Yana:ವಿಶ್ವ ಪ್ರಸಿದ್ಧ ಯಾಣ ಕ್ಷೇತ್ರಕ್ಕೆ ಪ್ರವಾಸಿಗರಿಗೆ ನಿಷೇಧ
Yana:ವಿಶ್ವ ಪ್ರಸಿದ್ಧ ಯಾಣ ಕ್ಷೇತ್ರಕ್ಕೆ ಪ್ರವಾಸಿಗರಿಗೆ ನಿಷೇಧ
ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಗಾಳಿ ಮಳೆ ನಿರಂತರವಾಗಿ ಸುರಿಯುತ್ತಿದೆ. ಒಂದೆಡೆ ಪಶ್ಚಿಮ ಘಟ್ಟ ಭಾಗದಲ್ಲಿ ನಿರಂತರ ಭೂ ಕುಸಿತವಾಗುತಿದ್ದು ಜೊತೆಗೆ ಹೆದ್ದಾರಿಯಲ್ಲಿಯೂ ಭೂ ಕುಸಿತವಾಗಿದೆ. ಹೀಗಾಗಿ ಹೆದ್ದಾರಿಯ 19 ಭಾಗಗಳಲ್ಲಿ ವಾಹನ ನಿಲುಗಡೆಗೆ ನಿರ್ಬಂಧ ವಿಧಿಸಿದರೇ ಇತ್ತ ಪ್ರವಾಸಿಗರು ಜಿಲ್ಲೆಯತ್ತ ಬರುತಿದ್ದು ಕುಮಟಾ ಭಾಗದ ಪ್ರಸಿದ್ಧ ಯಾಣ ಕ್ಷೇತ್ರವನ್ನು ವೀಕ್ಷಿಸಲು ಪ್ರವಾಸಿಗರು ಹೆಚ್ಚು ಬರುತಿದ್ದಾರೆ.
ಕಳೆದ ವರ್ಷ ಯಾಣ (yana) ಭಾಗದಲ್ಲಿ ಅಬ್ಬರದ ಮಳೆಗೆ ಗುಡ್ಡ ಕುಸುತಿವಾಗಿತ್ತು. ಇದೀಗ ಮತ್ತೆ ಮಳೆ ಹೆಚ್ಚಾಗುತಿದ್ದು ಮಳೆಯಿಂದ ಮತ್ತೆ ಭೂ ಕುಸಿತವಾಗುವ ಸಾಧ್ಯತೆ ಹಿನ್ನಲೆಯಲ್ಲಿ ಕತಗಾಲ್ ಅರಣ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಯಾಣ ಭಾಗಕ್ಕೆ ಪ್ರವಾಸಿಗರಿಗೆ ತಾತ್ಕಾಲಿಕ ನಿಷೇಧ ಹೇರಿದೆ.
ಇದನ್ನೂ ಓದಿ:-Kumta:ದೊಡ್ಮನೆ ಘಟ್ಟದಲ್ಲಿ ರಸ್ತೆಗೆ ಬಿದ್ದ ಬೃಹತ್ ಮರ: ಕುಮಟಾ-ಸಿದ್ದಾಪುರ ಮಾರ್ಗದ ಸಂಚಾರ ತಾತ್ಕಾಲಿಕ ಬಂದ್
ಸದ್ಯ ಮಳೆ ಮುಗಿಯುವ ವರೆಗೂ ಪ್ರವಾಸಿಗರಿಗೆ ಯಾಣ ಭಾಗಕ್ಕೆ ಪ್ರವೇಶ ನಿರ್ಬಂಧ ಇರಲಿದೆ.