For the best experience, open
https://m.kannadavani.news
on your mobile browser.
Advertisement

Sirsi : ಸಾಗುವಾನಿ ನಾಟ ವಶ: ಮೂವರ ಬಂಧನ

ಕಾರವಾರ :- ಅಕ್ರಮವಾಗಿ ಸಾಗುವಾನಿ ಮರ ಕಡಿದ ಮೂರು ಜನ ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ (sirsi) ಶಿವಳ್ಳಿ ಗ್ರಾಮದಲ್ಲಿ ನಡೆದಿದೆ.
10:18 PM Feb 10, 2025 IST | ಶುಭಸಾಗರ್
sirsi   ಸಾಗುವಾನಿ ನಾಟ ವಶ  ಮೂವರ ಬಂಧನ

Sirsi : ಸಾಗುವಾನಿ ನಾಟ ವಶ: ಮೂವರ ಬಂಧನ.

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ :- ಅಕ್ರಮವಾಗಿ ಸಾಗುವಾನಿ ಮರ ಕಡಿದ ಮೂರು ಜನ ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ (sirsi) ಶಿವಳ್ಳಿ ಗ್ರಾಮದಲ್ಲಿ ನಡೆದಿದೆ.

ಬಂಧಿರಿಂದ ಲಕ್ಷಾಂತರ ಮೌಲ್ಯದ ನಾಲ್ಕು ಸಾಗವಾನಿ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಶಿವಳ್ಳಿಯ ಮಂಜುನಾಥ ಕೃಷ್ಣ ಮೋಗೇರ (39), ಕೃಷ್ಣ ರಾಮಚಂದ್ರ ಪಟಗಾರ (33) , ಶಾಂತಪ್ಪ ರಾಮಣ್ಣ ತಳವಾರ( 45) ಬಂಧಿತ ಆರೋಪಿಗಳಾಗಿದ್ದಾರೆ.

ಇದನ್ನೂ ಓದಿ:-Uttara kannda ಮೀಟರ್ ಬಡ್ಡಿ ಕಿರುಕುಳ ಮುಂಡಗೋಡಿನಲ್ಲಿ 18 ಜನರ ಬಂಧನ

ಶಿರಸಿ ತಾಲೂಕು ಶಿವಳ್ಳಿ ಗ್ರಾಮದ ಅರಣ್ಯ ಸ.ನಂ-139ರಲ್ಲಿ ಅನಧಿಕೃತವಾಗಿ ಸಾಗವಾನಿ ಜಾತಿಯ ಮರವನ್ನು ಕಡಿದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅಜ್ಜಯ್ಯ ಜಿ ಆರ್ , ಎಸ್. ಎಸ್. ನಿಂಗಾಣಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಶಿರಸಿ ಉಪ ವಿಭಾಗ, ಶಿರಸಿ ಇವರ ಮಾರ್ಗದರ್ಶನದಲ್ಲಿ ಬನವಾಸಿಯ ವಲಯ ಅರಣ್ಯಾಧಿಕಾರಿ ಭವ್ಯಾ ನಾಯ್ಕ,ಇವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.

Astrology advertisement
Astrology advertisement

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ