ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Rain|ಉತ್ತರ ಕನ್ನಡ ದಲ್ಲಿ ಮುಂದುವರೆದ ಮಳೆ |ಕಾಳಜಿ ಕೇಂದ್ರದಲ್ಲಿ 368 ಸಂತ್ರಸ್ತರಿಗೆ ಆಶ್ರಯ

ಶರಾವತಿ ನದಿ ಪ್ರವಾಹ ಮಟ್ಟ ಮೀರಿ ಹರಿಯುತ್ತಿದೆ. ಶರಾವತಿ ನದಿಯ ಉಪ ನದಿಗಳಾದ ಗುಂಡಬಾಳ, ಬಡಗಣಿ ಮತ್ತು ಭಾಸ್ಕೆರಿ ಮತ್ತಿತರ ಹಳ್ಳಗಳೂ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಗೇರುಸೊಪ್ಪ ಜಲಾಶಯದಿಂದ ನೀರು ಹೊರಬಿಡಲಾಗಿದ್ದು , ಶರಾವತಿ ನದಿ ದಂಡೆಗಳ ಪ್ರದೇಶಗಳಾದ ಸರಳಗಿ, ಹೆರಂಗಡಿ,
11:28 PM Aug 30, 2025 IST | ಶುಭಸಾಗರ್
ಶರಾವತಿ ನದಿ ಪ್ರವಾಹ ಮಟ್ಟ ಮೀರಿ ಹರಿಯುತ್ತಿದೆ. ಶರಾವತಿ ನದಿಯ ಉಪ ನದಿಗಳಾದ ಗುಂಡಬಾಳ, ಬಡಗಣಿ ಮತ್ತು ಭಾಸ್ಕೆರಿ ಮತ್ತಿತರ ಹಳ್ಳಗಳೂ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಗೇರುಸೊಪ್ಪ ಜಲಾಶಯದಿಂದ ನೀರು ಹೊರಬಿಡಲಾಗಿದ್ದು , ಶರಾವತಿ ನದಿ ದಂಡೆಗಳ ಪ್ರದೇಶಗಳಾದ ಸರಳಗಿ, ಹೆರಂಗಡಿ,

ಉತ್ತರ ಕನ್ನಡ ದಲ್ಲಿ ಮುಂದುವರೆದ ಮಳೆ |ಕಾಳಜಿ ಕೇಂದ್ರದಲ್ಲಿ 368 ಸಂತ್ರಸ್ತರಿಗೆ ಆಶ್ರಯ.

Advertisement

ಕಾರವಾರದ ಗಿಲಾನಿ ಸೂಪರ್ ಮಾರ್ಕೆಟ್ ನಲ್ಲಿ ಭರ್ಜರಿ ಆಫರ್ ,ಗ್ರೂಸರಿ ಕರೀದಿ ದಾರರಿಗೆ ಸಿಗಲಿದೆ ಬಂಪರ್ ಬಹುಮಾನ

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಮಳೆಯ ಅಬ್ಬರ ಶನಿವಾರವೂ ಮುಂದುವರೆದಿದೆ.

ಶರಾವತಿ ನದಿ ಪ್ರವಾಹ ಮಟ್ಟ ಮೀರಿ ಹರಿಯುತ್ತಿದೆ.
ಶರಾವತಿ ನದಿಯ ಉಪ ನದಿಗಳಾದ ಗುಂಡಬಾಳ, ಬಡಗಣಿ ಮತ್ತು ಭಾಸ್ಕೆರಿ ಮತ್ತಿತರ ಹಳ್ಳಗಳೂ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಗೇರುಸೊಪ್ಪ ಜಲಾಶಯದಿಂದ ನೀರು ಹೊರಬಿಡಲಾಗಿದ್ದು ,
ಶರಾವತಿ ನದಿ ದಂಡೆಗಳ ಪ್ರದೇಶಗಳಾದ ಸರಳಗಿ, ಹೆರಂಗಡಿ, ಮೇಲಿನ ಇಡಗುಂಜಿ, ಜಲವಳ್ಳಿ, ಗುಂಡಬಾಳಾ ನದಿ ದಂಡೆಗಳ ಪ್ರದೇಶಗಳಾದ ಚಿಕ್ಕನಕೋಡ, ಗುಂಡಬಾಳಾ, ಖರ್ವಾ, ಬೇರೊಳ್ಳಿ, ಭಾಸ್ಕೆರಿ ಹಳ್ಳ ದಂಡೆಗಳ ಪ್ರದೇಶಗಳಾದ ಹೊಸಾಕುಳಿ, ಮುಗ್ಧ ಸೇರಿದಂತೆ ಒಟ್ಟು 15 ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು ಒಟ್ಟು 368 ಸಂತ್ರಸ್ತರು ಇಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ, ಅಂಕೋಲಾದಲ್ಲಿ 55.1, ಮಿಮೀ, ಭಟ್ಕಳದಲ್ಲಿ 24.2, ಹಳಿಯಾಳ 8.7, ಹೊನ್ನಾವರ 60.9, ಕಾರವಾರ 62.1, ಕುಮಟಾ 53.5, ಮುಂಡಗೋಡ 9.6, ಸಿದ್ದಾಪುರ 38.3, ಶಿರಸಿ 26.4, ಸೂಪಾ 46.8, ಯಲ್ಲಾಪುರ 21.5, ದಾಂಡೇಲಿಯಲ್ಲಿ 16.7, ಮಿಲಿ ಮೀಟರ್ ಮಳೆ ಸುರಿದಿದೆ.ಮಳೆಯಿಂದ ಜಿಲ್ಲೆಯಲ್ಲಿ 1 ಮನೆಗೆ ಸಂಪೂರ್ಣ ಹಾನಿಯಾಗಿದೆ.

Advertisement
Tags :
FloodKarnatakaNewsRainuttara kannada rainಮಳೆ
Advertisement
Next Article
Advertisement