Uttara kannada: ಶಿರಸಿ-ಕುಮಟಾ ಹೆದ್ದಾರಿಯ update ಕೊಟ್ಟ ಜಿಲ್ಲಾಧಿಕಾರಿ ಏನಂದ್ರು?

Uttara kannada: ಶಿರಸಿ-ಕುಮಟಾ ಹೆದ್ದಾರಿಯ update ಕೊಟ್ಟ ಜಿಲ್ಲಾಧಿಕಾರಿ ಏನಂದ್ರು?
ವಿಡಿಯೋ:-
ಕಾರವಾರ :- ಮಳೆಯಿಂದ (Rain)ಉತ್ತರ ಕನ್ನಡ ಜಿಲ್ಲೆಯ ಕುಮಟಾ ರಾಷ್ಟ್ರೀಯ ಹೆದ್ದಾರಿ 766E ರಲ್ಲಿ ತಾತ್ಕಾಲಿಕ ರಸ್ತೆ ಕೊಚ್ಚಿಹೋಗಿದ್ದು , ಇದೀಗ ಒಂದು ವಾರದ ನಂತರ ಲಘು ವಾಹನ ಸಂಚಾರಕ್ಕೆ ಅನುವುಮಾಡಿಕೊಡಲಾಗಿದೆ.
ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ರವರು ಸೇತುವೆ ನಿರ್ಮಾಣ ಆಗಿದ್ದರಿಂದ ಸದ್ಯ ಲಘು ವಾಹನಕ್ಕೆ ಅನುವು ಮಾಡಿಕೊಡಲಾಗಿದೆ.NHAI ದಿಂದ ಶಿರಸಿ - ಕುಮಟಾ ರಸ್ತೆಯಲ್ಲಿ ಒಟ್ಟು 11 ಸೇತುವೆ ನಿರ್ಮಾಣ ಮಾಡಲಾಗುತ್ತಿದೆ.
ಜೂನ್ 20 ರ ಒಳಗೆ ಎಲ್ಲ 11 ಸೇತುವೆ ನಿರ್ಮಾಣ ಕಾರ್ಯ ಪೂರ್ತಿ ಮಾಡುತ್ತೇವೆ ಎಂದು NHAI ಹೇಳಿದೆ ಸದ್ಯ ಸೇತುವೆಯ ದೃಡತೆ ಪ್ರಮಾಣ ಪತ್ರ ನೀಡಿದ ನಂತರ ಭಾರಿ ವಾಹನಕ್ಕೆ ಅವಕಾಶ ಮಾಡಿಕೊಡಲಾಗುವು ಎಂದು ಹೇಳಿದರು. ಬೆಣ್ಣೆಹಳ್ಳಕ್ಕೆ ಅಡ್ಡಲಾಗಿ ಒಂದು ಸೇತುವೆ ನಿರ್ಮಾಣ ನಡೆಯುತ್ತಿದೆ.
ಹಳ್ಳಕ್ಕೆ ಅಡ್ಡಲಾಗಿ ಚಿಕ್ಕ ಪರ್ಯಾಯ ಸೇತುವೆ ನಿರ್ಮಾಣ ಮಾಡಿದ್ದು ಕಳೆದ ವಾರದ ಮಳೆಯಲ್ಲಿ ಕೊಚ್ಚಿ ಹೊಗಿತ್ತು.ತಾತ್ಕಾಲಿಕ ಸೇತುವೆ ಮಳೆಯಲ್ಲಿ ಕೊಚ್ಚಿ ಹೊಗಿದ್ದರಿಂದ ಶಿರಸಿ ಕುಮಟಾ 766E ರಾಷ್ಟ್ರಿಯ ಹೆದ್ದಾರಿಯಲ್ಲಿ ವಾಹನ ನಿರ್ಬಂಧಿಸಲಾಗಿತ್ತು.ಕೂಡಲೇ ಸೇತುವೆ ನಿರ್ಮಾಣ ಮಾಡುವಂತೆ NHI ಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸದ್ಯ ಲಘು ವಾಹನ ಓಡಾಟಕ್ಕೆ ಸೇತುವೆ ನಿರ್ಮಾಣ ಮಾಡಲಾಗಿದೆ.ದೇವಿಮನೆ ಘಟ್ಟ ಮೂಲಕ ಶಿರಸಿ - ಕುಮಟಾ ಗೆ ಓಡಾಟ ಮಾಡಲು ಅನುವು ಮಾಡಿಕೊಡಲಾಗಿದೆ.