನ ತಡೆದು ದರೋಡೆ-ಗರುಡ ಗ್ಯಾಂಗ್ ಆರೆಸ್ಟ್.

ಕಾರವಾರ:- ಅಂತರ್ ಜಿಲ್ಲೆಗಳ ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ದರೋಡೆ ಮಾಡುತಿದ್ದ ಗರುಡಾ ಗ್ಯಾಂಗ್ನ ಮೂವರನ್ನು ಭಟ್ಕಳ (bhatkal) ಪೊಲೀಸರು(police) ದರೋಡೆಗೆ ಹೊಂಚುಹಾಕಿ ಕುಳಿತಿರುವಾಗಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರಿನ ಚೊಕ್ಕಬೆಟ್ಟು ನಿವಾಸಿ ಜಲೀಲ್ ಹುಸೈನ್ (39), ಭಟ್ಕಳ ಹೆಬಳೆ ಗಾಂಧಿನಗರದ ನಾಶೀರ್ ಹಕೀಮ್ (26) ಹಾಗೂ ಭಟ್ಕಳ ಗಣೇಶನಗರದ ಅಪ್ರಾಪ್ತ ಯುವಕನ ಬಂಧನವಾಗಿದ್ದು ಇಬ್ಬರು ಪರಾರಿಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಬಿಲಾಲಖಂಡ ಗ್ರಾಮದ ಸಾಗರ ರಸ್ತೆಯ ರಾಜ್ಯ ಹೆದ್ದಾರಿಯಲ್ಲಿ ದರೋಡೆಗೆ ಸ್ಕೆಚ್ ಹಾಕಿದ್ದ ಒಟ್ಟು 5 ಮಂದಿ ಆರೋಪಿಗಳು ದರೋಡೆ ಮಾಡುವ ಉದ್ದೇಶದಿಂದ ಹೊಂಚು ಹಾಕುತ್ತಿದ್ದರು.ಕಾರಿನಲ್ಲಿ ಚಾಕು, ಕಾರಾಪುಡಿ, ಮಂಕಿಕ್ಯಾಪ್, ಬೆಲ್ಟ್, ತಾಡಪತ್ರೆ ಮುಂತಾದ ವಸ್ತುಗಳನ್ನು ಇಟ್ಟುಕೊಂಡು ರಸ್ತೆಯಲ್ಲಿ ಹೋಗುವ ಜನರನ್ನು ದರೋಡೆ ಗೆ ಸಿದ್ದರಾಗಿದ್ದ ಗರುಡ ಗ್ಯಾಂಗ್ ಗುಳ್ಳಿ ರಸ್ತೆ ಕ್ರಾಸ್ ಹತ್ತಿರ ಕತ್ತಲೆಯಲ್ಲಿ ಕಾರಿನಲ್ಲಿ ಕುಳಿತಿದ್ದಾಗ, ಭಟ್ಕಳ ಗ್ರಾಮೀಣ ಠಾಣೆಯ ಪಿಎಸ್ಐ ರನ್ನಗೌಡ್ ಪಾಟೀಲ್ ವಿಚಾರಿಸಲು ಹೋಗಿದ್ದರು.
ಇದನ್ನೂ ಓದಿ:- Bhatkal: ಮತ್ಸ್ಯ ಮೇಳ ಅನುಮೋದನೆಯಿಲ್ಲದೇ 9.85 ಕೋಟಿ ವೆಚ್ಚ,ನಿಯಮ ಉಲ್ಲಂಘನೆಯ ರಹಸ್ಯ ಬಿಚ್ಚಿಟ್ಟ THE- FILE
ಪೊಲೀಸರನ್ನು ಕಂಡಕೂಡಲೇ ತಪ್ಪಿಸಿಕೊಳ್ಳಲು ಕಾರನ್ನು ಹಿಮ್ಮುಖವಾಗಿ ಚಲಾಯಿಸಿ ನಿಯಂತ್ರಣ ತಪ್ಪಿ ಗಟಾರಿನಲ್ಲಿ ಬಿದ್ದಿತ್ತು. ಈ ವೇಳೆ ಮೂವರು ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದರೆ ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದು ಭಟ್ಕಳ(bhatkal) ಮುಗ್ದಂ ಕಾಲೋನಿಯ ಜಿಶಾನ್ ಹಾಗೂ ಬಟ್ಟಗಾವ್ ನಿವಾಸಿ ನಬೀಲ್ ಪರಾರಿಯಾದವರಾಗಿದ್ದು, ಅರೋಪಿ ಚೊಕ್ಕಬೆಟ್ಟುವಿನ ಜಲೀಲ್ ಹುಸೈನ್ ಅಂತರ್ ಜಿಲ್ಲಾ ನಟೋರಿಯಸ್ ಕಳ್ಳನಾಗಿದ್ದು, ಈತನ ಮೇಲೆ ಈಗಾಗಲೇ 11 ಪ್ರಕರಣಗಳು ದಾಖಲಾಗಿದೆ.
ಆರೋಪಿ ಹೆಬಳೆಯ ನಾಶೀರ್ ಹಕೀಮ್ ಕೂಡಾ ಅಂತರ್ ಜಿಲ್ಲಾ ನಟೋರಿಯಸ್ ಕಳ್ಳನಾಗಿದ್ದು, ಈತನ ವಿರುದ್ಧವೂ ಈಗಾಗಲೇ 2 ಪ್ರಕರಣಗಳು ದಾಖಲಾಗಿದೆ.
ಭಟ್ಕಳ ಗಣೇಶನಗರದ ಅಪ್ರಾಪ್ತ ಯುವಕನ ಮೇಲೂ ಈ ಹಿಂದೆ 1 ಪ್ರಕರಣಗಳು ದಾಖಲಾಗಿತ್ತು. ಬಂಧಿತ ಆರೋಪಿಗಳ ವಿರುದ್ಧ ಗುನ್ನಾ ನಂ: 56/2025 ಕಲಂ: 310(4), 310(5), ಬಿ.ಎನ್.ಎಸ್-2023 ಅಡಿ ಪ್ರಕರಣ ದಾಖಲು ಮಾಡಲಾಗಿದೆ.
