Bhatkal :ನೀರು ಹೋಗಲು ಹೆದ್ದಾರಿಯಲ್ಲಿ ತೆಗೆದ ಗುಂಡಿಯಲ್ಲಿ ಬಿದ್ದ ವಾಹನ ಸವಾರರು!
ಕಾರವಾರ/ಭಟ್ಕಳ :-ಸಂಚಾರ ನಿಯಮ ಪಾಲಿಸದೇ ವೇಗವಾಗಿ ಬಂದು ಅಪಘಾತ ತಪ್ಪಿಸಲು ಹೋಗಿ ಹೆದ್ದಾರಿಯಲ್ಲಿ ತೆಗೆದಿದ್ದ ಹೊಂಡಕ್ಕೆ ಬೈಕ್ ಸವಾರರು ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ (bhatkal) ರಾಷ್ಟ್ರೀಯ ಹೆದ್ದಾರಿ 66 ರ ಶಂಸುದ್ದಿನ್ ಸರ್ಕಲ್ ಸಮೀಪ ಸತ್ಕಾರ ಹೋಟೆಲ್ ಮುಂಭಾಗದಲ್ಲಿ ನಡೆದಿದೆ.
09:34 PM Jun 19, 2025 IST | ಶುಭಸಾಗರ್
Bhatkal :ನೀರು ಹೋಗಲು ಹೆದ್ದಾರಿಯಲ್ಲಿ ತೆಗೆದ ಗುಂಡಿಯಲ್ಲಿ ಬಿದ್ದ ವಾಹನ ಸವಾರರು!
Advertisement
ಕಾರವಾರ/ಭಟ್ಕಳ :-ಸಂಚಾರ ನಿಯಮ ಪಾಲಿಸದೇ ವೇಗವಾಗಿ ಬಂದು ಅಪಘಾತ ತಪ್ಪಿಸಲು ಹೋಗಿ ಹೆದ್ದಾರಿಯಲ್ಲಿ ತೆಗೆದಿದ್ದ ಹೊಂಡಕ್ಕೆ ಬೈಕ್ ಸವಾರರು ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ (bhatkal) ರಾಷ್ಟ್ರೀಯ ಹೆದ್ದಾರಿ 66 ರ ಶಂಸುದ್ದಿನ್ ಸರ್ಕಲ್ ಸಮೀಪ ಸತ್ಕಾರ ಹೋಟೆಲ್ ಮುಂಭಾಗದಲ್ಲಿ ನಡೆದಿದೆ.ಘಟನೆಯ ವಿಡಿಯೋ ಹೋಟೆಲ್ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದ ಒಂದು ವಾರದ ಹಿಂದಷ್ಟೆ ಮಳೆ ನೀರು ಹರಿದು ಹೋಗಲು ಹೆದ್ದಾರಿ ಪಕ್ಕದಲ್ಲಿದ್ದ ಹಳೆಯ ರಾಜ ಕಾಲುವೆಯೊಂದನ್ನು ಬಿಡಿಸಿ ಹೊಂಡ ತೆಗೆದಿದ್ದರು. ಆದರೆ ಸಂಚಾರ ನಿಯಮ ಪಾಲಿಸದೇ ಬಂದ ಇಬ್ಬರು ಸವಾರರು ಅಪಘಾತ ಪಡಿಸಿಕೊಂಡಿದ್ದು ಯಾವುದೇ ದೊಡ್ಡ ಹಾನಿ ಸಂಭವಿಸಿಲ್ಲ.


Advertisement