For the best experience, open
https://m.kannadavani.news
on your mobile browser.
Advertisement

Karwar ಕದಂಬ ನೌಕಾನೆಲೆಗಾಗಿ ಭೂಮಿ ಕೊಟ್ಟವರಿಗೆ 30 ವರ್ಷದ ನಂತರ ಸಿಕ್ತು ಪರಿಹಾರ

ಕಾರವಾರ :- ಅವ್ರು ದೇಶದ ರಕ್ಷಣೆಗೆಂದು ಮನೆ, ಜಮೀನು ಬಿಟ್ಟು 30 ವರ್ಷ ಕಳೆದಿದೆ. ಆದ್ರೆ ಕಳೆದುಕೊಂಡ ಭೂಮಿಗೆ ಸೂಕ್ತ ಪರಿಹಾರ ಸಿಕ್ಕಿರಲಿಲ್ಲ, ಅಸಹಾಯಕರಾಗಿ ಸಿಕ್ಕ ಸಿಕ್ಕವರಿಗೆ ಮನವಿ ಕೊಡ್ತಾ ಕೂಲಿ ನಾಲಿ ಕೆಲಸ ಮಾಡುತ್ತಿದ್ರು. ಕೊನೆಗೂ ಅವರ ಕಾಯುವಿಕೆ ಮುಗಿದಿದ್ದು, ಇಂದು ಅವರ ಕೈಗೆ ಹಣ ತಲುಪಿದೆ, ಅಷ್ಟಕ್ಕೂ ಆಗಿದ್ದೇನು ಎಂಬುವದರ ಡಿಟೇಲ್ ವರದಿ ಇಲ್ಲಿದೆ.
10:29 PM Jun 21, 2025 IST | ಶುಭಸಾಗರ್
ಕಾರವಾರ :- ಅವ್ರು ದೇಶದ ರಕ್ಷಣೆಗೆಂದು ಮನೆ, ಜಮೀನು ಬಿಟ್ಟು 30 ವರ್ಷ ಕಳೆದಿದೆ. ಆದ್ರೆ ಕಳೆದುಕೊಂಡ ಭೂಮಿಗೆ ಸೂಕ್ತ ಪರಿಹಾರ ಸಿಕ್ಕಿರಲಿಲ್ಲ, ಅಸಹಾಯಕರಾಗಿ ಸಿಕ್ಕ ಸಿಕ್ಕವರಿಗೆ ಮನವಿ ಕೊಡ್ತಾ ಕೂಲಿ ನಾಲಿ ಕೆಲಸ ಮಾಡುತ್ತಿದ್ರು. ಕೊನೆಗೂ ಅವರ ಕಾಯುವಿಕೆ ಮುಗಿದಿದ್ದು, ಇಂದು ಅವರ ಕೈಗೆ ಹಣ ತಲುಪಿದೆ, ಅಷ್ಟಕ್ಕೂ ಆಗಿದ್ದೇನು ಎಂಬುವದರ ಡಿಟೇಲ್ ವರದಿ ಇಲ್ಲಿದೆ.
karwar ಕದಂಬ ನೌಕಾನೆಲೆಗಾಗಿ ಭೂಮಿ ಕೊಟ್ಟವರಿಗೆ 30 ವರ್ಷದ ನಂತರ ಸಿಕ್ತು ಪರಿಹಾರ

Karwar ಕದಂಬ ನೌಕಾನೆಲೆಗಾಗಿ ಭೂಮಿ ಕೊಟ್ಟವರಿಗೆ 30 ವರ್ಷದ ನಂತರ ಸಿಕ್ತು ಪರಿಹಾರ

Advertisement

ಕಾರವಾರ :- ಅವ್ರು ದೇಶದ ರಕ್ಷಣೆಗೆಂದು ಮನೆ, ಜಮೀನು ಬಿಟ್ಟು 30 ವರ್ಷ ಕಳೆದಿದೆ. ಆದ್ರೆ ಕಳೆದುಕೊಂಡ ಭೂಮಿಗೆ ಸೂಕ್ತ ಪರಿಹಾರ ಸಿಕ್ಕಿರಲಿಲ್ಲ, ಅಸಹಾಯಕರಾಗಿ ಸಿಕ್ಕ ಸಿಕ್ಕವರಿಗೆ ಮನವಿ ಕೊಡ್ತಾ ಕೂಲಿ ನಾಲಿ ಕೆಲಸ ಮಾಡುತ್ತಿದ್ರು. ಕೊನೆಗೂ ಅವರ ಕಾಯುವಿಕೆ ಮುಗಿದಿದ್ದು, ಇಂದು ಅವರ ಕೈಗೆ ಹಣ ತಲುಪಿದೆ, ಅಷ್ಟಕ್ಕೂ ಆಗಿದ್ದೇನು ಎಂಬುವದರ ಡಿಟೇಲ್ ವರದಿ ಇಲ್ಲಿದೆ.

ಕದಂಬ ನೌಕಾನೆಲೆ ನಿರಾಶ್ರಿತರಿಗೆ ಪರಿಹಾರದ ಚಕ್ ವಿತರಣೆ

ಎಷ್ಯಾದಲ್ಲೆ ಅತಿದೊಡ್ಡ ನೌಕಾನೆಲೆ (navy) ನಿರ್ಮಾಣಕ್ಕೆ, ಮನೆ, ಭೂಮಿ ಬಿಟ್ಟು ಕೊಟ್ಟು,  ಬೇರೆಡೆ ವಾಸಿಸುತ್ತಿರುವ ಸಾವಿರಾರು ಕುಟುಂಬಗಳ ಪೈಕಿ,  443 ಕ್ಕೂ ಹೆಚ್ಚು ಕುಟುಂಬಗಳಿಗೆ ಇದುವರೆಗೂ ಸೂಕ್ತ ಪರಿಹಾರ ಸಿಕ್ಕಿರಲಿಲ್ಲ. ಅನೇಕ ಕುಟುಂಬಗಳು ನಾಲ್ಕೈದು ಎಕರೆ ಭೂಮಿ, ಕನಸಿನ ಮನೆ ಕಳೆದುಕೊಂಡು, ಕೂಲಿ ನಾಲಿ ಮಾಡುತ್ತ. ನೌಕಾ ನೆಲೆಯಲ್ಲಿ ಸಿ ಹಾಗೂ ಡಿ ದರ್ಜೆಯ ಕೆಲಸ ಮಾಡುತ್ತ ಜೀವನ ಮಾಡುತ್ತಿದ್ದರು. ಹಿರಿಯರಿಂದ ಬಂದಿದ್ದ ಭೂಮಿ ದೇಶಕ್ಕಾಗಿ ಬಿಟ್ಟು ಕೊಟ್ಟಿದ್ದರ ಬಗ್ಗೆ ಆ ಮುಗ್ಧ ಜೀವಗಳಿಗೆ ಹೆಮ್ಮೆ ಇತ್ತು, ಆದ್ರೆ ತಮ್ಮ ನಿತ್ಯದ ಜೀವನ ಹಾಗೂ ಮಕ್ಕಳ ಭವಿಷ್ಯಕ್ಕಾಗಿ, ಸೂಕ್ತ ಪರಿಹಾರ ಕೊಡಬೇಕೆಂದು 1995 ರಿಂದ  ಇಲ್ಲಿಯವರೆಗೂ ಹೋರಾಟ ನಡೆಸಿದ್ರು. ಕೊನೆಗೂ ಅವರ ಹೋರಾಟಕ್ಕೆ ಫಲ ಸಿಕ್ಕಿದ್ದು ಪ್ರತಿ ಗುಂಟೆಗೆ 11,500 ರೂಪಾಯಿಯಂತೆ ಬಡ್ಡಿ ಸಮೇತ ಸುಮಾರು 57 ಕುಟುಂಬಗಳಿಗೆ 10.38 ಕೋಟಿ ರೂಪಾಯಿ ಹಣ, ನೇರವಾಗಿ ಅವರ ಅಕೌಂಟ್ ಗೆ ಜಮ ಆಗಿದ್ದು, ಭೂಮಿ ಕುಟುಂಬಗಳಿಗೆ ನೆಮ್ಮದಿಯ ಬದಕು ಕಟ್ಟಿಕೊಳ್ಳುವಂತಾಗಿದೆ.

ಇದನ್ನೂ ಓದಿ:-karwar :ಅಂತೂ ಕಾರವಾರಕ್ಕೆ ಹಿಡಿದ ಗ್ರಹಣ ಬಿಟ್ಟಿತು- ಎಸಿ ಕಾನಿಷ್ಕ್ ವರ್ಗಾವಣೆ.

 ಎಷ್ಯಾದಲ್ಲೆ ಅತಿ ದೊಡ್ಡ ನೌಕಾ ನೆಲೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ. 1985 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ (karwar) ನಗರದಿಂದ 5 ಕಿ.ಮೀ ಅಂತರದಲ್ಲಿರುವ ಜಾಗದಲ್ಲಿ. ಅಂದಿನ ಪ್ರಧಾನಿ ರಾಜೀವ ಗಾಂಧಿ ಅಡಿಗಲ್ಲು ಹಾಕಿದ್ರು. 1995 ರಲ್ಲಿ ಸುಮಾರು 14 ಗ್ರಾಮಗಳ 4800 ಕುಟುಂಬಗಳನ್ನು ಬೇರೆ ಕಡೆ ಸ್ಥಳಾಂತರಿಸಲಾಗಿತ್ತು. ಅಂದು ಪ್ರತಿ ಗುಂಟೆ ಭೂಮಿಗೆ ಕೇವಲ 1500 ರೂಪಾಯಿ ಪರಿಹಾರ ಕೊಡಲಾಗಿತ್ತು. 2008 ರ ಸುಪ್ರಿಂ ಕೊರ್ಟ್ ತಿರ್ಪಿನ ಪ್ರಕಾರ ಪ್ರತಿ ಗುಂಟೆಗೆ 11,500 ರೂಪಾಯಿ ಪರಿಹಾರ ಕೊಡಬೇಕೆಂದು ಆದೇಶ ಮಾಡಲಾಯ್ತು.

ಇದನ್ನೂ ಓದಿ:- Karwar: ವಾಹನ ಪಾರ್ಕಿಂಗ್ ಗಲಾಟೆ – ಪಾರ್ಕಿಂಗ್ ಸಿಬ್ಬಂದಿಗೆ ಥಳಿಸಿದ ಯುವಕನ ವಿರುದ್ಧ ಪ್ರಕರಣ ದಾಖಲು

 ಆಗ ಸಾವಿರಾರು ಕುಟುಂಬಗಳಿಗೆ ಗುಂಟೆಗೆ 11,500 ರೂಪಾಯಿಯಂತೆ ಪರಿಹಾರ ಸಿಕ್ಕಿತ್ತು. ಆದ್ರೆ ಸುಮಾರು 443 ಪ್ರಕರಣಗಳು ಕಾರವಾರ ಎಸಿ ಕೊರ್ಟ್ ನಲ್ಲಿ ಪೆಂಡಿಂಗ್ ಇದ್ದವು. ಆ ಪೈಕಿ 333 ಪ್ರಕರಣಗಳ ಕಳೆದ ಆರು ತಿಂಗಳ ಹಿಂದೆ ಕ್ಲಿಯರ್ ಆಗಿ, ಕೇಂದ್ರ ರಕ್ಷಣಾ ಇಲಾಖೆಯಿಂದ ಸದ್ಯ 57 ಪ್ರಕರಣಗಳಿಗೆ ವಟ್ಟು 10.38 ಕೋಟಿ ರೂಪಾಯಿ ಸಿಕ್ಕಿದ್ದು, ಇನ್ನೂಳಿದ ಪ್ರಕರಣಗಳಿಗೆ ಸಂಬಂಧ ಪಟ್ಟಂತೆ 60 ಕೋಟಿ ರೂಪಾಯಿ ಪರಿಹಾರ ಹಣ ಬಾಕಿ ಉಳಿದಿದೆ.

ಒಟ್ಟಿನಲ್ಲಿ  ಕಳೆದ 30 ವರ್ಷಗಳಿಂದ ದೇಶಕ್ಕಾಗಿ ಭೂಮಿ ಕಳೆದುಕೊಂಡು ಸೂಕ್ತ ಪರಿಹಾರಕ್ಕೆ ಪರಿತಪಿಸುತಿದ್ದ ಸುಮಾರು 57 ಕುಟುಂಬಗಳಿಗೆ ಕೊನೆಗೂ ಪರಿಹಾರ ಕೊಡಿಸುವುದರಲ್ಲಿ  ಉತ್ತರ ಕನ್ನಡ( uttara kannada) ಜಿಲ್ಲಾಡಳಿತ ಯಶಸ್ವಿ ಆಗಿದ್ದು. ಇನ್ನುಳಿದ ಕುಟುಂಬಗಳಿಗೂ ಆದಷ್ಟು ಬೇಗ ಪರಿಹಾರ ಕೊಡಬೇಕಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ