Kumta : ಮಚ್ಚು ಬೀಸಿ ಹೊಡೆದಾಡಿದ ದಾಯಾದಿಗಳು- ಮಾರಣಾಂತಿಕ ಹಲ್ಲೆ.
Kumta : ಮಚ್ಚು ಬೀಸಿ ಹೊಡೆದಾಡಿದ ದಾಯಾದಿಗಳು- ಮಾರಣಾಂತಿಕ ಹಲ್ಲೆ.

ಕಾರವಾರ :- ಆಸ್ತಿ ವಿಚಾರದ ದಲ್ಲಿ ದಾಯದಿಗಳು ಮಚ್ಚಿನಲ್ಲಿ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ (kumta) ತಾಲೂಕಿನ ಮೊರ್ಸೆಯಲ್ಲಿ ನಡೆದಿದೆ.

ಆಸ್ತಿ ವಿಚಾರದಲ್ಲಿ ದಾಯಾದಿಗಳಾದ ಮಂಜುನಾಥ್ ನಾಯ್ಕ್ ಹಾಗೂ ಹನುಮಂತ ನಾಯ್ಕ್ ನಡುವೆ ಹಿಂದಿನಿಂದಲೂ ಜಗಳವಿತ್ತು.
ಇಂದು ಸಂಜೆ ಮನೆಯ ಶಡ್ಡಿನ ಬಳಿ ಮಾತಿಗೆ ಮಾತು ಬೆಳೆದು ಅತಿರೇಕಕ್ಕೆ ಹೋಗಿ ಮಚ್ಚಿನಿಂದ ಹೊಡೆದಾಡಿದ್ದಾರೆ.
ಇದನ್ನೂ ಓದಿ:-Kumta: ಶಾಸಕ ದಿನಕರ್ ಶಟ್ಟಿ ಲೈಂಗಿಕ ಶೋಷಣೆ ಆರೋಪ ಆಡಿಯೋ ಪ್ರಕರಣ – ಕನ್ನಡವಾಣಿ ವಿರುದ್ಧ ತನಿಖೆಗೆ ಹೈಕೋರ್ಟ ತಡೆ
ಈ ಸಂದರ್ಭದಲ್ಲಿ ಹನುಮಂತ ನಾಯ್ಕ ಎಂಬುವವರು ಮಂಜುನಾಥ್ ನಾಯ್ಕ್ ಗೆ ಮಚ್ಚು ಬೀಸಿದ್ದು ತೊಡೆ, ಕೈ ಬೆರಳುಗಳಿಗೆ ಗಂಭೀರ ಗಾಯ ವಾಗಿದೆ.
ಹನುಮಂತ ನಾಯ್ಕಾ ಗೂ ಮಂಜುನಾಥ್ ನಾಯ್ಕ ಮಚ್ಚು ಬಿಸಿದ್ದು ಆತನಿಗೂ ಗಾಯವಾಗಿದೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಘಟನೆ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
