Sirsi :ಅಕ್ರಮ ಜಾನುವಾರು ಸಾಗಾಟ - ಮೂವರ ಬಂಧನ

Sirsi :ಅಕ್ರಮ ಜಾನುವಾರು ಸಾಗಾಟ - ಮೂವರ ಬಂಧನ.
ಕಾರವಾರ/ಶಿರಸಿ: ಅಕ್ರಮ ಹಾಗೂ ಹಿಂಸಾತ್ಮಕವಾಗಿ ವಾಹನದ ಮೂಲಕ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿ, ಶಿರಸಿ(sirsi) ಗ್ರಾಮೀಣ ಠಾಣೆಯ ಪೊಲೀಸರು(police) ಐದು ಜಾನುವಾರುಗಳನ್ನು ರಕ್ಷಿಸಿದ್ದಾರೆ.
ಹಾವೇರಿ(Haveri) ಜಿಲ್ಲೆಯ ಹಾನಗಲ್ ತಾಲೂಕಿನ ದೇಸಾಯಿ ಕಲ್ಲಾಪುರದ ಸಂತೋಷ ಚನ್ನಬಸಪ್ಪ ಗಾಣಿಗೇರ, ಹಿರೇಕೌಂಶಿಯ ಮೊಹಮ್ಮದ್ ಗೌಸ್, ಕಲಕುದ್ರಿಯ ಮೌಲಾಲಿ ತೋಟದ, ಚಿಕೌಂಶಿಯ ಅಮಿರ ಖಾನ ಬಂಧಿತರು.
ಇದನ್ನೂ ಓದಿ:-Kumta: ದೇವಿಮನೆ ಘಟ್ಟಭಾಗದಲ್ಲಿ ಲಘು ವಾಹನ ಸಂಚಾರಕ್ಕೆ ಅನುಮತಿ
ಮೂವರು ಸೇರಿಕೊಂಡು ಜೂ 2 ರಂದು ಬೆಳಿಗ್ಗೆ ತಾಲೂಕಿನ ವಕ್ಕಲಕೊಪ್ಪ ಗ್ರಾಮದ ಈಶ್ವರ ಗೌಡ ಮತ್ತು ಮಹಾದೇವ ಗೌಡ ಅವರಿಂದ ಜಾನುವಾರುಗಳನ್ನು ಖರೀದಿ ಮಾಡಿ ಹೆಚ್ಚಿನ ಬೆಲೆಗೆ ಅಕ್ಕಿಆಲೂರಿನ ಮಾರುಕಟ್ಟೆಗೆ 10 ಸಾವಿರ ರೂ. ಮೌಲ್ಯದ ಎಮ್ಮೆ, 8 ಸಾವಿರ ರೂ. ಮೌಲ್ಯದ ಆಕಳು, 600ರೂ. ಮೌಲ್ಯದ ಕೋಣದ ಮರಿ, 800ರೂ. ಮೌಲ್ಯದ ಆಕಳ ಕರು,500 ರೂ. ಮೌಲ್ಯದ ಹೆಣ್ಣು ಕರುವನ್ನು ಅಕ್ರಮ ಹಾಗೂ ಹಿಂಸಾತ್ಮಕವಾಗಿ ಟಾಟಾ ಏಸ್ನಲ್ಲಿ ಹಾವೇರಿ ರಸ್ತೆ ಮಾರ್ಗವಾಗಿ ಸಾಗಿಸುತ್ತಿದ್ದ ವೇಳೆ ಚಿಪಗಿ ಚೆಕ್ಪೋಸ್ಟ್ ಬಳಿ ಶಿರಸಿ ಗ್ರಾಮೀಣ ಠಾಣೆಯ ತನಿಖಾಧಿಕಾರಿ ಪಿಎಸ್ಐ ಅಶೋಕ ರಾಥೋಡ್, ಸಂತೋಷ್ ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿ ಮೂವರನ್ನು ಬಂಧಿಸಿ, 5 ಜಾನುವಾರುಗಳನ್ನು ರಕ್ಷಿಸಿದ್ದಾರೆ. ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
