Yana:ಯಾಣ ಪ್ರವಾಸಿ ಸ್ಥಳಕ್ಕೆ ನಿರ್ಬಂಧದ ನಡುವೆಯೇ ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶ!
Yana:ಯಾಣ ಪ್ರವಾಸಿ ಸ್ಥಳಕ್ಕೆ ನಿರ್ಬಂಧದ ನಡುವೆಯೇ ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶ!

ಕಾರವಾರ :-ಉತ್ತರ ಕನ್ನಡ (uttara kannada) ಜಿಲ್ಲೆಯ ಕುಮಟಾ (kumta) ತಾಲೂಕಿನ ಯಾಣದಲ್ಲಿ ಹೆಚ್ಚಿನ ಮಳೆ ಹಿನ್ನಲೆಯಲ್ಲಿ ಪ್ರವಾಸಿಗರಿಗೆ ಜೂನ್ 19 ರಂದು ನಿರ್ಬಂಧ ವಿಧಿಸಿ ಕತಗಾಲ್ ಅರಣ್ಯ ಇಲಾಖೆ ಯಾಣ ಚಾರಣಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಿತ್ತು.
ಇದನ್ನೂ ಓದಿ:-Yana:ವಿಶ್ವ ಪ್ರಸಿದ್ಧ ಯಾಣ ಕ್ಷೇತ್ರಕ್ಕೆ ಪ್ರವಾಸಿಗರಿಗೆ ನಿಷೇಧ
ಕಳೆದ ವರ್ಷ ಯಾಣ ಭಾಗದಲ್ಲಿ ಗುಡ್ಡ ಕುಸಿತ ಸಂಭವಿಸಿತ್ತು. ಇದಲ್ಲದೇ ನಿರಂತರ ಮಳೆಯದ ದೇವಿಮನೆ ಘಟ್ಟ (Devimane got)ಭಾಗದಲ್ಲಿ ಸಹ ಗುಡ್ಡ ಕುಸಿತವಾಗಿದೆ. ಹೀಗಾಗಿ ಪ್ರವಾಸಿಗರಿಗೆ ಚಾರಕ್ಕೆ ಮತ್ತು ಯಾಣ ಕ್ಲೇವ್ ವೀಕ್ಷಣೆಗೆ ನಿಷೇಧ ಹೇರಿದೆ.
ಆದರೇ ವೀಕೆಂಡ್ ಆದ್ದರದ ಪ್ರವಾಸಿಗರು ಯಾಣದತ್ತ ಬರುತಿದ್ದು ಯಾಣ ವೀಕ್ಷಣೆಗೆ ನಿಯಮ ಮೀರಿ ಅವಕಾಶ ಮಾಡಿಕೊಡಲಾಗಿದೆ. ಪಾರ್ಕಿಂಗ್ ಶುಲ್ಕ ಸೇರಿದಂತೆ ಸ್ಥಳೀಯ ಶುಲ್ಕವನ್ನು ಸಮಿತಿಯವರು ವಿಧಿಸುತಿದ್ದು ,ಯಾಣಕ್ಕೆ ಹೋಗುವ ದಾರಿಯ ಗೇಟ್ ಸಹ ತೆರೆಯಲಾಗಿದೆ.
ಸದ್ಯ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ನಿರ್ಬಂಧ ವಿಧಿಸಿದರೂ ವಾಣಿಜ್ಯ ಉದ್ದೇಶಕ್ಕೆ ಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಒಂದುವೇಳೆ ಈ ಭಾಗದಲ್ಲಿ ಗುಡ್ಡ ಕುಸಿದರೇ ಪ್ರವಾಸಿಗರ ಗತಿ ಏನು ಎಂಬ ಪ್ರಶ್ನೆ ಏಳುವಂತೆ ಮಾಡಿದೆ.