Karwar: ಜೀವ ಬೆದರಿಕೆ ಇದ್ರೂ ಸರ್ಕಾರ ಗನ್ ಮ್ಯಾನ್ ನೀಡುತ್ತಿಲ್ಲ-ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಆರೋಪ.
Karwar: ಜೀವ ಬೆದರಿಕೆ ಇದ್ರೂ ಸರ್ಕಾರ ಗನ್ ಮ್ಯಾನ್ ನೀಡುತ್ತಿಲ್ಲ-ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಕಿಡಿ

ಕಾರವಾರ:- ಜೀವ ಬೆದರಿಕೆಯಿದ್ರೂ ಬಿಜೆಪಿ (BJP)ರಾಜ್ಯ ಉಪಾಧ್ಯಕ್ಷೆ, ಕಾರವಾರದ ಮಾಜಿ ಶಾಸಕಿ ರೂಪಾಲಿ ನಾಯ್ಕ್ಗೆ ರಕ್ಷಣೆಗೆ ಗನ್ಮ್ಯಾನ್ ನೀಡದೇ ನಿರ್ಲಕ್ಷ ಮಾಡಲಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಇಂದು ಕಾರವಾರದಲ್ಲಿ(karwar) ಮಾತನಾಡಿದ ಅವರು ಉತ್ತರ ಕನ್ನಡ ಎಸ್.ಪಿ ಹಾಗೂ ಗೃಹ ಇಲಾಖೆಗೆ ಗನ್ ಮ್ಯಾನ್ ನೀಡುವಂತೆ ಮನವಿ ಮಾಡಿದ್ದೇನೆ .ಆದರೇ ಸ್ಥಳೀಯ ರಾಜಕೀಯ ಪಿತೂರಿಯಿಂದ ಗನ್ ಮ್ಯಾನ್ ನೀಡಲು ಆದೇಶವಿದ್ರೂ ಗನ್ ಮ್ಯಾನ್ ನೀಡಲು ರಾಜ್ಯ ಸರಕಾರದಿಂದಲೇ ಅಡ್ಡಿ ಮಾಡಲಾಗಿದೆ.
ಇದನ್ನೂ ಓದಿ:-Karnataka: ಆನಂದ್ ಗುರುಜಿ ಕಾರು ಅಡ್ಡಗಟ್ಟಿ ಬ್ಲಾಕ್ ಮೇಲ್ ! ದಿವ್ಯ ವಸಂತ ಸೇರಿ ಇಬ್ಬರ ವಿರುದ್ಧ ದೂರು
ನಾನು ಶಾಸಕಿಯಾಗಿದ್ದಾಗ ಮೊದಲು ಗನ್ ಮ್ಯಾನ್ ಸಿಗದಿದ್ರೂ ಬಳಿಕ ಜೀವ ಬೆದರಿಕೆ ಹಿನ್ನೆಲೆ ಗನ್ಮ್ಯಾನ್ ನೀಡಲಾಗಿತ್ತು.ಆದರೆ, ಚುನಾವಣೆ ಬಳಿಕ ಯಾವುದೋ ಕಾರಣ ನೀಡಿ ಗನ್ಮ್ಯಾನ್ಗಳನ್ನು ಹಿಂಪಡೆಯಲಾಗಿತ್ತು.
ಹಿಂದೆ ಅಪರಿಚಿತರಿಂದ ವಿವಿಧ ವಾಹನಗಳಲ್ಲಿ ಫಾಲೋ, ಆಕ್ಸಿಡೆಂಟ್ ಮಾಡಿಸಲು ಯತ್ನ ನಡೆದಿತ್ತು.ವಿಧಾನಸಭೆ, ಲೋಕಸಭೆ ಚುನಾವಣೆ ವೇಳೆ ಸೇರಿದಂತೆ ವಿವಿಧ ಸಂದರ್ಭದಲ್ಲಿ ಜೀವಕ್ಕೆ ಹಾನಿ ಮಾಡುವ ಪ್ರಯತ್ನ ನಡೆದಿತ್ತು.
ಇಂದಿಗೂ ಜೀವ ಬೆದರಿಕೆ ಸ್ಥಿತಿಯಿದ್ರೂ ಸರಕಾರ, ಪೊಲೀಸ್ ಇಲಾಖೆಯಿಂದ ಗನ್ಮ್ಯಾನ್ ನೀಡುತ್ತಿಲ್ಲ.ಈಗಲೂ ಜೀವಭಯದ ವಾತಾವರಣವಿದ್ದು, ಗೃಹಸಚಿವರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ಮನವಿ ಪತ್ರ ನೀಡಲಾಗಿದೆ,ಆದರೂ, ಜೀವ ರಕ್ಷಣೆಗಾಗಿ ಈವರೆಗೂ ಯಾವುದೇ ಗನ್ಮಾನ್ ನೀಡಿಲ್ಲ.ನಾನು ರಾಜಕೀಯ ಕ್ಷೇತ್ರದಲ್ಲಿರುವಾಗ ಬೇರೆ ಬೇರೆ ರೀತಿಯ ವಿಷಯಗಳು ನಡೆಯುತ್ತಿದ್ದು, ಹಿಂದೆಯೂ ನಡೆಯುತ್ತಿತ್ತು,ಪ್ರಸ್ತುತ ಬೇರೆ ರೂಪದಲ್ಲಿ ಕುತಂತ್ರಗಳು ನಡೆಯುತ್ತಿದ್ದು, ಅದರ ಕಾರಣ ಮನವಿ ಮಾಡಿದ್ದೆ.
ಈ ಹಿಂದೆ ಸುಮನಾ ಪೆನ್ನೇಕರ್ ಅವರು ಎಸ್ಪಿಯಾಗಿದ್ದಾಗ ಗನ್ಮ್ಯಾನ್ ಜತೆ ಮಹಿಳಾ ಪೊಲೀಸ್ ಸಿಬ್ಬಂದಿ ನೇಮಿಸಿದ್ದರು.ರಾಜಕೀಯ ವಿರೋಧಿಗಳಿಂದ ಈಗಲೂ ಕುಮ್ಮಕ್ಕು ನಡೆಯುತ್ತಿದ್ದು, ಪೊಲೀಸ್ ಅಧಿಕಾರಿಗಳಿಗೂ ಮಾಹಿತಿಯಿದೆ ಎಂದ ರೂಪಾಲಿ ನಾಯ್ಕ್ ಆರೋಪ ಮಾಡಿದ್ದಾರೆ.
