News Impact :ಕನ್ನಡವಾಣಿ ವರದಿ ಬೆನ್ನಲ್ಲೇ ಮರಳು ಅಡ್ಡಗಳ ಮೇಲೆ ದಾಳಿ -ಲಾರಿಗಳು ವಶಕ್ಕೆ
News Impact :ಕನ್ನಡವಾಣಿ ವರದಿ ಬೆನ್ನಲ್ಲೇ ಮರಳು ಅಡ್ಡಗಳ ಮೇಲೆ ದಾಳಿ -ಲಾರಿಗಳು ವಶಕ್ಕೆ

ಕಾರವಾರ:-ಉತ್ತರ ಕನ್ನಡ (uttara Kannada) ಜಿಲ್ಲೆಯ ಹೊನ್ನಾವರದಲ್ಲಿ (Honnavar) ರಾತ್ರೊ ರಾತ್ರಿ ಎರಡು ಮರಳು(sand) ವಾಹನವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸೀಜ್ ಮಾಡಿ ಪ್ರಕರಣ ದಾಖಲಿಸಿದ್ದಾರೆ.
ಹೊನ್ನಾವರದ ಶರಾವತಿ ನದಿಯಿಂದ ಹೊಸಾಡು, ಬಳ್ಕೂರು ಗ್ರಾಮದಲ್ಲಿ ಮರಳನ್ನು ಸಾಗಾಣೆ ಮಾಡುತ್ತಿದ್ದ ಎರಡು ವಾಹನಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಆಶಾ ರವರ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:-Honnavar: ಅಕ್ರಮ ಮರಳುಗಾರಿಕೆ ಕಣ್ಣು,ಕಿವಿ ಮುಚ್ಚಿ ಕುಳಿತ ಜಿಲ್ಲಾಡಳಿತ !ಹಸಿರು ಪೀಠದ ಆದೇಶಕ್ಕೆ ಕಿಮ್ಮತ್ತು ಇಲ್ಲ.
ಕೆಲವು ದಿನದ ಹಿಂದೆ ಕನ್ನಡ ವಾಣಿ.ನ್ಯೂಸ್ ಮರಳುಗಾರಿಕೆ ಕುರಿತು ವಿಸೃತ ವರದಿಮಾಡಿತ್ತು. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿತ್ತು. ವರದಿ ಪ್ರಸಾರ ಬೆನ್ನಲ್ಲೇ ಇದೀಗ ಎರಡು ಲಾರಿಗಳನ್ನು ಮರಳು ಸಮೇತ ವಶಕ್ಕೆ ಪಡೆಯಲಾಗಿದೆ.
ಇನ್ನು ಅಬ್ಬರದ ಮಳೆ ಬಂದರೂ ಮರಳುಗಾರಿಕೆ ಮಾತ್ರ ಎಗ್ಗಿಲ್ಲದೇ ನಡೆಯುತಿದ್ದು ಕಾರ್ಮಿಕರು ಜೀವ ಪಣದಲ್ಲಿ ಇಟ್ಟು ದುಡಿಯುತಿದ್ದರು. ಇದೀಗ ತೋರಿಕೆಗಾದರೂ ಅಧಿಕಾರಿಗಳು ಕ್ರಮ ವಹಿಸಿದ್ದು ಶ್ಲಾಘನೀಯ.
