Karwar:ಕದ್ರಾ ಜಲಾಶಯದಲ್ಲಿ ಬಾಗೀನದೊಂದಿಗೆ ಮೌನವಾಗಿ ನಿಂತ ಡಿ.ಸಿ-ನಂತರ ಹೇಳಿದ್ದೇನು ಗೊತ್ತಾ
Karwar:ಕದ್ರಾ ಜಲಾಶಯದಲ್ಲಿ ಬಾಗೀನದೊಂದಿಗೆ ಮೌನವಾಗಿ ನಿಂತ ಡಿ.ಸಿ-ನಂತರ ಹೇಳಿದ್ದೇನು ಗೊತ್ತಾ?
ಕಾರವಾರ:-ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ (karwar) ಸುರಿದ ಭಾರಿ ಮಳೆಯಿಂದಾಗಿ ಕಾಳಿ ನದಿಗೆ (kali river)ಅಡ್ಡಲಾಗಿ ಕಟ್ಟಿರುವ ಕದ್ರಾ ಜಲಾಶಯಕ್ಕೆ ನೀರು ಹರಿದುಬಂದಿದ್ದು ಒಂದು ಗೇಟನ್ನು ತೆರದೆ ನೀರು ಬಿಡಲಾಗಿದ್ದು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಹಾಗೂ ಕಾರವಾರದ ಶಾಸಕ ಸತೀಶ್ ಸೈಲ್ ಕಾಳಿ ನದಿಗೆ ಬಾಗಿನ ಅರ್ಪಣೆ ಮಾಡಿದರು.
ಜಲಾಶಯದ ಗರಿಷ್ಟ ನೀರಿನ ಪ್ರಮಾಣ 34.5 ಮೀಟರ್ ಇದ್ದು ಜಲಾಶಯದಲ್ಲಿ 31 ಮೀಟರ್ ನೀರು ಶೇಖರಣೆಯಾಗಿದೆ. ಮೇ ತಿಂಗಳಿನಲ್ಲಿಯೇ ಜಲಾಶಯದ ನೀರಿನ ಪ್ರಮಾಣ ಹೆಚ್ಚಾಗಿರುವ ಹಿನ್ನಲೆಯಲ್ಲಿ ಇಂದು ಅಲ್ಪ ಪ್ರಮಾಣದ ನೀರು ಬಿಡಲಾಗಿದೆ.ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವ ಕಾರಣ ಜಿಲ್ಲಾಧಿಕಾರಿ ಅಧಿಕಾರಿಗಳ ಸಭೆ ನಡೆಸಿದ್ದು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಬಾಗೀನದೊಂದಿಗೆ ಮೌನವಾಗಿ ನಿಂತ ಜಿಲ್ಲಾಧಿಕಾರಿ.ಏನಂದ್ರು?
ಇನ್ನು ಕಾಳಿ ನದಿಗೆ ಬಾಗಿನ ಅರ್ಪಣೆ ಮಾಡುವ ಸಂದರ್ಭದಲ್ಲಿ ಕೈಯಲ್ಲಿ ಬಾಗಿನ ಹಿಡಿದುಕೊಂಡು ಕಾಳಿ ನದಿಗೆ ತೊಂದರೆಯಾಗದಂತೆ ಬೇಡಿಕೊಂಡ ಜಿಲ್ಲಾಧಿಕಾರಿ ಒಂದು ನಿಮಿಷ ಮೌನದಲ್ಲೇ ಬೇಡಿಕೊಂಡರು.
ಇನ್ನು ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮುಂಬರುವ ನಾಲ್ಕು ದಿನ ರೆಡ್ ಅಲರ್ಟ ಅನ್ನು ಹವಾಮಾನ ಇಲಾಖೆ ನೀಡಿದೆ. KPC ರವರಿಗೆ ಜಿಲ್ಲಾಡಳಿತ ನಿಗದಿ ಮಾಡಿದ ಮಟ್ಟದಲ್ಲಿ ನೀರು ಬಿಡಲು ಸೂಚನೆ ನೀಡಲಾಗಿದೆ. ಹಂತ ಹಂತವಾಗಿ ನೀರು ಬಿಡುಗಡೆ ಮಾಡಲಾಗುತ್ತದೆ ಎಂದರು.