ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karwar|ಗಣೇಶನ ದುಡ್ಡಿಗಾಗಿ ಬಡಿದಾಡಿಕೊಂಡ ಸಹೋದರರು| ಸಾವಿನಲ್ಲಿ ಅಂತ್ಯ

ಗಣಪತಿ ದುಡ್ಡಿಗಾಗಿ ಬಡಿದಾಡಿಕೊಂಡ ಸಹೋದರರು ಕೊಲೆಯಲ್ಲಿ ಅಂತ್ಯ Brothers' quarrel over Ganpati money ends in death
06:43 PM Sep 07, 2024 IST | ಶುಭಸಾಗರ್

ಕಾರವಾರ  :- ಮನೆಯಲ್ಲಿ ಗಣೇಶ ಪೂಜೆ (Ganesha puje)ಹಾಗೂ ದೇವರಿಗೆ ಇಟ್ಟ ಹಣದ (Money)ವಿಚಾರದಲ್ಲಿ ಸಹೋದರರ ನಡುವೆ ಗಲಾಟೆ ಯಾಗಿ ಹತ್ಯೆಯಲ್ಲಿ ಅಂತ್ಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ (Karwar) ಸಾಯಿಕಟ್ಟಾ ಬಳಿಯ ಬಿಂದು ಮಾಧವ ದೇವಸ್ಥಾನದ ಬಳಿ ನಡೆದಿದೆ.

Advertisement

ಸಂದೇಶ್ ಪ್ರಭಾಕರ್ ಬೋರ್ಕರ್ ಹತ್ಯೆಗೊಳಗಾದ ವ್ಯಕ್ತಿಯಾಗಿದ್ದು ಈತನ ಚಿಕ್ಕಪ್ಪನ ಮಗ ಮನೀಶ್ ಕಿರಣ್ ಬೋರ್ಕರ ಹತ್ಯೆ ಮಾಡಿದ ಸಹೋದರನಾಗಿದ್ದಾನೆ.

ಇಂದು ಮಧ್ಯಾಹ್ನ ಗಣಪತಿ ಪೂಜೆ ನಂತರ ಪ್ರಭಾಕರ್ , ಮನೋಹರ್ ಬೋರ್ಕರ್ ರವರ ಮಕ್ಕಳು ಪೂಜೆಗೆ ಇಟ್ಟಿದ್ದ ಹಣದ ಬಗ್ಗೆ ಗಲಾಟೆ ಮಾಡಿಕೊಂಡು ಕೈ ಕೈ ಮಿಲಾಯಿಸಿಕೊಂಡಿದ್ದಾರೆ.

Advertisement

ಇದನ್ನೂ ಓದಿ:- Bhatkal| ದಾನದ ಹೆಸರಲ್ಲಿ ಸುಳ್ಳು ಪ್ರತಿಷ್ಟೆತೋರಿದ ವ್ಯಕ್ತಿಗೆ ಹಣ ಮರಳಿಸಿ ಸ್ವಾಭಿಮಾನ ತೋರಿದ ಮಹಿಳೆಯರು

ಈವೇಳೆ ಪ್ರಭಾಕರ್ ಹಿರಿಯ ಮಗ ಸಂದೇಶ್ ರವರಿಗೆ ಮನೋಹರ್ ರವರ ಕಿರಿಯ ಪುತ್ರ ಚಾಕು ಇರಿದಿದ್ದಾನೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಆತ ಸಾವು ಕಂಡಿದ್ದು ,ಚಾಕು ಇರಿದ
ಮನೀಶ್ ಕಿರಣ್ ಹಾಗೂ ಆತನಿಗೆ ಸಹಕಾರ ನೀಡಿದವರನ್ನು ಕಾರವಾರ ನಗರ ಠಾಣೆ ಪೊಲೀಸರು ಬಂಧಿಸಿದ್ದು ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
ganapathi festivalKarwarMoneyUttra kanndaಗಣಪತಿ ಪೂಜೆಗಲಾಟೆ
Advertisement
Next Article
Advertisement