Uttara kannada| ನೊಂದಣಾಧಿಕಾರಿ ಕಚೇರಿಗಳಿಗೆ ಲೋಕಾಯುಕ್ತ ದಾಳಿ
Uttara kannada| ನೊಂದಣಾಧಿಕಾರಿ ಕಚೇರಿಗಳಿಗೆ ಲೋಕಾಯುಕ್ತ ದಾಳಿ
ಕಾರವಾರ (05 November2025) :- ವಿವಾಹ ನೊಂದಣಾಧಿಕಾರಿ ಕಚೇರಿಯಲ್ಲಿ ಯೂಟ್ಯೂಬರ್ ಮುಕೆಳಪ್ಪ ನಕಲಿ ದಾಖಲೆ ನೀಡಿ ನೊಂದಣಿ ಮಾಡಿಕೊಂಡ ಕುರಿತು ಶ್ರೀರಾಮ ಸೇನೆ ಹಾಗೂ ಗಾಯಿತ್ರಿ ತಾಯಿ ಶಿವಕ್ಕ ದೂರು ಕೊಟ್ಟ ಬೆನ್ನಲ್ಲೇ ಇದೀಗ ಕಾರವಾರದ ಲೋಕಾಯುಕ್ತ ಅಧುಕಾರಿಗಳು (lokayuktha ) ಉತ್ತರ ಕನ್ನಡ (uttara kannada)ಜಿಲ್ಲೆಯ ಮುಂಡಗೋಡಿನ ವಿವಾಹ ನೊಂದಣಾಧಿಕಾರಿ ಕಚೇರಿಗೆ ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸಿದ್ದಾರೆ .
ಕಾರವಾರದ(karwar) ಲೋಕಾಯುಕ್ತ ಡಿ.ವೈ .ಎಸ್.ಪಿ ಧನ್ಯ ನಾಯಕ್ ನೇತ್ರತ್ವದಲ್ಲಿ ಈ ದಾಳಿ ನಡೆದಿದೆ. ಮುಂಡಗೋಡು ನೊಂದಣಾಧಿಕಾರಿ ಕಚೇರಿಯಲ್ಲಿ ನಿಯಮ ಮೀರಿ ಫೇಕ್ ದಾಖಲೆ ಬಳಸಿ ವಿವಾಹ ನೊಂದಣಿ ಮಾಡಿಕೊಂಡ ಕುರಿತು ದೂರು ನೀಡಲಾಗಿತ್ತು. ಇದಲ್ಲದೇ ಜಿಲ್ಲೆಯ ನೊಂದಣಾಧಿಕಾರಿ ಕಚೇರಿಯಲ್ಲಿ ನಿಯಮ ಬಾಹಿರ ನೊಂದಣಿ ಮಾಡಿಕೊಂಡ ಹಾಗೂ ಬ್ರಷ್ಟಾಚಾರದ ದೂರುಗಳು ಕೇಳಿಬಂದಿದ್ದು ಈ ಹಿನ್ನೆಲೆಯಲ್ಲಿ ಕಾರವಾರ, ಕುಮಟಾ ,ಶಿರಸಿ, ಸಿದ್ದಾಪುರ ,ಹಳಿಯಾಳ, ಜೋಯಿಡಾ ,ಯಲ್ಲಾಪುರ ವಿವಾಹ ನೊಂದಣಾಧಿಕಾರಿ ಕಚೇರಿ ಮೇಲೂ ಲೋಕಾಯುಕ್ತರು ದಾಳಿ ನಡೆಸಿದ್ದು ದಾಖಲೆ ಪರಿಶೀಲನೆ ನಡೆಸುತಿದ್ದಾರೆ.