Uttara Kannda :ಮಂಗಳಮುಖಿಯರ ಗೂಂಡಾಗಿರಿ- ಹಣ ನೀಡದ್ದಕ್ಕೆ ಅಂಗಡಿಮಾಲೀಕ ,ಮಗುಮೇಲೆ ಹಲ್ಲೆ
Uttara Kannda 23 November 2024:- :- ಅಂಗಡಿ ಮಾಲೀಕ ಹಣ(Money) ನೀಡಲು ನಿರಾಕರಿಸಿದ್ದಕ್ಕೆ ಅಂಗಡಿಯನ್ನ ಪುಡಿಗೈದು ಮಾಲೀಕ ಹಾಗೂ ಆತನ ಚಿಕ್ಕ ಮಗುವಿನಮೇಲೆ ಹಲ್ಲೆಗೈದು ಮಂಗಳಮುಖಿಯರು ಗೂಂಡಾಗಿರಿ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ (uttara kannda) ಮುಂಡಗೋಡು(Mundgod) ನಗರದ ಶಿವಾಜಿ ಸರ್ಕಲ್ ಬಳಿ ನಡೆದಿದೆ.
ಇದನ್ನೂ ಓದಿ:- Mundgod:125 ಕ್ಕೆ ಏರಿಕೆ ಕಂಡ ಮಂಗನಬಾವು ಸೊಂಕು-ಶಾಲೆಗೆ ಮೂರುದಿನ ರಜೆ ಘೋಷಣೆ
ಅಂಗಡಿ ಮಾಲೀಕ ರಾಜೇಶ್ ಹಲ್ಲೆಗೊಳಗಾದವರಾಗಿದ್ದು ,ಹುಬ್ಬಳ್ಳಿಯಿಂದ ಬಂದ ಆರು ಜನ ಮಂಗಳಮುಖಿಯರು ಶಿವಾಜಿ ಸರ್ಕಲ್ ಬಳಿ ಭಿಕ್ಷೆ ಬೇಡುವ ನೆಪದಲ್ಲಿ ನೂರು ರುಪಾಯಿ ನೀಡುವಂತೆ ಕೇಳಿದ್ದು ಇದಕ್ಕೆ ಅಂಗಡಿ ಮಾಲೀಕ ನಿರಾಕರಿಸಿದ್ದಕ್ಕೆ ಕೋಪಗೊಂಡ ಮಂಗಳಮುಖಿಯರು ಹಲ್ಲೆ ನಡೆಸಿ, ಗ್ಲಾಸ್ ಒಡೆದು, ಚಾಕ್ಲೇಟ್ ಬಾಕ್ಸ್ ಗಳನ್ನು ಚಲ್ಲಾಡಿದ್ದಲ್ಲದೇ ಅಲ್ಲಿಯೇ ಇದ್ದ ಚಿಕ್ಕ ಮಗುವಿನ ಮೇಲೂ ಹಲ್ಲೆ ನಡೆಸಿದ್ದಾರೆ.
ಇದರಿಂದ ಮಗುವಿನ ತಲೆಗೆ ಸಹ ಪೆಟ್ಟಾಗಿದೆ. ಇನ್ನು ಆರು ಜನ ಮಂಗಳಮುಖಿಯರ ಗೂಂಡಾಗಿರಿ ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಆರುಜನ ಮಂಗಳಮುಖಿಯರನ್ನು ಮುಂಡಗೋಡು ಪೊಲೀಸರು ವಶಕ್ಕೆ ಪಡೆದಿದ್ದಾರೆ.