Uttara kannda-ಪತ್ನಿಯೊಂದಿಗೆ ಜಗಳಮಾಡಿಕೊಂಡು ಸಿದ್ದಾಪುರದಿಂದ ಮುರುಡೇಶ್ವಕ್ಕೆ ಬಂದು ರೈಲಿಗೆ ತಲೆಕೊಟ್ಟ ಭಟ್ಟರನ್ನ ರಕ್ಷಿಸಿದ ಪೊಲೀಸರು
Murdeshwar news :- ಪತ್ನಿಯೊಂದಿಗೆ ಜಗಳವಾಡಿ ರೈಲ್ವೆ ಹಳಿಯ ಮೇಲೆ ನಿಂತು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದ (murdeshwar) ಪೊಲೀಸರು ರಕ್ಷಿಸಿ ಮರಳಿ ಮನೆಗೆ ಕಳುಹಿಸಿದ ಮಾತವೀಯ ಘಟನೆ ನಡೆದಿದೆ.
ಸಿದ್ದಾಪುರ (siddapura) ತಾಲೂಕಿ ಹೆಗ್ಗರಣೆಯ ವಿಶ್ವನಾಥ್ ಪರಮೇಶ್ವರ್ ಭಟ್ ರಕ್ಷಣೆಗೊಳಗಾದ ವ್ಯಕ್ತಿಯಾಗಿದ್ದಾರೆ.
ಇದನ್ನೂ ಓದಿ:-Murdeshwar|ಬೀಚ್ ನಲ್ಲಿ ವಾಹನ ಓಡಿಸಿ ಹುಚ್ಚಾಟ ವಾಹನ ಸವಾರನಿಗೆ 184 IMVನಡಿ ದಂಡ!
ಇವರು ಪತ್ನಿಯೊಂದಿಗೆ ಗಲಾಟೆ ಮಾಡಿಕೊಂಡು ಸಿದ್ದಾಪುರದಿಂದ ಮುರುಡೇಶ್ವರದ ರೈಲ್ವೆ ನಿಲ್ದಾಣಕ್ಕೆ ಬಂದಿದ್ದು ಗೋವಾ ದಿಂದ ಮಂಗಳೂರಿಗೆ ತೆರಳುವ ರೈಲಿನ ಎದುರು ಹಳಿಯ ಮೇಲೆ ಆತ್ಮಹತ್ಯೆ ಮಾಡಿಕೊಳ್ಳಲು ನಿಂತಿದ್ದನ್ನು ಗಮನಿಸಿದ ರೈಲ್ವೇ ಇಲಾಖೆ ಸಿಬ್ಬಂದಿ ಅರನ್ನು ರಕ್ಷಿಸಿ ಮುರುಡೇಶ್ವರ ಪೊಲೀಸ್ ಠಾಣೆಯ ASI ರುದ್ರೇಶ್ ರವರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ASI ರುದ್ರೇಶ್ ರವರು ಠಾಣೆಗೆ ಕರೆದೊಯ್ದು ಸಾಂತ್ವನ ಹೇಳಿ ನಂತರ ಅವರ ಪತ್ನಿ ಯಮುನಾ ಭಟ್ ರವರನ್ನು ಕರೆಯಿಸಿ ಬುದ್ದಿವಾದ ಹೇಳಿ ಸುರಕ್ಷಿತವಾಗಿ ಮನೆಗೆ ಕಳುಹಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.