ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Sirsi :ಶಿರಸಿ ನಗರಸಭೆ ಸದಸ್ಯ, ಕಂದಾಯ ಅಧಿಕಾರಿ ಲೋಕಾಯುಕ್ತ ಬಲೆಗೆ 

ಕಾರವಾರ :- ಮನೆ ಜಾಗದ ದಾಖಲೆ ಮಾಡಿಕೊಡಲು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ (sirsi)ನಗರಸಭೆ ಅಧಿಕಾರಿ ಹಾಗೂ ನಗರಸಭೆ ಸದಸ್ಯ ಮೂರು ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಹಣದ ಸಮೇತ ಬಿದ್ದಿದ್ದಾರೆ.
08:15 PM Jul 16, 2025 IST | ಶುಭಸಾಗರ್
ಕಾರವಾರ :- ಮನೆ ಜಾಗದ ದಾಖಲೆ ಮಾಡಿಕೊಡಲು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ (sirsi)ನಗರಸಭೆ ಅಧಿಕಾರಿ ಹಾಗೂ ನಗರಸಭೆ ಸದಸ್ಯ ಮೂರು ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಹಣದ ಸಮೇತ ಬಿದ್ದಿದ್ದಾರೆ.

Sirsi :ಶಿರಸಿ ನಗರಸಭೆ ಸದಸ್ಯ, ಕಂದಾಯ ಅಧಿಕಾರಿ ಲೋಕಾಯುಕ್ತ ಬಲೆಗೆ 

Advertisement

ಕಾರವಾರ :- ಮನೆ ಜಾಗದ ದಾಖಲೆ ಮಾಡಿಕೊಡಲು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ (sirsi)ನಗರಸಭೆ ಅಧಿಕಾರಿ ಹಾಗೂ ನಗರಸಭೆ ಸದಸ್ಯ ಮೂರು ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಹಣದ ಸಮೇತ ಬಿದ್ದಿದ್ದಾರೆ.

ನಗರಸಭೆ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಗಣಪತಿ ನಾಯ್ಕ ಹಾಗೂ ನಗರಸಭೆ ಕಂದಾಯ ಅಧಿಕಾರಿ ಆರ್.ಎಂ.ವೆರ್ಣೇಕರ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದವರಾಗಿದ್ದಾರೆ.

ರಮೇಶ ಹೆಗಡೆ ಎಂಬುವವರ ದೂರಿನ ಮೇಲೆ ಲೋಕಾಯುಕ್ತ ಎಸ್.ಪಿ ಕುಮಾರಚಂದ ಹಾಗೂ ಇನ್ಸ್ ಪೆಕ್ಟರ್ ವಿನಾಯಕ ಬಿಲ್ಲವ ನೇತೃತ್ವದಲ್ಲಿ ಈ ದಾಳಿ  ನಡೆದಿದೆ.

Advertisement

ಮನೆ ಜಾಗದ ದಾಖಲೆ ಪತ್ರ ಸರಿಪಡಿಸಿ ನೀಡುವ  ಸಂಬಂಧಿಸಿದಂತೆ  ಮೂರು ಲಕ್ಷ ಹಣವನ್ನು ಕಂದಾಯ ಅಧಿಕಾರಿ ವರ್ಣೇಕರ್  ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಗಣಪತಿ ನಾಯ್ಕ ರಮೇಶ್ ಹೆಗಡೆ ಗೆ ಬೇಡಿಕೆ ಇಟ್ಟಿದ್ದರು.

ಇದನ್ನೂ ಓದಿ:-Sirsi:ಅಳಿಯನಿಂದಲೇ ಅತ್ತೆಯ ಕೊಲೆ-ಆಸ್ತಿ ಜಗಳದಲ್ಲಿ ಹೋಯ್ತು ವೃದ್ದೆಯ ಪ್ರಾಣ

ಕೊಡಲು ತಡವಾಗಿದ್ದಕ್ಕೆ ದಾಖಲೆಪತ್ರ ಬೇರೆಯವರ ಹೆಸರಿಗೆ ಮಾಡುವ ಬೆದರಿಕೆ ಒಡ್ಡಿದ್ದರು. ಕೊನೆಗೆ ಲೋಕಾಯುಕ್ತಕ್ಕೆ ದೂರು ನೀಡಿ ಶಿರಸಿಯ ಎಪಿಎಮ್ ಸಿ ಭಾಗದ ಜಯನಗರ ಬಡಾವಣೆಯಲ್ಲಿ ಹಣ ನೀಡುವಾಗ ಲೋಕಾಯುಕ್ತರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ:-Sirsi:ಶಿರಸಿ ನಗರಸಭೆಯಲ್ಲಿ 21 ಲಕ್ಷ ಮೌಲ್ಯದ ಐರನ್ ಪೈಪ್ ಕಳ್ಳತನ ಪ್ರಕರಣ-ನಗರಸಭೆಕಮಿಷಿನರ್ ,ಮಾಜಿ ಅಧ್ಯಕ್ಷ ,ಸದಸ್ಯರು ಸೇರೆ ಏಳು ಜನ ಆರೋಪಿಗಳು!

ಇನ್ನು ಮಾಜಿ ನಗರಸಭೆ ಅಧ್ಯಕ್ಷ ಹಾಗೂ ಹಾಲಿ  ಸದಸ್ಯನಾಗಿದ್ದ ಗಣಪತಿ ನಾಯ್ಕ ಈ ಹಿಂದೆ ನಗರಸಭೆ ಕಬ್ಬಿಣದ ಪೈಪ್ ಗಳನ್ನು ಕದ್ದು ಮಾರಾಟ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದನು. ನ್ಯಾಯಾಲಯದಲ್ಲಿ ಈತನಿಗೆ ಜಾಮೀನು ಸಹ ದೊರೆತಿರಲಿಲ್ಲ. ಆದರೇ ಇದೀಗ ಲಂಚ ಪಡೆಯುವಾಗ ಲೋಕಾಯುಕ್ತರು ಅಧಿಕಾರಿಯೊಂದಿಗೆ ಈತನನ್ನು ಸಹ ವಶಕ್ಕೆ ಪಡೆದಿದ್ದಾರೆ.

Advertisement
Tags :
KarnatakalokayukthaNewsSirsiUttara Kannadaಕರ್ನಾಟಕಲೋಕಾಯುಕ್ತ ದಾಳಿ
Advertisement
Next Article
Advertisement