Honnavara:ಮದ್ಯದ ಮತ್ತಲ್ಲಿ ಅಣ್ಣ -ತಮ್ಮರ ಗಲಾಟೆ ಸಾವಿನಲ್ಲಿ ಅಂತ್ಯ
Honnavara news 04 December 2024 :- ಕ್ಷುಲ್ಲಕ ಕಾರಣಕ್ಕೆ ಮದ್ಯ ಸೇವಿಸಿ ಹೊಡೆದಾಡಿಕೊಳ್ಳುತಿದ್ದ ಸಹೋದರ ಮದ್ಯದ ಅಮಲು ಹತ್ಯೆಯಲ್ಲಿ ಕೊನೆಗೊಂಡಿದೆ.
11:30 AM Dec 04, 2024 IST | ಶುಭಸಾಗರ್
Honnavara news 04 December 2024 :- ಕ್ಷುಲ್ಲಕ ಕಾರಣಕ್ಕೆ ಮದ್ಯ ಸೇವಿಸಿ ಹೊಡೆದಾಡಿಕೊಳ್ಳುತಿದ್ದ ಸಹೋದರ ಮದ್ಯದ ಅಮಲು ಹತ್ಯೆಯಲ್ಲಿ ಕೊನೆಗೊಂಡಿದೆ.
Advertisement

ಈ ಘಟನೆ ನಡೆದಿದ್ದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ(honnavara) ತಾಲೂಕಿನ ಗುಂಡಿಬೈಲ್ ನ ಹೆಬೈಲನಲ್ಲಿ .
ಸುಭ್ರಾಯ್ ಹನುಮಂತ ನಾಯ್ಕ ಎಂಬಾತನೇ ತನ್ನ ಸಹೋದರ ನಾಗೇಶ್ ನಾಯ್ಕ ನನ್ನು ಹತ್ಯೆಗೈದ ಅಪರಾಧಿಯಾಗಿದ್ದಾನೆ.
ಇದನ್ನೂ ಓದಿ:-Honnavara: ಮಂಕಾಳು ವೈದ್ಯರ ಉಸ್ತುವಾರಿ ಕ್ಷೇತ್ರದ ಗ್ರಾಮ ಆಡಳಿತಾಧಿಕಾರಿ ಕಚೇರಿಗೆ ತೆರಳಲು ಅಧಿಕಾರಿಗಳಿಗೆ ಜನರಿಗೆ ಭಯ!
ಪ್ರತಿ ದಿನ ಈ ಸಹೋದರರು ಮದ್ಯ ಸೇವಿಸಿ ಒಂದಲ್ಲಾ ಒಂದು ವಿಷಯದಲ್ಲಿ ಗಲಾಟೆ ಮಾಡಿಕೊಂಡು ಹೊಡೆದಾಡಿಕೊಳ್ಳುತಿದ್ದರು ಆದರೇ ಮಂಗಳವಾರ ರಾತ್ರಿ ಮನೆಯಲ್ಲಿ ಮಧ್ಯ ಸೇವಿಸಿ ಮಾತಿಗೆ ಮಾತು ಬೆಳಸಿಕೊಂಡ ಸಹೋದರ ರಂಪಾಟ ಕೊನೆಗೆ ಹತ್ಯೆಯಲ್ಲಿ ಕೊನೆಗೊಂಡಿದೆ.
ಘಟನೆ ಸಂಬಂಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಮಂಜುನಾಥ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Advertisement