Covid ಸೋಂಕು ಪತ್ತೆಯಾಗುತಿದ್ದಂತೆ ಆಸ್ಪತ್ರೆ ಬಿಟ್ಟು ಪರಾರಿಯಾದ ಸೋಂಕಿತ ವ್ಯಕ್ತಿ
Covid ಸೋಂಕು ಪತ್ತೆಯಾಗುತಿದ್ದಂತೆ ಆಸ್ಪತ್ರೆ ಬಿಟ್ಟು ಪರಾರಿಯಾದ ಸೋಂಕಿತ ವ್ಯಕ್ತಿ

ಕಾರವಾರ :- ಗಡಿ ಜಿಲ್ಲೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ (carona)ಎಂಟ್ರಿ ಕೊಟ್ಟಿದೆ. ಈ ವಾರದಲ್ಲಿ ಎರಡು ಜನರಿಗೆ ಕರೋನಾ ಫಾಸಿಟಿವ್ ಬಂದಿದೆ. ಆದ್ರೆ ಆಸ್ಪತ್ರೆಯಲ್ಲಿ ಇರಬೇಕಾದ ರೋಗಿ ಈಗ ನಾಪತ್ತೆಯಾಗಿದ್ದು ,ಮತ್ತೆ ಕರೋನ ಹರಡುವ ಆತಂಕ ತಂದೊಡ್ಡಿದೆ.
ರಾಜ್ಯದಲ್ಲಿ ಕರೋನಾ ಸೋಂಕು ಮತ್ತೆ ರೀ ಎಂಟ್ರಿ ಕೊಟ್ಟಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತಿದ್ದಂತೆ ಇತ್ತ ಸರ್ಕಾರ ಕೂಡ ಜನರಲ್ಲಿ ಜಾಗೃತಿಯಿಂದ ಇರಲು ನಿರ್ದೇಶ ನೀಡಿದ್ದು ಸೋಂಕಿತರು ಪತ್ತೆಗಾಗಿ ಆರೋಗ್ಯ ಇಲಾಖೆ ಕೋವಿಡ್ ಲಕ್ಷಣವಿರುವವರ ಪರೀಕ್ಷೆ ನಡೆಸುತ್ತಿದೆ. ಗಡಿ ಜಿಲ್ಲೆ ಉತ್ತರಕನ್ನಡ ಜಿಲ್ಲೆಯಲ್ಲಿ ಒಟ್ಟು 17 ಜನರ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ಯಲ್ಲಾಪುರ ತಾಲೂಕಿನ ಕಿರುವತ್ತಿಯ ಗರ್ಭಿಣಿ ಮಹಿಳೆ ಹಾಗೂ ಇದೇ ಭಾಗದ ವಾಹನ ಚಾಲಕನಿಗೆ ಕರೋನಾ ಫಾಸಿಟಿವ್ ಇರುವುದು ದೃಡವಾಗಿದೆ. ಇದಲ್ಲದೇ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸಾ ಕೇಂದ್ರ ಸಹ ತೆರೆಯಲಾಗಿದೆ.
ಇದನ್ನೂ ಓದಿ:-Yallapur :ಒಂದನೇ ತರಗತಿ ವಿದ್ಯಾರ್ಥಿನಿ ಯನ್ನು ಪಾಳು ಬಿದ್ದ ದೇವಸ್ಥಾನದಲ್ಲಿ ಅ*ಚಾರ ಮಾಡಿದ ಅಪ್ರಾಪ್ತ ಬಾಲಕ!
ಇನ್ನು ಕೋವಿಡ್ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಚಿಕಿತ್ಸೆಗಾಗಿ ಗರ್ಭಿಣಿ ಮಹಿಳೆಯನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಯ ಕೋವಿಡ್ ವಾರ್ಡ ಗೆ ಕರೆತಂದಿದ್ದಾರೆ. ಆದ್ರೆ ಕೋವಿಡ್ ಫಾಸಿಟಿವ್ ಬಂದ ವಾಹನ ಚಾಲಕ ಪರಾರಿಯಾಗಿದ್ದಾನೆ.
ಆತ ಯಲ್ಲಾಪುರದ ತನ್ನ ಮನೆಗೆ ಹೋಗಿದ್ದು ತನ್ನ ವಾಹನ ತೆಗೆದುಕೊಂಡು ಬಾಡಿಗೆಗೆ ತೆರಳಿದ್ದಾನೆ. ಇನ್ನು ಈ ಮಾಹಿತಿ ಪಡೆದ ಆರೋಗ್ಯ ಇಲಾಖೆ ಸಿಬ್ಬಂದಿ ಆತನಿಗೆ ಕರೆಮಾಡಿದರೇ ಕರೆ ಸ್ವೀಕರಿಸಿಲ್ಲ. ಇನ್ನು ಮನೆಯಲ್ಲಿರುವ ಆತನ ಪತ್ನಿ ಹಾಗೂ ಮಕ್ಕಳೊಂದಿಗೂ ಸಂಪರ್ಕ ಬೆಳೆಸಿದ್ದಾನೆ. ಇನ್ನು ವಿಷಯ ಅರಿತ ಆರೋಗ್ಯ ಇಲಾಖೆಯವರು ಆತನ ಮನೆಗೆ ತೆರಳಿ ಆತನ ಪತ್ನಿ,ಮಕ್ಕಳ ತಪಾಸಣೆ ಮಾಡಿದ್ದು ನೆಗಟೀವ್ ಬಂದಿದೆ.ಆದ್ರೆ ಆತ ಎಲ್ಲಿಹೋದ ಎಂಬ ಬಗ್ಗೆ ಮಾಹಿತಿಯನ್ನು ಸರಿಯಾಗಿ ನೀಡದೇ ಕುಟುಂಬದವರು ಸಹ ಮರೆಮಾಚಿದ್ದು ಒಂದೆಡೆ ಉತ್ತರ ಪ್ರದೇಶಕ್ಕೆ ಹೋಗಿದ್ದಾನೆ ಎಂದರೇ ಮತ್ತೊಮ್ಮೆ ಬಾಡಿಗೆಗೆ ಹೋಗಿದ್ದಾನೆ ಎಂದು ಇಲಾಖೆಗೆ ಮಾಹಿತಿಯನ್ನ ತಪ್ಪಾಗಿ ನೀಡಿದ್ದಾರೆ. ಹೀಗಾಗಿ ಆತ ಎಲ್ಲೆಡೆ ತಿರುಗಾಡುತಿದ್ದು ಇನ್ನೊಬ್ಬರಿಗೂ ಹರಡುವ ಆತಂಕ ತಂದೊಡ್ಡಿದ್ದು ಆತನ ಹುಡುಕಾಟವೇ ಆರೋಗ್ಯ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕರೋನಾ ಫಾಸಿಟಿವ್ ಬಂದ ರೋಗಿಗಳು ಐಸೋಲೇಟ್ ಆಗಿ ಇತರ ಸಂಪರ್ಕದಿಂದ ದೂರ ಇರಬೇಕಾಗಿದೆ.ಆದರೇ ಈ ಹಿಂದೆ ಇದ್ದ ಕಠಿಣ ನಿಯಮ ಮರಳಿ ಅನುಷ್ಟಾನ ಮಾಡದ ಹಿನ್ನಲೆಯಲ್ಲಿ ಕೋವಿಡ್ ಪಾಸಿಟಿವ್ ಬಂದ ವ್ಯಕ್ತಿಗಳು ಎಲ್ಲೆಂದರಲ್ಲಿ ಓಡಾಡುತಿದ್ದು ,ಮತ್ತಷ್ಟು ಜನರಿಗೆ ಸೋಂಕು ತಗಲುವಂತೆ ಮಾಡುತಿದ್ದು ಮತ್ತಷ್ಟು ಭಯ ಜನರಲ್ಲಿ ಮೂಡುವಂತೆ ಮಾಡಿದೆ.