ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Sagar:ಸಾಗರದ ರಾಮಕೃಷ್ಣ ವಿದ್ಯಾಲಯಕ್ಕೆ ಮಕ್ಕಳ ಅಡ್ಮೀಶನ್ ಮಾಡಿಸುವ ಮುಂಚೆ ಎಚ್ಚರ!

Sagar:- The Deputy Director of the Administration Division of the Education Department has ordered the Ramakrishna Vidyalaya, located on Soraba Road in Sagar Nagar, Shivamogga district, not to enroll students in the school for the 2025-26 academic year without the permission of the government/department, as it is not following the rules of the Education Department.
09:23 PM Jun 02, 2025 IST | ಶುಭಸಾಗರ್
Sagar:- The Deputy Director of the Administration Division of the Education Department has ordered the Ramakrishna Vidyalaya, located on Soraba Road in Sagar Nagar, Shivamogga district, not to enroll students in the school for the 2025-26 academic year without the permission of the government/department, as it is not following the rules of the Education Department.
ಅತೀ ಕಡಿಮೆ ಬೆಲೆಯಲ್ಲಿ ಅಗತ್ಯ ವಸ್ತಗಳ ಕರೀದಿಗೆ ಒಮ್ಮೆ ಭೇಟಿನೀಡಿ.-KSRTC ಬಸ್ ನಿಲ್ದಾಣದ ಹಿಂಭಾಗ,ಬ್ರಾಹ್ಮಣ ಗಲ್ಲಿ, ,ಕಾರವಾರ .ಮಕ್ಕಳ ಶಾಲಾ ಪುಸ್ತಕಗಳು ಅತೀ ಕಡಿಮೆ ದರದಲ್ಲಿ ಲಭ್ಯ.

Sagar:ಸಾಗರದ ರಾಮಕೃಷ್ಣ ವಿದ್ಯಾಲಯಕ್ಕೆ ಮಕ್ಕಳ ಅಡ್ಮೀಶನ್ ಮಾಡಿಸುವ ಮುಂಚೆ ಎಚ್ಚರ!

Advertisement

ಸಾಗರ:- ಶಿವಮೊಗ್ಗ ಜಿಲ್ಲೆಯ ಸಾಗರ (sagar)ನಗರದ ಸೊರಬ ರಸ್ತೆಯಲ್ಲಿ ಇರುವ ರಾಮಕೃಷ್ಣ ವಿದ್ಯಾಲಯವು ಶಿಕ್ಷಣ ಇಲಾಖೆ ನಿಯಮವನ್ನು ಪಾಲಿಸದೇ ಇರುವ ಕಾರಣ 2025-26ನೇ ಸಾಲಿಗೆ ಸರ್ಕಾರ/ಇಲಾಖೆಯ ಅನುಮತಿಯಿಲ್ಲದೆ ಶಾಲೆಗೆ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳದಂತೆ ಶಿಕ್ಷಣ ಇಲಾಖೆಯ ಆಡಳಿತ ವಿಭಾಗದ  ಉಪನಿರ್ದೇಶಕು ಆದೇಶಿಸಿದ್ದಾರೆ.

ಸಾಗರದ ರಾಮಕೃಷ್ಣ ವಿದ್ಯಾಲಯ ಶಾಲಾ ಕಟ್ಟಡದ ಸುರಕ್ಷತಾ ಪ್ರಮಾಣ ಪತ್ರದಿಂದ ಹಿಡಿದು ಹಲವು ದಾಖಲೆಗಳನ್ನು ನೀಡದೇ ಶಿಕ್ಷಣ ಇಲಾಖೆಗೆ ವಂಚಿಸಿದೆ. ಇದಲ್ಲದೇ ಅಲ್ಲಿ ಪಾಠ ಮಾಡುವ ಶಿಕ್ಷಕರ ಶಿಕ್ಷಣದ ಅರ್ಹತೆ ಬಗ್ಗೆಯೂ ಪ್ರಶ್ನೆ ಎದ್ದಿದ್ದು ಶಿಕ್ಷಕರ ಅರ್ಹತೆ ಸಹ ಇಲ್ಲ ಎಂಬುದು ತಿಳಿದುಬಂದಿದೆ. ಇದಲ್ಲದೇ ಈ ಶಾಲೆಯು ಅಪಾಯಕಾರಿ  ಸ್ಥಳದಲ್ಲಿ ಇದ್ದು ಮಕ್ಕಳ ಸುರಕ್ಷತೆ ಇಲ್ಲ ಎಂಬುದನ್ನು ಶಿಕ್ಷಣ ಇಲಾಖೆ ತಿಳಿಸಿದೆ.

ಆದ್ರೆ ಪ್ರಸಕ್ತ ವರ್ಷದಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಣ ಇಲಾಖೆ ಆದೇಶವಿದ್ದರೂ ನೊಂದಣಿ ಮಾಡಿಕೊಳ್ಳುತ್ತಿರುವ ಬಗ್ಗೆ ದೂರು ಕೇಳಿಬಂದಿದೆ.

Advertisement

ಏನಿದೆ ಇಲಾಖೆ ವರದಿಯಲ್ಲಿ?

ಸಾಗರದ ರಾಮಕೃಷ್ಣ ವಿದ್ಯಾಲಯದ ಮೇಲೆ ಹಲವು ಪೋಷಕರು ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು. ಇದಲ್ಲದೇ ಹಲವು ದಾಖಲೆಗಳನ್ನು ಸುಳ್ಳು ಮಾಹಿತಿ ನೀಡಿರುವ ಕುರಿತು ದೂರು ನೀಡಲಾಗಿತ್ತು.ಈ ಕುರಿತು ತನಿಖೆ ನಡೆಸಿದ ಶಿಕ್ಷಣ ಇಲಾಖೆ ರಾಮಕೃಷ್ಣ ವಿದ್ಯಾಲಯಕ್ಕೆ ನೋಟಿಸ್ ನೀಡಿದೆ.

 01 ನೇ ತರಗತಿಯಿಂದ 05ನೇ ತರಗತಿಯವರೆಗೆ ಮಾಧ್ಯಮ ಬದಲಾವಣೆ ಮಾಡಿಕೊಂಡ ದಾಖಲೆಗಳು ಶಾಲೆಯಲ್ಲಿ ಲಭ್ಯವಿರುವುದಿಲ್ಲ. ಶಾಲೆ ನಡೆಯುತ್ತಿರುವ ಜಾಗವು ಶ್ರೀ ರಾಮಕೃಷ್ಣ ಗುರುಕುಲಾಶ್ರಮ ಟ್ರಸ್ಟ್ ಶಿವಮೊಗ್ಗ ಇವರ ಹೆಸರಿಗೆ ನೋಂದಣಿಯಾಗಿರುವುದಿಲ್ಲ. ಶಾಲೆ ನಡೆಸಲು ಸದರಿ ಟ್ರಸ್ಟ್ 10 ವರ್ಷಗಳ ಅವಧಿಗೆ ಬಾಡಿಗೆಗೆ ಪಡೆದಿದ್ದು, 2015-16ರಲ್ಲಿ ಟ್ರಸ್ಟಿನ ಸದಸ್ಯರಾದ ಶ್ರೀಮತಿ ಭಾಗೀರಥಮ್ಮರವರು ಶ್ರೀ ಕೆ.ವಿ ಲಕ್ಷ್ಮಣ್ ಬಿನ್ ಕೆ ವೆಂಕಟರಮಣ ಆಚಾರ್ ಸಾಗರ ರವರಿಂದ ಖರೀದಿಸಿರುತ್ತಾರೆ.

ಈ ಜಾಗದ ಬಗ್ಗೆ ಪರಿಶೀಲಿಸಲಾಗಿ ಶಾಲೆ ಪ್ರಸ್ತುತ ನಡೆಯುತ್ತಿರುವ ಜಾಗವು ಟ್ರಸ್ಟ್ ಹೆಸರಿಗೆ ನೋಂದಣಿಯಾಗಿರುವುದಿಲ್ಲ ಹಾಗೂ ಸದರಿ ಜಾಗವು ಶೈಕ್ಷಣಿಕ ಚಟುವಟಿಕೆಗಳಿಗೆಂದು ಸಕ್ಷಮ ಪ್ರಾಧಿಕಾರದಿಂದ ಭೂ ಪರಿವರ್ತನೆಯಾಗಿರುವುದಿಲ್ಲ. ಸದರಿ ಶಾಲೆ ನಡೆಯುತ್ತಿರುವ ಕಟ್ಟಡವನ್ನು ನಿರ್ಮಿಸಲು ನಗರಸಭೆಯಿಂದ ಪರವಾನಿಗೆ ಪಡೆದಿರುವುದಿಲ್ಲ. ಪ್ರಸ್ತುತ ಶಾಲೆ ನಡೆಯುತ್ತಿರುವ ಕಟ್ಟಡವನ್ನು ಶ್ರೀ ರಾಮಕೃಷ್ಣ ಗುರುಕುಲಾಶ್ರಮ ಟ್ರಸ್ಟ್(ರಿ) ಶಿವಮೊಗ್ಗ. ರವರು ಶ್ರೀಮತಿ ಭಾಗೀರಥಮ್ಮರವರಿಂದ 30 ವರ್ಷಗಳಿಗೆ ಲೀಸ್ ಪಡೆದುಕೊಂಡಿದ್ದು, ಕರಾರು ಪತ್ರವನ್ನು ಸಕ್ಷಮ ಪ್ರಾಧಿಕಾರದಿಂದ ನೊಂದಣಿಯಾಗಿರುವುದಿಲ್ಲ.

ವರದಾ ನದಿಯಲ್ಲಿ ಮುಳುಗಿರುವ ಶಾಲಾ ಕಟ್ಟಡದ ರಕ್ಷಣಾ ಗೋಡೆ

ಇದನ್ನೂ ಓದಿ:-Rain:ರಾಜ್ಯದಲ್ಲಿ ಜೂ.8 ರ ವರೆಗೆ  ಮಳೆ ಇಳಿಕೆ-ಎಲ್ಲಿ ಎಷ್ಟು ಮಳೆ ವಿವರ ನೋಡಿ

ಮಾನ್ಯ ಪೌರಾಯುಕ್ತರು ನಗರ ಸಭೆ ಸಾಗರ ರವರು ತಮ್ಮ ಪತ್ರ ಸಂಖ್ಯೆ:28/2023-24 ໖:20/06/20230 2 2 01 2 : 266-6-5-5/2 2 10*120 ಅಡಿಗಳ ಖಾತಾ ನಿವೇಶನದ ಹಿಂಭಾಗದಲ್ಲಿ ಅಂದರೆ ದಕ್ಷಿಣ ದಿಕ್ಕಿನಲ್ಲಿ ವರದಾ ನದಿಯ ಬಫರ್ ಜೋನ್ ವ್ಯಾಪ್ತಿಯನ್ನು ಅತಿಕ್ರಮಿಸಿ ಆಕ್ರಮವಾಗಿ ತಡೆ ಗೋಡೆ ನಿರ್ಮಿಸಿರುವುದು ಹಾಗೂ ಈ ಕಛೇರಿಯಿಂದ ಪರವಾನಿಗೆಯನ್ನು ಪಡೆಯದೇ ಕಟ್ಟಡ ನಿರ್ಮಾಣ ಮಾಡುತ್ತಿದ್ದು ಮತ್ತು ಪರವಾನಿಗೆಯನ್ನು ಪಡೆಯದೇ ನಿರ್ಮಿಸುತ್ತಿರುವ ಕಟ್ಟಡವನ್ನು ತೆರವುಗೊಳಿಸುವಂತೆ ಸ್ವತ್ತಿನ ಮಾಲೀಕರಾದ ಶ್ರೀಮತಿ ಭಾಗೀರಥಮ್ಮ ಇವರಿಗೆ ನೋಟಿಸ್ ನೀಡಲಾಗಿದೆ.

ಶಾಲಾ ಕಟ್ಟಡ ಸುರಕ್ಷತೆಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯಿಂದ ಸಂಪೂರ್ಣ ಶಾಲಾ (school)ಕಟ್ಟಡಕ್ಕೆ ಸಂಬಂಧಿಸಿದಂತೆ ಸುರಕ್ಷತಾ ಪ್ರಮಾಣ ಪತ್ರ ನೀಡಿರುವುದಿಲ್ಲ. ಶಾಲೆ ಕಟ್ಟಡದ ಮುಂಭಾಗದಲ್ಲಿ ಶಾಲಾ ಕಾಂಪೌಂಡ್‌ನಿಂದ ಸುಮಾರು 40 ಅಡಿಗಳ ದೂರದಲ್ಲಿ ರೈಲ್ವೆ ಬ್ರಾಡ್‌ಗೇಜ್ ಹಾದು ಹೋಗಿರುತ್ತದೆ.

ಶಾಲಾ ಕಟ್ಟಡದ ಹಿಂಭಾಗದಲ್ಲಿ ವರದಾ ನದಿ ಹಾದು ಹೋಗಿರುತ್ತದೆ. ಮಳೆಗಾಲದಲ್ಲಿ ಮಳೆ(Rain) ಹೆಚ್ಚಾದ ಸಂದರ್ಭದಲ್ಲಿ ನದಿಯ ನೀರು ಪ್ರವಾಹಿಸುವ ಸಂಭವವಿದ್ದು, ಮಕ್ಕಳ ಸುರಕ್ಷತೆ ಮತ್ತು ಕಟ್ಟಡದ ಸುರಕ್ಷತೆಗೆ ಅಪಾಯವಾಗುವ ಸಂಭವವಿರುತ್ತದೆ. ಶಾಲಾ ಮಕ್ಕಳಿಗೆ ಆಟವಾಡಲು ವಿಶಾಲವಾದ ಹಾಗೂ ಸುರಕ್ಷಿತವಾದ ಆಟದ ಮೈದಾನವಿರುವುದಿಲ್ಲ. ಶಾಲೆಯು ಅಗತ್ಯವಾದ ಕೊಠಡಿಗಳನ್ನು, ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕವಾದ ಶೌಚಾಲಯಗಳನ್ನು, ಕುಡಿಯುವ ನೀರಿನ ಸೌಲಭ್ಯವನ್ನು ಹೊಂದಿರುತ್ತದೆ.

ಇಲಾಖೆ ಅಧಿಕಾರಿಗಳು ಭೇಟಿ ನೀಡಿದ ಸಂಧರ್ಭದಲ್ಲಿ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ. ಶಿಕ್ಷಕರ ವಿದ್ಯಾರ್ಹತೆ, ಸೇವಾವಹಿಯ ಸಮರ್ಪಕ ನಿರ್ವಹಣೆ ಹಾಗೂ ಶಿಕ್ಷಕರಿಗೆ ಕನಿಷ್ಠ ಮೂಲ ವೇತನ ನೀಡಿದ ದಾಖಲೆಗಳು ಇರುವುದಿಲ್ಲ ಎಂದು ವರದಿ ಸಲ್ಲಿಸಿರುತ್ತಾರೆ. ಅಲ್ಲದೇ ಶಾಲೆಯನ್ನು ಇಲಾಖೆ ನಿಯಮಗಳಿಗೆ ವ್ಯತಿರಿಕ್ತವಾಗಿ. ಮಕ್ಕಳ ಸುರಕ್ಷತೆ ಕಾಪಾಡದೇ ಅನಧಿಕೃತವಾಗಿ ನಡೆಸಲಾಗುತ್ತಿದೆ ಎಂದು ಉಲ್ಲೇಖ (1)ರಲ್ಲಿ ಅನೇಕ ದೂರು ಅರ್ಜಿಗಳನ್ನು ಸಲ್ಲಿಸಿರುತ್ತಾರೆ.

ಶಾಲೆ ಕಟ್ಟಡದ ಬಳಿ ನದಿ ಭಾಗವನ್ನು ಒತ್ತುವರಿ ಮಾಡಿರುವುದು.

ಈ ಕುರಿತು ಸಾಗರ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಅನೇಕ ಬಾರಿ ತಿಳಿಸಲಾದರೂ ಸಹ, ನೀವು ನಿಮ್ಮ ಶಾಲಾ ದಾಖಲೆಗಳನ್ನು ಸರ್ಕಾರ/ಇಲಾಖೆಯು ನಿಗಧಿಪಡಿಸಿರುವಂತೆ ಸಲ್ಲಿಸದಿರುವುದು ಕಂಡುಬಂದಿರುತ್ತದೆ. ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ ಶಾಲೆಯನ್ನು ಸರ್ಕಾರ/ಇಲಾಖೆಯು ನಿಗಧಿಪಡಿಸಿರುವ ಮಾನದಂಡಗಳನ್ವಯ ನಡೆಸದಿರುವುದು ಹಾಗೂ ಸರಿಪಡಿಸಿಕೊಳ್ಳದಿರುವ ಹಿನ್ನಲೆಯಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆ 1983 ಸೆಕ್ಷನ್ 30-31, ಕ.ಶಿ.ಸಂ ನಿಯಮ 1997 ಸ.ಅಧಿಸೂಚನೆ ಸಂಖ್ಯೆ:ಇಡಿ 52ಪಿಜಿಸಿ 2020 ದಿನಾಂಕ:07/03/2020 ಮತ್ತು ತಿದ್ದುಪಡಿ ದಿನಾಂಕ:11/03/2020ರ ಪ್ರಕಾರ ನಿಯಮ ಉಲ್ಲಂಘನೆಯಾಗಿರುತ್ತದೆ.

ಆದ್ದರಿಂದ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ-2009 ಹಾಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ನಿಯಮಗಳು-2012ರ ನಿಯಮ 12(3) ರಂತೆ ಶಾಲಾ ಮಾನ್ಯತೆಯನ್ನು ಏಕೆ ಹಿಂಪಡೆಯಬಾರದು ಎಂಬ ಬಗ್ಗೆ ಈ ಪತ್ರ ತಲುಪಿದ 07 ದಿವಸಗಳ ಒಳಗಾಗಿ ಅಗತ್ಯ ದಾಖಲೆಗಳೊಂದಿಗೆ ಈ ಕಚೇರಿಗೆ ಲಿಖಿತ ವಿವರಣೆ ನೀಡಲು ಸೂಚಿಸಿದೆ. ತಪ್ಪಿದಲ್ಲಿ ನೀವು ಹೇಳುವುದು ಏನು ಇಲ್ಲವೆಂದು ಭಾವಿಸಿ ನಿಯಮಾನುಸಾರ ಮಾನ್ಯತೆ ಹಿಂಪಡೆಯಲು ಸಕ್ಷಮ ಪ್ರಾಧಿಕಾರಕ್ಕೆ ಏಕಪಕ್ಷೀಯವಾಗಿ ಶಿಫಾರಸ್ಸು ಮಾಡಲಾಗುವುದು ಎಂಬುದಾಗಿ ತಿಳಿಸುತ್ತಾ, 2025-26ನೇ ಸಾಲಿಗೆ ಸರ್ಕಾರ/ಇಲಾಖೆಯ ಅನುಮತಿಯಿಲ್ಲದೆ ಶಾಲೆಗೆ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳದಂತೆ ಈ ಮೂಲಕ ಸೂಚಿಸಿದೆ. ತಪ್ಪಿದಲ್ಲಿ ಮುಂದಿನ ಆಗುಹೋಗುಗಳಿಗೆ ಶಾಲಾ ಆಡಳಿತ ಮಂಡಳಿಯವರೇ ಸೇರ ಜವಾಬ್ದಾರರಾಗಿರುತ್ತೀರೆಂದು ತಿಳಿಯುವುದು.

ಒಟ್ಟಿನಲ್ಲಿ ಈ ಶಾಲೆಯ ಆಡಳಿತ ಮಂಡಳಿ ಶಿಕ್ಷಣವನ್ನೇ ಲಾಭದ ಹಾದಿ ಮಾಡಿಕೊಂಡು ಮಕ್ಕಳ ಜೀವನದ ಜೊತೆ ಚಲ್ಲಾಟ ಆಡುತಿದ್ದು ,ಪೋಷಕರು ಈ ಬಗ್ಗೆ ಜಾಗೃತಗೊಳ್ಳಬೇಕಿದೆ.

Advertisement
Advertisement
Next Article
Advertisement