Uttara kannada :ಡಿ.ಸಿ ಕಚೇರಿಯಲ್ಲಿ WhatsApp ದೂರು ಈ ವರೆಗೆ ನೀಡಿದ ದೂರುಗಳು ಇತ್ಯರ್ಥವಾಯಿತಾ? ವಿವರ ನೋಡಿ
Uttara kannada :ಡಿ.ಸಿ ಕಚೇರಿಯಲ್ಲಿ WhatsApp ದೂರು ಈ ವರೆಗೆ ನೀಡಿದ ದೂರುಗಳು ಇತ್ಯರ್ಥವಾಯಿತಾ? ವಿವರ ನೋಡಿ

ಕಾರವಾರ :- ಉತ್ತರ ಕನ್ನಡ ಜಿಲ್ಲೆ ಬೌಗೋಳಿಕವಾಗಿ ಜಿಲ್ಲೆ ಸರ್ಕಾರಿ ಕೆಲಸಗಳಿಗೆ ತೆರಳಬೇಕು ಎಂದರೇ ಕನಿಷ್ಟ 100 ಕ್ಕೂ ಹೆಚ್ಚು ಕಿಲೋಮೀಟರ್ ಪ್ರಯಾಣ ಮಾಡಬೇಕು. ಈ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತ 6-07-2015 ರಲ್ಲಿ ಜನರ ದೂರು,ಅಹವಾಲು ಸ್ವೀಕಾರಕ್ಕಾಗಿ ವಾಟ್ಸ್ ಅಪ್ (whatsapp) ಮೂಲಕ ದೂರು ಕೊಡಲು ಅವಕಾಶ ಮಾಡಿಕೊಟ್ಟಿತು.
ಇದನ್ನೂ ಓದಿ:-Karwar:ಎರಡು ವರ್ಷವಾದ್ರೂ ನಡೆಯದ ಕಾಮಗಾರಿ ಆ ಊರಿಗೆ ಕಚ್ಚಾ ರಸ್ತೆಯೇ ಖಾತ್ರಿ
2015 ರಲ್ಲಿ ಪ್ರಥಮಬಾರಿಗೆ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಉಜ್ವಲ್ ಕುಮಾರ್ ಘೋಷ್ ವಾಟ್ಸ್ ಅಪ್ ದೂರನ್ನು ಜಾರಿಗೆ ತಂದರು.
ಈ ಸಂದರ್ಭದಲ್ಲಿ ಸಾರ್ವಜನಿರಿಂದ ಬಂದಂತಹ 9195 ದೂರುಗಳಲ್ಲಿ ಏಳುಸಾವಿರ ದೂರುಗಳನ್ನು ಬಗೆಹರಿಸಲಾಯಿತು.
ಈ ದೂರುಗಳಲ್ಲಿ ಬಹುತೇಕ ದೂರುಗಳು ಜಿಲ್ಲಾ ಪಂಚಾಯತ್, ನಗರಾಭಿವೃದ್ಧಿ ಕೋಶ ಸಂಬಂಧಪಟ್ಟದ್ದಾಗಿದೆ.
ಇದರ ನಂತರ ವಾಟ್ಸ್ ಅಪ್ ದೂರನ್ನು ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಗಂಗೂಬಾಯಿ ಮಾನಕರ್ ರವರು ರದ್ದುಪಡಿಸಿದರು.ಅವರ ಅವಧಿಯಲ್ಲಿ ಯಾವುದೇ ದೂರುಗಳು ಇತ್ಯರ್ಥ್ಯವಾಗಲಿಲ್ಲ.
ನಂತರ 2024 ರಲ್ಲಿ ಮತ್ತೆ ವಾಟ್ಸ್ ಅಪ್ ದೂರುಗಳನ್ನು ಸ್ವೀಕರಿಸುವ ಕಾರ್ಯ ಪ್ರಾರಂಭವಾಯಿತಿ.1-10-2024 ರಿಂದ ಪ್ರಾರಂಭವಾದ ವಾಟ್ಸ್ ಅಪ್ ದೂರುಗಳಲ್ಲಿ 404 ದೂರುಗಳು ಬಂದಿವೆ. 69 ದೂರುಗಳು ಇತ್ಯರ್ಥವಾಗಿಲ್ಲ.
ಬಂದ ದೂರುಗಳಲ್ಲಿ ನಗರಸಭೆ ಕಸ ವಿಲೇವಾರಿ,PWD ರಸ್ತೆ, ಕುಡಿಯುವ ನೀರು, ಮರಳು, ಮಳೆ ಹಾನಿ,ಅಬಕಾರಿ ಸಂಬಂಧ ಬಂದ ದೂರುಗಳಾಗಿವೆ.
ಯಾವುದೇ ದೂರುಗಳನ್ನು ಕೊಡುವುದಿದ್ದರೇ ಜಿಲ್ಲಾಧಿಕಾರಿ ಕಚೇರಿಯ 94835 11015 ನಂಬರಿಗೆ ವಾಟ್ಸ್ ಅಪ್ ಮಾಡಬಹುದಾಗಿದೆ.