Kumta ರೈತನಿಗೆ ಪರಿಹಾರ ನೀಡದ ತಾಲೂಕು ಆಡಳಿತ ಕುಮಟಾ ಎಸಿ ಕಚೇರಿ ಜಪ್ತಿ!
ವರದಿ:-ನಟರಾಜ್ ಕುಮಟಾ.
Kumta News 06 November 2024 :- ರೈತರೊಬ್ಬರ( farmer) ಜಮೀನನ್ನು ಸಣ್ಣ ನೀರಾವರಿ ಯೋಜನೆಗೆ ವಶಪಡಿಸಿಕೊಂಡು ಪರಿಹಾರ ನೀಡದೇ ನಿರ್ಲಕ್ಷ ಮಾಡಿದ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಎಸಿ ಕಚೇರಿಯನ್ನು ಜಪ್ತಿ ಪಡಿಸಿಕೊಳ್ಳಲು ಕುಮಟಾದ JMFC (JMFC Court )ನ್ಯಾಯಾಲಯ ಆದೇಶ ನೀಡಿದ್ದು ಇಂದು ಕೋರ್ಟ ಸಿಬ್ಬಂದಿಗಳು ಜಪ್ತಿ ಪಡಿಸಿಕೊಂಡರು.
ಇದನ್ನೂ ಓದಿ:-Kumta Breaking News :ಮದ್ಯದ ಅಮಲ್ಲಿ ಕೊಲೆ ಆರೋಪಿಗಳ ಬಂಧನ.
ಗೋಕರ್ಣದಲ್ಲಿ (Gokarna) ಕುಡಿಯುವ ನೀರಿನ (watar )ಯೋಜನೆಗಾಗಿ ಸಣ್ಣ ನೀರಾವರಿ ಇಲಾಖೆ ಅಂಕೋಲ -ಗೋಕರ್ಣ ಭಾಗದಲ್ಲಿ ಪೈಪ್ ಲೈನ್ ಅಳವಡಿಕೆ ಮಾಡಿತ್ತು.
ಇದನ್ನೂ ಓದಿ:-Daily Astrology :ದಿನ ಭವಿಷ್ಯ 06 November 2024
ಈ ಸಂದರ್ಭದಲ್ಲಿ ಅಂಕೋಲದ ಗುಂಡಬಾಳ ದಲ್ಲಿ ರೈತ ಉದಯ್ ಬಾಳಗಿ ಎಂಬುವವರ ನಾಲ್ಕು ಗುಂಟೆ ಜಾಗವನ್ನು ತಾಲೂಕು ಆಡಳಿತ ಪಡೆದುಕೊಂಡಿತ್ತು. ಆದರೇ ಇವರಿಗೆ ಪರಿಹಾರ ನೀಡಿರಲಿಲ್ಲ.
ಇದನ್ನೂ ಓದಿ:-Kumta: ಅಬ್ಬರದ ಮಳೆಗೆ ಬೆಳಗಾಗುವುದರೊಳಗೆ ರಸ್ತೆ ತುಂಬ ಕಲ್ಲು!
ಈ ಹಿನ್ನಲೆಯಲ್ಲಿ 2022 ರಲ್ಲಿ ಕುಮಟಾ JMC ಕೋರ್ಟ ನಲ್ಲಿ ಉದಯ್ ರವರು ದಾವೆ ಹೂಡಿದ್ದರು.
ತಾಲೂಕು ಆಡಳಿತ ಹತ್ತು ಲಕ್ಷದ ಐವತ್ತೆಂಟು ಸಾವಿರದ ಇನ್ನೂರ ತೊಂಬತ್ತೈದು ರೂ ಗಳನ್ನು ನೋಡುವಂತೆ ಆದೇಶಿಸಿತ್ತು.
ಆದೇಶ ನೀಡಿದರೂ ಪರಿಹಾರ ನೀಡದ ಹಿನ್ನಲೆಯಲ್ಲಿ ಕೋರ್ಟ ಕುಮಟಾ ಎಸಿ ಕಚೇರಿಯನ್ನು ಜಪ್ತಿ ಪಡಿಸಿಕೊಳ್ಳುವಂತೆ ಆದೇಶ ಮಾಡಿದ್ದು, ಇಂದು ಕೋರ್ಟನ ಸಿಬ್ಬಂದಿಗಳು ಎಸಿ ಕಚೇರಿಗೆ ರೈತ ಉದಯ್ ಬಾಳಗಿ ರವರೊಂದಿಗೆ ತೆರಳಿ ಕಚೇರಿಯ ಪೀಠೋಪಕರಣ , ಕಂಪ್ಯೂಟರ್ , ಸೇರಿದಂತೆ ಕೊಠಡಿಯನ್ನು ಜಪ್ತಿ ಪಡಿಸಿಕೊಂಡಿದೆ.
Feed: invalid feed URL