Uttara kannada :ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ ಹಲವುಕಡೆ ಹಾನಿ
Uttara kannada :ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ ಹಲವುಕಡೆ ಹಾನಿ

ಕಾರವಾರ :- ಉತ್ತರ ಕನ್ನಡ (uttara Kannada) ಜಿಲ್ಲೆಯಲ್ಲಿ ಮಳೆಯ(rain) ಅಬ್ಬರ ಮುಂದುವರೆದಿದ್ದು ಹೆಚ್ಚಿನ ಗಾಳಿ ಹಾಗೂ ಅಬ್ಬರದ ಮಳೆಗೆ ಹಲವು ತಾಲೂಕುಗಳಲ್ಲಿ ಹಾನಿ ಸಂಭವಿಸಿದೆ.
ಯಾವ ತಾಲೂಕಿನಲ್ಲಿ ಏನು ಹಾನಿ?
ಯಲ್ಲಾಪುರ- ಶಾಲಾ ಕಟ್ಟಡ ಕುಸಿತ ತಪ್ಪಿದ ಅಪಾಯ

ಜಿಲ್ಲೆಯ ಯಲ್ಲಾಪುರದ (yallapur) ಅತ್ಯಂತ ಹಳೆಯ ಶಾಲೆಗಳಲ್ಲಿ ಒಂದಾದ ವಲಿಶಾ ಗಲ್ಲಿಯಲ್ಲಿರುವ ಕೆ. ಜಿ. ಎಸ್. ಶಾಲಾ ಆವರಣದಲ್ಲಿರುವ ಶಿಥಿಲವಾದ ಕಟ್ಟಡದ ಗೋಡೆ ಸತತ ಮಳೆಯಿಂದಾಗಿ (Rain) ಶುಕ್ರವಾರ ಕುಸಿದಿದ್ದು, ತರಗತಿಗಳು ನಡೆಯದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಇದನ್ನೂ ಓದಿ:-Yallapur :ಒಂದನೇ ತರಗತಿ ವಿದ್ಯಾರ್ಥಿನಿ ಯನ್ನು ಪಾಳು ಬಿದ್ದ ದೇವಸ್ಥಾನದಲ್ಲಿ ಅ*ಚಾರ ಮಾಡಿದ ಅಪ್ರಾಪ್ತ ಬಾಲಕ!
ಸುಮಾರು 53 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಶಾಲೆ ಇದಾಗಿದ್ದು 125ಕ್ಕೂ ಅಧಿಕ ವರ್ಷಗಳನ್ನು ಕಂಡ ಹಳೆಯ ಶಾಲೆಯಾಗಿದೆ. ಶಿಥಿಲಗೊಂಡ ಕಟ್ಟಡದಲ್ಲಿ ತರಗತಿಗಳು ನಡೆಯದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಕಟ್ಟಡ ತೆರವಿಗೆ ಶಿಕ್ಷಣ ಇಲಾಖೆಗೆ ಶಾಲೆಯ ಎಸ್ಟಿಎಂಸಿ ಆಗ್ರಹಿಸಿದೆ.
ಶಿರಸಿ- ಮರ ಬಿದ್ದು ಕೊಟ್ಟಿಗೆಗೆ ಹಾನಿ

ಗಾಳಿಯ ಆರ್ಭಟಕ್ಕೆ ಶುಕ್ರವಾರ ಶಿರಸಿ (sirsi) ತಾಲೂಕಿನಲ್ಲಿ ಭಾರಿ ಹಾನಿ ಉಂಟಾಗಿದೆ. ಕಾನಳ್ಳಿಯ ನಾಗಾ ಸೋಮ ದೇವಾಡಿಗ ಇವರ ವಾಸ್ತವ್ಯದ ಮನೆಯ ಸಮೀಪದ ದನದ ಕೊಟ್ಟಿಗೆ ಮೇಲೆ ಮಾವಿನಮರ ಬಿದ್ದು ಅಂದಾಜು 30 ಸಾವಿರ ರೂ, ಟಿಪ್ಪುನಗರದ ಅಬ್ದುಲ್ ಜಿಲಾನಿ ಅವರ ವಾಸ್ತವ್ಯ ಮನೆಯ ಗೋಡೆ ಕುಸಿದು 30 ಸಾವಿರ ರು. ಗುಡ್ನಾಪುರದ ಸುಭದ್ರಾ ಸುರೇಶ ನಾಯ್ಕ ಅವರ ದನದ ಕೊಟ್ಟಿಗೆ ಸಂಪೂರ್ಣವಾಗಿ ಬಿದ್ದು 30 ಸಾವಿರ ರು,ಭಾಶಿಯ ನೀಲಾವತಿ ಗಜಾನನ ನಾಯ್ಕ ವಾಸ್ತವ್ಯದ ಮನೆ ಗೋಡೆ ಕುಸಿದು 10 ಸಾವಿರ ರು,ಹಾನಿ ಸಂಭವಿಸಿದೆ. ಇದನ್ನೂ ಓದಿ:-Sirsi: ರಾತ್ರೂ ರಾತ್ರಿ ಶಿರಸಿಯಲ್ಲಿ ಎರಡುಕಡೆ ಗೋ ಕಳ್ಳತನ! ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆ ,ವಿಡಿಯೋ ನೋಡಿ
ಉಳವಿ ರಸ್ತೆಯ ಕಿರುಸೇತುವೆ ಕುಸಿತ: ಬಸ್ ಸಂಚಾರ ಬಂದ್

ಜೋಯಿಡಾ ತಾಲೂಕಿನ ಗುಂದ - ಉಳವಿ (ulvi)ರಸ್ತೆಯ ಕೈಟನಾಲಾ ಬಳಿ ಕಿರು ಸೇತುವೆ ಬಳಿ ಕುಸಿತವಾಗಿದ್ದು, ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ.
ಬ್ರಿಟಿಷ್ ಕಾಲದ ಕಿರು ಸೇತುವೆ ಇದಾಗಿದ್ದು, ತುಂಬಾ ಹಳೆಯದಾಗಿದ್ದು ಸಧ್ಯ ಸೇತುವೆಯ ಪಕ್ಕದಲ್ಲಿ ಕುಸಿತ ಉಂಟಾಗಿದೆ. ಬಸ್ ಸಂಚಾರ ಹಾಗೂ ಭಾರವಾದ ವಾಹನಗಳ ಸಂಚಾರ ಬಂದ್ ಮಾಡಲಾಗಿದ್ದು, ಸ್ಥಳಕ್ಕೆ ಸ್ಥಳೀಯ ನಂದಿಗದ್ದೆ ಗ್ರಾಮ ಪಂಚಾಯತ ಅಧ್ಯಕ್ಷ ಅರುಣ ದೇಸಾಯಿ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:-Joida news: ಈಜು ಕೊಳಕ್ಕೆ ಬಿದ್ದು ಮಗು ಸಾ**
ಇನ್ನು ಹವಾಮಾನ ಇಲಾಖೆ ಜುಲೈ 4 ರ ವರೆಗೂ ಅಲ್ಲಲ್ಲಿ ಚದುರಿದ ರಭಸದ ಗಾಳಿ ಜೊತೆ ಮಳೆ ಸುರಿಯುವ ಎಚ್ಚರಿಕೆ ನೀಡಿದ್ದು ಯಲ್ಲೋ ಅಲರ್ಟ ನೀಡಿದೆ.