ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Sirsi: ಒಂದು ವಾರದ ನಂತರ ಗಂಗಾವಳಿ ನದಿಯಲ್ಲಿ ಪತ್ತೆಯಾಯ್ತು ಪವನ್ ಶ**

ಕಾರವಾರ :- ಜಲಪಾತ ವೀಕ್ಷಣೆಗಾಗಿ ಸ್ನೇಹಿತನೊಂದಿಗೆ ತೆರಳಿದ್ದ ಶಿರಸಿ(sirsi) ತಾಲೂಕಿನ ಬನವಾಸಿ ಭಾಗದ ಸೋಮನಳ್ಳಿ ಗ್ರಾಮದ ಉಂಬಳೆ ಕೊಪ್ಪದ ಯುವಕ ಪವನ್ ಗಣಪತಿ ಜೋಗಿ (24 ವರ್ಷ) ಶವ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದೆ
10:13 PM Jun 28, 2025 IST | ಶುಭಸಾಗರ್
ಕಾರವಾರ :- ಜಲಪಾತ ವೀಕ್ಷಣೆಗಾಗಿ ಸ್ನೇಹಿತನೊಂದಿಗೆ ತೆರಳಿದ್ದ ಶಿರಸಿ(sirsi) ತಾಲೂಕಿನ ಬನವಾಸಿ ಭಾಗದ ಸೋಮನಳ್ಳಿ ಗ್ರಾಮದ ಉಂಬಳೆ ಕೊಪ್ಪದ ಯುವಕ ಪವನ್ ಗಣಪತಿ ಜೋಗಿ (24 ವರ್ಷ) ಶವ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದೆ

Sirsi: ಒಂದು ವಾರದ ನಂತರ ಗಂಗಾವಳಿ ನದಿಯಲ್ಲಿ ಪತ್ತೆಯಾಯ್ತು ಪವನ್ ಶ**

Advertisement

ಕಾರವಾರ :- ಜಲಪಾತ ವೀಕ್ಷಣೆಗಾಗಿ ಸ್ನೇಹಿತನೊಂದಿಗೆ ತೆರಳಿದ್ದ  ಶಿರಸಿ (sirsi) ತಾಲೂಕಿನ ಬನವಾಸಿ ಭಾಗದ ಸೋಮನಳ್ಳಿ ಗ್ರಾಮದ ಉಂಬಳೆ ಕೊಪ್ಪದ ಯುವಕ ಪವನ್ ಗಣಪತಿ ಜೋಗಿ (24 ವರ್ಷ) ಶವ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದೆ

ಇದನ್ನೂ ಓದಿ:-Sirsi :ಕಾಲುಜಾರಿ ಬಿದ್ದು ಜೋಗನ ಹಕ್ಕಲು ಜಲಪಾತದಲ್ಲಿ ಯುವಕ ನಾಪತ್ತೆ

ಸ್ನೇಹಿತ ವಾಸುದೇವ್ ಜೊತೆ ಶಿರಸಿ (sirsi) ಜೋಗನ ಹಕ್ಕಲು ಫಾಲ್ಸ್ ನೋಡಲು ಭಾನುವಾರ ಸಂಜೆ ತೆರಳಿದ್ದನು. ಈವೇಳೆ ಕಾಲುಜಾರಿ ಬಿದ್ದು ನೀರಿನಲ್ಲಿ ತೇಲಿ ಹೋಗಿದ್ದನು.

Advertisement

ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಈತನ ಹುಡುಕಾಟ ನಡೆಸಿದ್ದರು. ಆದರೇ ಹೆಚ್ಚಿನ ಮಳೆ ಹಾಗೂ ಜಲಪಾತದಲ್ಲಿ ಹೆಚ್ಚು ನೀರು ಇದ್ದ ಕಾರಣ ಎನ್.ಡಿ.ಆರ್.ಎಫ್ ತಂಡಕ್ಕೆ ಶವ ಶೋಧಕ್ಕಾಗಿ ಕರೆಸಲಾಗಿತ್ತು.

ಅಂಕೋಲದಿಂದ 28 ಜನರ ಎನ್.ಡಿ.ಆರ್.ಎಫ್ ತಂಡ ಶವ ಶೋಧ ವನ್ನು ನಡೆಸಿತ್ತು. ಆದರೇ ಇದೀಗ ಅಂಕೋಲಾ ತಾಲೂಕಿನ ಡೋಂಗ್ರಿ ಪಂಚಾಯ್ತಿ ವ್ಯಾಪ್ತಿಯ  ಮಳಗಾಂ ಬಳಿ ಪವನ್ ಶವ ಪತ್ತೆಯಾಗಿದೆ.

ಪವನ್ ಕಿವಿಯಲ್ಲಿ ಇದ್ದ  ಬಂಗಾರದ ಸ್ಟಾರ್ ಓಲೆ ಇರುವದನ್ನು ನೋಡಿ ಆತನ ಕುಟುಂಬದವರು ಈತನೇ ಪವನ್ ಎಂದು ಗುರುತಿಸಿದ್ದಾರೆ.

ಘಟನೆ ಸಂಬಂಧ ಶಿರಸಿ(sirsi) ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮರಣೋತ್ತರ ಪರೀಕ್ಷೆ ನಂತರ ಪವನ್ ಶವವನ್ನು ಕುಟುಂಬಸ್ತರಿಗೆ ಹಸ್ತಾಂತರಿಸಲು ಪೊಲೀಸರು ಸಿದ್ದತೆ ನಡೆಸಿದ್ದಾರೆ.

Advertisement
Tags :
Gangavali riverKarnatakNewsSirsiUttara KannadaUttarakannda
Advertisement
Next Article
Advertisement