SIRSI :ಯುವತಿಗೆ ಕೆಲಸ ಕೊಡಿಸಲು ಹೋದ ಯುವಕನಿಗೆ ಮುಸ್ಲಿಂ ಯುವಕರಿಂದ ಹಲ್ಲೆ.
Sirsi News 21 November 2024 :- ತನಗೆ ಪರಿಚಿತವಿದ್ದ ಅನ್ಯ ಕೋಮಿನ ಯುವತಿಗೆ ಕೆಲಸ ಕೊಡಿಸಲು ಕರೆದೊಯ್ದಿದ್ದ ಯುವಕನಿಗೆ ಅನ್ಯ ಕೋಮಿನ ಯುವಕರು ಹಲ್ಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ(sirsi) ನಗರ ಶಿವಾಜಿ ಚೌಕ್ ನಲ್ಲಿ ನಡೆದಿದೆ.
ಇದನ್ನೂ ಓದಿ:-SIRSI :ಮನೆ ಕಳ್ಳತನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ! ಇವರು ಅಂತಿಂತ ಕಳ್ಳರಲ್ಲ!
ಶಿರಸಿ(Sirsi) ತಾಲೂಕಿನ ಕೊರ್ಲಕಟ್ಟಾ ಗೌಡಕೊಪ್ಪದ ವೀರೇಂದ್ರ ಜೀನದತ್ತ ಜೈನ್ (21) ಹಲ್ಲೆಗೊಳಗಾದ ಯುವಕನಾಗಿದ್ದು , ಶಿರಸಿ ರಾಜೀವನಗರದ ಶಕೀಲ್ ಅಹ್ಮದ್ (24), ಮಹಮ್ಮದ್ ಮಾಜ್ (26) ಹಾಗೂ ಶಿರಸಿ ಗೋಲಗೇರಿ ಓಣಿಯ ಉಬೇದ್ ಸವಣೂರ್ (25) ಹಲ್ಲೆ ನಡೆಸಿದ ಆರೋಪಿಗಳಾಗಿದ್ದು ಶಿರಸಿ ನಗರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದು ಓರ್ವ ಪರಾರಿಯಾಗಿದ್ದಾನೆ.
ಚನ್ನಾಪುರ ನಿವಾಸಿ ಉಸ್ಮಾ ಬಾನು (20) ಹಾಗೂ ವೀರೇಂದ್ರ ಜಿನದತ್ತ ಜೈನ್ ಹತ್ತಿರದ ಊರಿನವರಾಗಿದ್ದು ಪರಿಚಿತರಾಗಿದ್ದರು. ವಿರೇಂದ್ರ ಜಿನದತ್ತ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೆಕ್ಯುರಿಟಿ ಗಾರ್ಡ ಆಗಿದ್ದು ತನ್ನ ಆಸ್ಪತ್ರೆಯಲ್ಲಿ ಉಸ್ಮಾ ಬಾನುವನ್ನು ನರ್ಸ್ ಹುದ್ದೆಗಾಗಿ ಸಂದರ್ಶನಕ್ಕೆ ಕರೆದೊಯ್ದಿದ್ದ.
ಇದನ್ನೂ ಓದಿ:-Arecanut medicines ಅಡಿಕೆ ಕ್ಯಾನ್ಸರ್ ಕಾರಕ ಎನ್ನುವವರಿಗೆ ಇಲ್ಲಿದೆ ಅದರ ಔಷಧೀಯ ಗುಣ
ನಂತರ ಆಕೆಯೊಂದಿಗೆ ಐಸ್ ಕ್ರೀಮ್ ಪಾರ್ಲರ್ ನಲ್ಲಿ ಐಸ್ ಕ್ರೀಮ್ ತಿನ್ನುತಿದ್ದ ವೇಳೆ ಅನ್ಯ ಕೋಮಿನ ಯುವಕರು ತಮ್ಮ ಕೋಮಿನ ಯುವತಿಯೊಂದೊಗಿದ್ದೀಯಾ ನಮ್ಮ ಕೋಮಿನ ಯುವತಿಯನ್ನು ಪ್ರೀತಿಸುತೊದ್ದೀಯ ಎಂದು ಹೇಳಿ ಅಲ್ಲಿಯೇ ಹಲ್ಲೆ ಮಾಡಿದ್ದಾರೆ.
ಈ ಕುರಿತು ಶಿರಸಿ ಠಾಣೆಯಲ್ಲಿ ಹಲ್ಲೆಗೊಳಗಾದ ಯುವಕ ದೂರು ನೀಡಿದ್ದು ಇಬ್ಬರನ್ನು ಬಂಧಿಸಲಾಗಿದೆ.