Uttara kannda ಯಲ್ಲಾಪುರ-ಶಿರಸಿ ಹೆದ್ದಾರಿಯಲ್ಲಿ ಶ್ವಾನಗಳ ಮಾರಣ ಹೋಮ
Uttara kannda:- ಕನ್ನಡ ಜಿಲ್ಲೆಯ ಯಲ್ಲಾಪುರ (yallapura) ತಾಲೂಕಿನ ತೂಕದಬೈಲ್ ನ ಶಿರಸಿ-ಯಲ್ಲಾಪುರ ರಾಜ್ಯ ಹೆದ್ದಾರಿಯಲ್ಲಿ ಬೀದಿ ನಾಯಿಗಳ ( street dog) ಮಾರಣ ಹೋಮ ನಡೆಸಿರುವ ಘಟನೆ ನಡೆದಿದೆ .
ಬೀದಿ ನಾಯಿಗಳಿಗೆ ವಿಷವಿಟ್ಟು ಸಾಯಿಸಿರುವ ಶಂಕೆ ವ್ಯಕ್ತವಾಗಿದ್ದು ನೂರಾರು ನಾಯಿಗಳನ್ನು ಹೆದ್ದಾರಿಯಲ್ಲಿ ತಂದು ಟ್ರಕ್ ನಲ್ಲಿ ಬಿಟ್ಟು ಹೋಗಿದ್ದು ಸತ್ತ ನಾಯಿಗಳನ್ನು ಸಹ ಗುಂಪಾಗಿ ಎರಡು ಕಡೆ ಹಾಕಲಾಗಿದೆ.
ಈವರೆಗೂ ಇದು ಯಾರು ಹಾಕಿ ಹೋಗಿದ್ದಾರೆ ಎಂಬ ಬಗ್ಗೆ ಸ್ಥಳೀಯ ಪಂಚಾಯ್ತಿಯ ಗಮನಕ್ಕೂ ಬಂದಿಲ್ಲ. ಆದರೇ ಇಷ್ಟು ದೊಡ್ಡ ಮಟ್ಟದಲ್ಲಿ ನಲವತ್ತಕ್ಕೂ ಹೆಚ್ಚು ನಾಯಿಗಳ ಕಳೆಬರಹ ರಸ್ತೆ ಪಕ್ಕದಲ್ಲಿ ಬಿದ್ದಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಬಿದಿ ನಾಯಿಗಳನ್ನು ಹಿಡಿದು ಸಾಯಿಸಿ ತಂದು ಹಾಕಿರಬಹುದು ಎಂದು ಹೇಳಲಾಗುತಿದ್ದು ಸತ್ತ ನಾಯಿಗಳ ಜೊತೆ ಗಾಯಗೊಂಡ ನಾಯಿಗಳು ಹಾಗೂ ಅನಾರೋಗ್ಯ ಪೀಡಿತ ನಾಯಿಗಳು ಸಹ ಪತ್ತೆಯಾಗಿದೆ.
ಇದನ್ನೂ ಓದಿ:-SIRSI :ಯುವತಿಗೆ ಕೆಲಸ ಕೊಡಿಸಲು ಹೋದ ಯುವಕನಿಗೆ ಮುಸ್ಲಿಂ ಯುವಕರಿಂದ ಹಲ್ಲೆ.
ಈ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ಆಗಬೇಕು ಎಂದು ಶ್ವಾನ ಪ್ರಿಯರು ಆಗ್ರಹಿಸಿದ್ದಾರೆ. ಇನ್ನು ರಸ್ತೆ ಬದಿಯಲ್ಲೇ ಶ್ವಾನಗಳ ಶವ ಕೊಳೆತ ಸ್ಥಿತಿಯಲ್ಲಿ ಬಿದ್ದಿದ್ದು ವಾಹನ ಸವಾರರು ಮೂಗುಮುಚ್ಚಿಕೊಂಡು ಓಡಾಡುವಂತಾಗಿದ್ದು ರೋಗ ರುಜನೆ ಹರಡುವ ಸ್ಥಿತಿ ನಿರ್ಮಾಣವಾಗಿದೆ.
`ಟ್ರಕ್ ಮೂಲಕ ನಾಯಿಗಳನ್ನು ಬಿಟ್ಟಿರುವ ಬಗ್ಗೆ ಜನ ಪಂಚಾಯತಗೆ ತಿಳಿಸಿದ್ದರು. ನಾಯಿ ತಂದುಬಿಟ್ಟವರು ಯಾರು? ಎಂದು ಗೊತ್ತಾಗಿಲ್ಲ. ನಾಯಿ ಸಾವನಪ್ಪಿದ ಬಗ್ಗೆಯೂ ಮಾಹಿತಿ ಇರಲಿಲ್ಲ' ಎಂದು ಕಂಪ್ಲಿ ಗ್ರಾ ಪಂ ಅಧ್ಯಕ್ಷೆ ರೇಣುಕಾ ಬೋವಿವಡ್ಡರ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:-Yallapura |ಭಟ್ಟರ ಮನೆಯ ಮೂರು ಲಕ್ಷಕ್ಕೂ ಹೆಚ್ಚು ಮೌಲ್ಯದ ಅಡಿಕೆ ಕದ್ದ ಕಳ್ಳ ಜೈಲಿಗೆ
ನಿಯಮಾವಳಿಗಳ ಪ್ರಕಾರ ಗ್ರಾಮದಲ್ಲಿಯೇ ವಾಸವಿದ್ದು, ಜನರ ಸಮಸ್ಯೆ ಆಲಿಸಬೇಕಿದ್ದ ಹಾಗೂ ಗ್ರಾಮದ ನೈರ್ಮಲ್ಯ ಕಾಪಾಡುವ ಹೊಣೆ ಹೊತ್ತಿರುವ ಗ್ರಾ ಪಂ ಅಭಿವೃದ್ಧಿ ಅಧಿಕಾರಿ ರವಿ ಪಟಗಾರ್ ಅವರಿಗೆ ಈ ಬಗ್ಗೆ ಮಾಹಿತಿ ಯನ್ನು ಸ್ಥಳೀಯರು ನೀಡಿದ್ದರೂ ಈ ವಿಷಯವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ.