For the best experience, open
https://m.kannadavani.news
on your mobile browser.
Advertisement

Honnavar : ಮಂಗನ ಕಾಯಿಲೆಗೆ ವೃದ್ದ ಬಲಿ ಹೊನ್ನಾವರದಲ್ಲಿ ಎರಡಕ್ಕೇರಿದ ಸಾ***

Honnavar :- ಹಲವು ವರ್ಷಗಳ ಹಿಂದೆ ಸರಣಿ ಸಾವು ಸಂಭವಿಸಿ ಜಿಲ್ಲೆಯಾದ್ಯಂತ ಭೀತಿ ಸೃಷ್ಟಿಸಿದ್ದ ಮಂಗನಕಾಯಿಲೆಯು (KFD) ಆಗಾಗ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸುತ್ತಿದೆ. ಹೊನ್ನಾವರ (Honnavar) ತಾಲೂಕಿನಲ್ಲಿ ಮತ್ತೆ ಮಂಗನಕಾಯಿಲೆಯ ಪ್ರಕರಣಗಳು ಬೆಳಕಿಗೆ ಬಂದಿವೆ. ಪ್ರಸಕ್ತ ಸಾಲಿನಲ್ಲಿ ಈ ಕಾಯಿಲೆಯಿಂದ ಒಟ್ಟು ಎರಡು ಸಾವು ಸಂಭವಿಸಿದ್ದು ಆತಂಕವನ್ನುಂಟುಮಾಡಿದೆ.
01:52 PM May 25, 2025 IST | ಶುಭಸಾಗರ್
Honnavar :- ಹಲವು ವರ್ಷಗಳ ಹಿಂದೆ ಸರಣಿ ಸಾವು ಸಂಭವಿಸಿ ಜಿಲ್ಲೆಯಾದ್ಯಂತ ಭೀತಿ ಸೃಷ್ಟಿಸಿದ್ದ ಮಂಗನಕಾಯಿಲೆಯು (KFD) ಆಗಾಗ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸುತ್ತಿದೆ. ಹೊನ್ನಾವರ (Honnavar) ತಾಲೂಕಿನಲ್ಲಿ ಮತ್ತೆ ಮಂಗನಕಾಯಿಲೆಯ ಪ್ರಕರಣಗಳು ಬೆಳಕಿಗೆ ಬಂದಿವೆ. ಪ್ರಸಕ್ತ ಸಾಲಿನಲ್ಲಿ ಈ ಕಾಯಿಲೆಯಿಂದ ಒಟ್ಟು ಎರಡು ಸಾವು ಸಂಭವಿಸಿದ್ದು ಆತಂಕವನ್ನುಂಟುಮಾಡಿದೆ.
honnavar   ಮಂಗನ ಕಾಯಿಲೆಗೆ ವೃದ್ದ ಬಲಿ ಹೊನ್ನಾವರದಲ್ಲಿ ಎರಡಕ್ಕೇರಿದ ಸಾ

Honnavar : ಮಂಗನ ಕಾಯಿಲೆಗೆ ವೃದ್ದ ಬಲಿ ಹೊನ್ನಾವರದಲ್ಲಿ ಎರಡಕ್ಕೇರಿದ ಸಾ***

Advertisement

ಅತೀ ಕಡಿಮೆ ಬೆಲೆಯಲ್ಲಿ ಅಗತ್ಯ ವಸ್ತಗಳ ಕರೀದಿಗೆ ಒಮ್ಮೆ ಭೇಟಿನೀಡಿ.-KSRTC ಬಸ್ ನಿಲ್ದಾಣದ ಹಿಂಭಾಗ,ಬ್ರಾಹ್ಮಣ ಗಲ್ಲಿ, ,ಕಾರವಾರ

 Honnavar :- ಹಲವು ವರ್ಷಗಳ ಹಿಂದೆ ಸರಣಿ ಸಾವು ಸಂಭವಿಸಿ ಜಿಲ್ಲೆಯಾದ್ಯಂತ ಭೀತಿ ಸೃಷ್ಟಿಸಿದ್ದ ಮಂಗನಕಾಯಿಲೆಯು (KFD) ಆಗಾಗ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸುತ್ತಿದೆ. ಹೊನ್ನಾವರ (Honnavar) ತಾಲೂಕಿನಲ್ಲಿ ಮತ್ತೆ ಮಂಗನಕಾಯಿಲೆಯ ಪ್ರಕರಣಗಳು ಬೆಳಕಿಗೆ ಬಂದಿವೆ. ಪ್ರಸಕ್ತ ಸಾಲಿನಲ್ಲಿ ಈ ಕಾಯಿಲೆಯಿಂದ ಒಟ್ಟು ಎರಡು ಸಾವು ಸಂಭವಿಸಿದ್ದು ಆತಂಕವನ್ನುಂಟುಮಾಡಿದೆ.

ಮಂಗನ ಕಾಯಿಲೆಯಿಂದ ಹಳದಿಪುರದ 74 ವರ್ಷದ ನಾಣಿ ಹಮ್ಮಣಗಭಡ ಎಂಬ ವೃದ್ಧರೊಬ್ಬರು  ಮೃತಪಟ್ಟಿದ್ದಾರೆ. ಮೇ 9ರಂದು ಇವರಲ್ಲಿ ಕೆಎಫ್‌ಡಿ ಸೋಂಕು ಕಂಡು ಬಂದಿತ್ತು. ತಾಲೂಕು ಆಸ್ಪತ್ರೆಯಿಂದ ಆರೋಗ್ಯ ಇಲಾಖೆ ಅಧಿಕಾರಿಗಳು ಅವರನ್ನು ಮಣಿಪಾಲಕ್ಕೆ ಕಳುಹಿಸಿದ್ದರು. ಮಣಿಪಾಲದ ಕೆಎಫ್‌ಡಿ ವಿಭಾಗದಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರು ಜನ್ನಕಡ್ಕಲ ಗ್ರಾಮದಲ್ಲಿ ಒಣ ಎಲೆಗಳನ್ನು ಸಂಗ್ರಹಿಸುವ ಕೆಲಸಕ್ಕೆ ಹೋಗಿದ್ದು, ಅಲ್ಲಿಂದಲೇ ಅನಾರೋಗ್ಯಕ್ಕೆ ತುತ್ತಾಗಿದ್ದರು ಎನ್ನಲಾಗಿದೆ. ಇದು ಈ ಸಾಲಿನಲ್ಲಿ ಮಂಗನಕಾಯಿಲೆಯಿಂದ ಸಂಭವಿಸಿದ ಸಾವು ಎರಡನೇ ಪ್ರಕರಣವಾಗಿದೆ.

ಇದನ್ನೂ ಓದಿ:-Honnavar: ಅಕ್ರಮ ಮರಳುಗಾರಿಕೆ ಕಣ್ಣು,ಕಿವಿ ಮುಚ್ಚಿ ಕುಳಿತ ಜಿಲ್ಲಾಡಳಿತ !ಹಸಿರು ಪೀಠದ ಆದೇಶಕ್ಕೆ ಕಿಮ್ಮತ್ತು ಇಲ್ಲ.

ಏಪ್ರಿಲ್ 9ರಂದು ಚಿಕ್ಕನಕೋಡ ಮೂಲದ 63 ವರ್ಷದ ವೃದ್ಧರೊಬ್ಬರಲ್ಲಿ ಮಂಗನಕಾಯಿಲೆ ದೃಢಪಟ್ಟಿತ್ತು. ಕೋಮಾ ಸ್ಥಿತಿಗೆ ಹೋಗಿದ್ದ ಅವರನ್ನು ಹೊನ್ನಾವರ ತಾಲೂಕು ಆಸ್ಪತ್ರೆಯಿಂದ ಮಣಿಪಾಲದ ಕೆಎಂಸಿಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದರು. ತಾಲೂಕಿನಲ್ಲಿ ಒಟ್ಟು ಐವರು ಚಿಕಿತ್ಸೆ ಪಡೆಯುತ್ತಿದ್ದರು. ಅವರಲ್ಲಿ ಮೂರು ಜನ ಗುಣಮುಖರಾಗಿದ್ದಾರೆ. ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಆರೋಗ್ಯ ಇಲಾಖೆಯಿಂದ ಕ್ರಮ: 

ಕಾಡಿನಲ್ಲಿ ಕೆಎಫ್‌ಡಿ ಘಟಕದವರು ಉಣ್ಣೆ ಸಂಗ್ರಹಿಸಿ ವೈರಸ್ ಇರುವುದನ್ನು ಪತ್ತೆ ಮಾಡಿ ಮಂಗನ ಸಾವು ಸಂಭವಿಸಿದ್ದರೆ ಮರಣೋತ್ತರ ಪರೀಕ್ಷೆ ನಡೆಸಿ ಕಾಯಿಲೆಯ ಕುರಿತು ಮಾಹಿತಿ ಪಡೆಯಲಾಗುತ್ತದೆ. ಕಾಯಿಲೆಗೆ ಒಳಗಾದ ಮಂಗನಿಂದ ಹೊರ ಹೊಮ್ಮಿದ ಉಣ್ಣೆ ಸಾಯಿಸಲು ಸ್ಪ್ರೇ ಮಾಡಲಾಗುವುದು. ಮಂಗನಕಾಯಿಲೆಯು ಸಾಮಾನ್ಯವಾಗಿ ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತದೆ. ಮಳೆ ಪ್ರಾರಂಭವಾಗುತ್ತಿದ್ದಂತೆ ಮಂಗನಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ